ಸೈಕಲ್‌ ತಿನ್ನುವ ಮರ


Team Udayavani, Jul 26, 2018, 6:00 AM IST

5.jpg

ಅಮೆರಿಕದ ವಾಷಿಂಗ್ಟನ್‌ನ ವಾಶೋನ್‌ ಐಲ್ಯಾಂಡಿನಲ್ಲಿರುವ ಬೈಸಿಕಲ್‌ ತಿನ್ನುತ್ತಿರುವ ಮರ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅದು ಅನೇಕ ಮಂದಿ ಅನ್ವೇಷಕರಿಗೆ ಜನಪ್ರಿಯ ತಾಣವಾಗಿ ಮಾರ್ಪಟ್ಟಿದೆ. ಅದರಲ್ಲೂ ವಿಶೇಷವಾಗಿ ಬಕ್ಲಿ ಬ್ರಿಥೆಡ್‌ ಅವರ, “ರೆಡ್‌ ರೇಂಜರ್‌ ಕ್ಯಾಮ್‌ ಕಾಲಿಂಗ್‌’ ಪುಸ್ತಕವನ್ನು ಓದಿದವರಿಗೆ ಈ ಸಂಗತಿ ತಿಳಿದಿರುತ್ತದೆ. ಇಷ್ಟಕ್ಕೂ ಇದರ ಹಿನ್ನೆಲೆ ಹುಡುಕ ಹೊರಟರೆ ಒಂದು ಸ್ವಾರಸ್ಯಕರ ಕಥೆ ಸಿಗುತ್ತದೆ. 

1914ರಲ್ಲಿ ಒಬ್ಬ ಸ್ಥಳೀಯ ಯುವಕ ಮೊದಲನೇ ಮಹಾಯುದ್ಧಕ್ಕೆ ಹೋಗಿದ್ದ. ಅದಕ್ಕೆ ಮುಂಚೆ ತನ್ನ ಸೈಕಲನ್ನು ಮರಕ್ಕೆ ಕಟ್ಟಿ ಹೋಗಿದ್ದ. ಆ ಯುವಕ ಇನ್ನೆಂದಿಗೂ ಮರಳಿಬಾರದೇ ಇದ್ದುದರಿಂದ ಆ ಸೈಕಲ್‌ ಮರದಲ್ಲೇ ನೇತಾಡುವಂತಾಯಿತು. ಸುಮಾರು ವರ್ಷಗಳಿಂದ ಬೆಳೆಯುತ್ತಾ ಬಂದ ಮರವು ಸೈಕಲ್‌ನ ಅರ್ಧ ಭಾಗವನ್ನು ನುಂಗಿಹಾಕಿದ್ದು ನೋಡುಗರಿಗೆ ವಿಚಿತ್ರವಾಗಿ ಕಾಣಿಸುತ್ತದೆ. ಅಲ್ಲದೆ ಕಬ್ಬಿಣದ ಸುತ್ತಲೂ ಮರ ಹೇಗೆ ಬೆಳೆಯುತ್ತದೆ ಎಂಬುದೂ ನಂಬಲಾಗದ ಸಂಗತಿಯಾಗಿದೆ. 

ಕಳೆದ 98 ವರ್ಷಗಳಿಂದಲೂ ಈ ಸೈಕಲ್‌ ಇದೇ ಮರದಲ್ಲಿ ಇದೆ ಎಂದು ನಂಬಲಾಗಿದೆ. ಕೆಲ ಮಂದಿ ಸ್ಥಳೀಯರು ಈ ಕತೆಯನ್ನು ಅಲ್ಲಗಳೆಯುತ್ತಾರಾದರೂ ಸೈಕಲ್‌ನ ಆಕರ್ಷಣೆ ಕಡಿಮೆಯಾಗಿಲ್ಲ. ದೂರದೂರಿನಿಂದ ಅದನ್ನು ನೋಡಲು ಜನರು ಬರುತ್ತಾರೆ. 

