ತಾಳಕ್ಕೆ ತಕ್ಕಂತೆ ಕುಣಿವ ಪೆನ್ಸಿಲ್‌!


Team Udayavani, Jul 12, 2018, 6:00 AM IST

1.jpg

ಕೈ ಹೇಳಿದಂತೆ ಪೆನ್ಸಿಲ್‌ ಕೇಳುತ್ತೆ. ಬೆರಳುಗಳಿಂದ ಬಂಧಿಯಾಗಿರುವ ಪೆನ್ಸಿಲ್‌ ಹಾಗೆ ಕೇಳಬೇಕು ಕೂಡ. ಆದರೆ, ಕೈಬೆರಳುಗಳು ದೂರ ಇದ್ದಾಗಲೂ, ಅವುಗಳ ಮಾತನ್ನು ಪೆನ್ಸಿಲ್‌ ಕೇಳುತ್ತೆ! ಇದು ಹೇಗೆ ಗೊತ್ತೇ?

ಬೇಕಾಗುವ ವಸ್ತು: ಪೆನ್ಸಿಲ್‌, ಉದ್ದದ ಖಾಲಿ ಬಾಟಲ್‌ (ಸಂಪೂರ್ಣ ಪಾರದರ್ಶಕ), ದಾರ

ಪ್ರದರ್ಶನ: ಸಭಿಕರಿಂದ ಕೆಲವೇ ಮೀಟರುಗಳ ಅಂತರದಲ್ಲಿ ಈ ಜಾದೂ ನಡೆಸಬೇಕು. ಮೊದಲು ಜಾದೂಗಾರ ತನ್ನ ಹೊಟ್ಟೆ ಅಥವಾ ಎದೆಗೆ ಸಮಾನಾಂತರವಾದ ಎತ್ತರದಲ್ಲಿರುವ ಪುಟ್ಟ ಟೇಬಲ್‌ ಮೇಲೆ ಉದ್ದದ ಖಾಲಿ ಬಾಟಲ್‌ ಇಡುತ್ತಾನೆ. ಅದರೊಳಗೆ ಬಣ್ಣದ ಪೆನ್ಸಿಲ್‌ ಅನ್ನು ನಿಧಾನಕ್ಕೆ ಇಳಿಬಿಡುತ್ತಾನೆ. ಆದರೆ ಪೆನ್ಸಿಲ್‌, ಬಾಟಲ್‌ನ ತಳ ಮುಟ್ಟುವುದಿಲ್ಲ. ಜಾದಾಗಾರ ಅಕ್ಕಪಕ್ಕದಲ್ಲಿ ತನ್ನ ಕೈಗಳನ್ನು ಮೇಲಕ್ಕೆ ಕೆಳಕ್ಕೆ ಆಡಿಸಿದಂತೆ,
ಪೆನ್ಸಿಲ್‌ ಕೂಡ, ಬಾಟಲಿಯೊಳಗೆ ಮೇಲಕ್ಕೆ ಕೆಳಕ್ಕೆ ಆಡುತ್ತಿರುತ್ತದೆ. ಕೈಗಳು ಹೇಳಿದಂತೆ ಆ ಪೆನ್ಸಿಲ್‌ ಕೇಳುತ್ತಿರುತ್ತದೆ.

ತಯಾರಿ: ಈ ಮ್ಯಾಜಿಕ್‌ ಮಾಡುವ ಮುನ್ನ ನೀವು ಯಾವ ಬಣ್ಣದ ಅಂಗಿ ಧರಿಸಿದ್ದೀರೋ, ಅದೇ ಬಣ್ಣದ ದಾರ ಇಟ್ಟುಕೊಂಡಿರಬೇಕು. ಪೆನ್ಸಿಲ್‌ನ ತುದಿಗೆ ಆ ದಾರವನ್ನು ಕಟ್ಟಿ, ಇನ್ನೊಂದು ತುದಿಯನ್ನು ಎದೆಯ ಭಾಗದ ಅಂಗಿ ಬಟನ್‌ಗೆ ಕಟ್ಟಬೇಕು. ದಾರ ಕಟ್ಟಿದ ಪೆನ್ಸಿಲ್‌ ಭಾಗ ಕೆಳಮುಖವಾಗುವಂತೆ, ನಿಧಾನಕ್ಕೆ ಅದನ್ನುಬಾಟಲಿಯಲ್ಲಿ ಬಿಡಬೇಕು. ಪೆನ್ಸಿಲ್‌ ಅನ್ನು  ತಳ ಮುಟ್ಟಲು ಬಿಡದೇ, ಅರ್ಧಕ್ಕೆ ನಿಲ್ಲಿಸುತ್ತಾ, ಮತ್ತೆ ಮೇಲಕ್ಕೆ ಎಳೆದುಕೊಳ್ಳಬೇಕು. ದೇಹವನ್ನು ಹಿಂದೆ ಮುಂದೆ ಬಾಗಿಸಿದ ಹಾಗೆ, ಪೆನ್ಸಿಲ್‌ನ ಪವಾಡಸದೃಶ ಚಲನೆ ಇರುತ್ತದೆ. ಸಭಿಕರ ದೃಷ್ಟಿಯನ್ನು ಬೇರೆಡೆ ಒಯ್ಯಲು, ಪೆನ್ಸಿಲ್‌ನ ತಾಳಕ್ಕೆ ತಕ್ಕಂತೆ, ಅತ್ತಿತ್ತ ಕೈಯನ್ನು ಮೇಲಕ್ಕೆ ಕೇಳಕ್ಕೆ ಮಾಡುತ್ತಿರಬೇಕು. ಆಗ ಅವರಿಗೆ ಕೈಗಳು ಹೇಳಿದಂತೆ, ಪೆನ್ಸಿಲ್‌ ಕೇಳುತ್ತಿದೆಯಂದು ಅನ್ನಿಸತೊಡಗುತ್ತದೆ. ಹೀಗೆ ಕೆಲ ನಿಮಿಷ ಅವರನ್ನು ನಂಬಿಸಿ, ನಂತರ ಜಾದೂ ಮುಗಿಸುವಾಗ, ಪೆನ್ಸಿಲ್‌ ಅನ್ನು
ಎತ್ತಿಕೊಂಡು, ಯಾರ ಕಣ್ಣಿಗೂ ಬೀಳದ ಹಾಗೆ ಕೈಬೆರಳಲ್ಲೇ ದಾರ ಕತ್ತರಿಸಿ.

ವಿನ್ಸೆಂಟ್‌ ಲೋಬೋ

ಟಾಪ್ ನ್ಯೂಸ್

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.