ಬಿರುಸಿನ ಮಳೆಗೆ ಬೆಚ್ಚನೆ ಶಾವಿಗೆ


Team Udayavani, Jul 25, 2018, 6:00 AM IST

5.jpg

ಹೆತ್ತವರೊಂದಿಗೆ ಮಕ್ಕಳೂ ಅತ್ಯುತ್ಸಾಹದಿಂದ ಸೇರಿ ತಯಾರಿಸುವ ತಿನಿಸೆಂದರೆ ಶಾವಿಗೆ. ಅಮ್ಮನಿಗೆ ಹಿಟ್ಟು ತಯಾರಿಸುವ ಕೆಲಸವಾದರೆ, ಶಾವಿಗೆ ಯಂತ್ರವನ್ನು ಶುಚಿಗೊಳಿಸುವುದು ಅಪ್ಪನ ಕೆಲಸ. ಶಾವಿಗೆ ಒತ್ತುವುದಕ್ಕೆ ಮಕ್ಕಳು ನಾ ಮುಂದು, ತಾ ಮುಂದು ಎಂದು ಕ್ಯೂ ನಿಂತಿರುತ್ತವೆ! ಇಂಥಾ ಹಿನ್ನೆಲೆಯ ಶಾವಿಗೆಯಲ್ಲೂ ವರೈಟಿ ತಿನಿಸನ್ನು ಮಾಡಬಹುದು…  

1. ರಾಗಿ ಶಾವಿಗೆ
ಬೇಕಾದ ಸಾಮಗ್ರಿ: ರಾಗಿ ಹಿಟ್ಟು- 1ಕಪ್‌,  ನೀರು- 1ಕಪ್‌, ಉಪ್ಪು-  1/2 ಚಮಚ

ಮಾಡುವ ವಿಧಾನ: 
ರಾಗಿ ಹಿಟ್ಟನ್ನು ಒಂದು ಬಾಣಲೆಗೆ ಹಾಕಿ ಮಂದ ಉರಿಯಲ್ಲಿ ಹಸಿವಾಸನೆ ಹೋಗುವವರೆಗೂ ಹುರಿದುಕೊಳ್ಳಿ. ನಂತರ ತಣಿಸಿ. ಒಂದು ಪಾತ್ರೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಸಿ. ಅದು ಕುದಿಯುತ್ತಿರುವಂತೆ ತಣಿದ ರಾಗಿ ಹಿಟ್ಟಿಗೆ ಸ್ವಲ್ಪ ಸ್ವಲ್ಪವಾಗಿ ಸೇರಿಸಿ ಗಟ್ಟಿಯಾಗಿ ಹಿಟ್ಟನ್ನು ಕಲಸಿಕೊಳ್ಳಿ. ಈ ಹಿಟ್ಟನ್ನು ಶಾವಿಗೆ ಅಚ್ಚಿಗೆ ಹಾಕಿ ಇಡ್ಲಿ ಪ್ಲೇಟಿನಲ್ಲಿ ಚಿಕ್ಕವೃತ್ತದಂತೆ ಒತ್ತಿ ಉಗಿಯಲ್ಲಿ ಹತ್ತು ನಿಮಿಷಗಳ ಕಾಲ ಬೇಯಿಸಿ. ಆರೋಗ್ಯಕರವಾದ ರಾಗಿ ಶಾವಿಗೆಯನ್ನು ಚಟ್ನಿಯೊಂದಿಗೆ ಸವಿಯಿರಿ.

2. ಅಕ್ಕಿಹಿಟ್ಟಿನ ಶಾವಿಗೆ
ಬೇಕಾದ ಸಾಮಗ್ರಿ: ಅಕ್ಕಿಹಿಟ್ಟು- 1ಕಪ್‌, ನೀರು- 3/4ಕಪ್‌, ಉಪ್ಪು- 1ಚಮಚ, ಎಣ್ಣೆ- 2ಚಮಚ

ಮಾಡುವ ವಿಧಾನ: 
ಒಂದು ಪಾತ್ರೆಯಲ್ಲಿ ನೀರು, ಉಪ್ಪು, ಎಣ್ಣೆ ಹಾಕಿ ಕುದಿಸಿ. ಅದು ಕುದಿಯುತ್ತಿರುವಂತೆ ಅಕ್ಕಿಹಿಟ್ಟನ್ನು ಸೇರಿಸಿ. 5 ಸೆಕೆಂಡುಗಳ ಕಾಲ ನೀರು ಅಕ್ಕಿ ಹಿಟ್ಟಿನೊಂದಿಗೆ ಕುದಿಯಲು ಬಿಡಿ. ನಂತರ ಚೆನ್ನಾಗಿ ಕಲಸಿ. ಬೆಂಕಿ ಆರಿಸಿ ಒಂದು ಪ್ಲೇಟಿಗೆ ಹಿಟ್ಟನ್ನು ವರ್ಗಾಯಿಸಿ. ಬೆಚ್ಚಗೆ ಇರುವಾಗಲೇ ಚೆನ್ನಾಗಿ ನಾದಿಕೊಂಡು 5 ಚಿಕ್ಕ ಉಂಡೆಗಳಾಗಿ ವಿಭಾಗಿಸಿ. ಈ ಉಂಡೆಗಳನ್ನು ಹಬೆಯಲ್ಲಿ 10ರಿಂದ 15ನಿಮಿಷಗಳ ಕಾಲ ಬೇಯಿಸಿ. ಬೆಂದ ಉಂಡೆಯನ್ನು ಶಾವಿಗೆ ಅಚ್ಚಿನಲ್ಲಿ ಹಾಕಿ ಒತ್ತಿ. ಬಿಸಿ ಅಕ್ಕಿಹಿಟ್ಟಿನ ಶಾವಿಗೆ ಚಟ್ನಿ, ಸಾಂಬಾರಿನೊಂದಿಗೆ ಸವಿಯಲು ಸಿದ್ಧ.

3. ರವೆ ಶಾವಿಗೆ
ಬೇಕಾದ ಸಾಮಗ್ರಿ: ಮಧ್ಯಮ ರವೆ- 2 ಕಪ್‌, ನೀರು- 2 ಕಪ್‌, ಉಪ್ಪು- 1 ಚಮಚ

ಮಾಡುವ ವಿಧಾನ: 
ಒಂದು ಪಾತ್ರೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಸಿ. ಅದು ಕುದಿಯುತ್ತಿರುವಂತೆ ಅದಕ್ಕೆ ರವೆಯನ್ನು ಸೇರಿಸಿ ಗಟ್ಟಿಯಾಗಿ ಹಿಟ್ಟನ್ನು ಕಲಸಿಕೊಳ್ಳಿ. ಈ ಹಿಟ್ಟನ್ನು ಶಾವಿಗೆ ಅಚ್ಚಿಗೆ ಹಾಕಿ ಇಡ್ಲಿ ಪ್ಲೇಟಿನಲ್ಲಿ ಚಿಕ್ಕ ಚಿಕ್ಕ ವೃತ್ತದಂತೆ ಒತ್ತಿ ಉಗಿಯಲ್ಲಿ ಹತ್ತು ನಿಮಿಷಗಳ ಕಾಲ ಬೇಯಿಸಿ. ದಿಡೀರ್‌ ರವೆ ಶಾವಿಗೆಯನ್ನು ಚಟ್ನಿಯೊಂದಿಗೆ ಸವಿಯಿರಿ.

ಸುಮನ್‌ ದುಬೈ

ಟಾಪ್ ನ್ಯೂಸ್

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.