2. ಡೈನೋಸಾರ್‌ ಗುಹೆ
ಥಾಯ್‌ಲ್ಯಾಂಡ್‌ನ‌ ತಾಮ್‌ ಲುಯಾಂಗ್‌ ಗುಹೆಯಲ್ಲಿ ಸಿಲುಕಿದ್ದ ಬಾಲಕರನ್ನು ಇತ್ತೀಚಿಗೆ ರಕ್ಷಿಸಿದ ಘಟನೆ ನೆನಪಿದೆ ತಾನೇ? ಅಂಥದ್ದೇ ಗುಹೆ ನಮ್ಮ ಭಾರತದಲ್ಲೂ ಇದೆ ಎಂದರೆ ಆಶ್ಚರ್ಯವಾಗದೇ ಇರದು. ಅದಿರೋದು ಈಶಾನ್ಯ ರಾಜ್ಯ ಮೇಘಾಲಯದಲ್ಲಿ. “ಕ್ರೆಂಪುರಿ’ ಎಂಬ ಹೆಸರಿನ ಈ ಗುಹೆ ಪ್ರಪಂಚದಲ್ಲೇ ಅತಿ ಉದ್ದವಾದ ಮರಳು ಕಲ್ಲು ಮಿಶ್ರಿತ ಗುಹೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಅದರ ಉದ್ದ 24.5 ಕಿ.ಮೀ. ಈ ಗುಹೆಯ ಉದ್ದವನ್ನು ಕಂಡುಹಿಡಿಯಲು ಅಲ್ಲಿನ ಸರ್ಕಾರ ವಿವಿಧ ದೇಶಗಳ ಸುಮಾರು 30 ಜನರನ್ನು ಒಳಗೊಂಡ ಕೇವರ್ (ಗುಹೆಗಳನ್ನು ಅನ್ವೇಷಣೆ ಮಾಡುವವರು) ಗಳನ್ನು ಕರೆಸಿತ್ತು. ಗುಹೆಯ ಉದ್ದವನ್ನು ಅಳೆಯಲು ಈ ತಂಡ ತೆಗೆದುಕೊಂಡ ಕಾಲಾವಧಿ ಸುಮಾರು ಒಂದು ತಿಂಗಳು. 

ಗುಹೆಯ ಅಧ್ಯಯನ ನಡೆಸಿದಾಗ ಆಸಕ್ತಿಕರ ವಿಷಯಗಳು ಕಂಡುಬಂದಿದ್ದವು. ಆ ಗುಹೆಯ ಒಳಗೆ ಡೈನೋಸಾರ್‌ಗಳ ಪಳೆಯುಳಿಕೆಗಳು ದೊರೆತಿದ್ದವು. ಅದರಿಂದ ಗುಹೆ ಸಾವಿರಾರು ವರ್ಷಗಳಿಗೂ ಹಳೆಯದು ಎಂದು ಅಂದಾಜಿಸಬಹುದು. ಹಿಂದೆ ಈ ಗುಹೆಯಲ್ಲಿ ಡೈನೋಸಾರ್‌ಗಳು ವಾಸಿಸುತ್ತಿದ್ದವು ಎನ್ನುವುದು ಇಲ್ಲಿನ ಸ್ಥಳೀಯರ ನಂಬಿಕೆ. ಗುಹೆಯ ಒಳಗೆ ಒಮ್ಮೆ ಹೊಕ್ಕರೆ ಹೊರಬರುವುದು ತುಂಬಾ ಕಷ್ಟವಂತೆ. ಎಲ್ಲ ದಿಕ್ಕುಗಳಿಂದಲೂ ಗುಹೆ ಒಂದೇ ರೀತಿಯಾಗಿ ಕಾಣುವುದು ಅದಕ್ಕೆ ಕಾರಣ.  

ವೆಂಕಿ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.