ಬರಿ  ಮನೆಯಲ್ಲ ಮುಚ್ಚಳದ ಮನೆ!


Team Udayavani, Aug 2, 2018, 11:50 AM IST

bari-maneyalla.jpg

ಮನೆ ಎಂದರೆ ಸಿಮೆಂಟು, ಕಲ್ಲು, ಮಣ್ಣು  ಇಟ್ಟಿಗೆಗಳಿಂದ ಮಾಡಿರಲೇಬೇಕೆಂಬ ನಿಯಮ ಎಲ್ಲೂ ಇಲ್ಲ. ಮನೆ ಎಂದರೆ ಗೋಡೆ, ಕಾಂಪೌಂಡುಗಳಿಗೆ ಸುಣ್ಣ ಬಣ್ಣ ಬಳಿದಿರಬೇಕೆಂದೂ ಇಲ್ಲ. ಅದಕ್ಕೆ ಉದಾಹರಣೆ ಈ ಮುಚ್ಚಳದ ಮನೆ. ಅರ್ಥಾತ್‌ ಬಾಟಲಿ ಮುಚ್ಚಳಗಳಿಂದ ತಯಾರಾದ ಮನೆ!

ಈ ಪುಟ್ಟ ಮನೆಯ ಗೋಡೆಗಳಿಗೆ ಸುಣ್ಣ, ಬಣ್ಣ ಬಳಿದಿಲ್ಲ. ಮೊಸಾಯಿಕ್‌ ಹೆಂಚುಗಳನ್ನು ಜೋಡಿಸಿಲ್ಲ. ಆದರೂ ಈ ಮನೆ, ಮನ ಸೆಳೆಯುವ ಬಣ್ಣಗಳಿಂದ ಆಕರ್ಷಕವಾಗಿದೆ. ನೇಯ್ಗೆಯ ಕೌಶಲ ಬಳಸಿರುವ ಚಿತ್ರಗಳೂ ಇವೆ.

ಅಚ್ಚರಿಯ ವಿಷಯವೆಂದರೆ ಈ ಕಲೆ ಸೃಷ್ಟಿಯಾಗಿರುವುದು ಸೋಡಾ, ನೀರು ಮತ್ತು ಕಿತ್ತಳೆಯ ಜ್ಯೂಸ್‌ ತುಂಬಿಡುವ ಬಾಟಲಿಗಳ ನಿರುಪಯುಕ್ತ ಮುಚ್ಚಳಗಳಿಂದ. ನಾವೆಲ್ಲಾ ಬಳಸಿ ಬಿಸಾಡುವ ಮುಚ್ಚಳಗಳಿಂದ ಈ ಕಲೆ ಸೃಷ್ಟಿಯಾಗಿದ್ದು, ಒಟ್ಟು ಮೂವತ್ತು ಸಾವಿರ ಮುಚ್ಚಳಗಳ ಬಳಕೆಯಾಗಿದೆ.

ಎಲ್ಲಿದೆ ಮುಚ್ಚಳದ ಮನೆ?: ಇಂಥ ಚಂದದ ಮನೆ ಇರುವುದು ರಷ್ಯಾದ ಕಮರ್ಚಾಗಾ ಗ್ರಾಮದಲ್ಲಿ. ಕ್ರಸ್ನೋಯಾರ್ಕ್‌ ನಗರದಿಂದ ಆಗ್ನೇಯಕ್ಕೆ ಎಂಬತ್ತು ಕಿಲೊಮೀಟರ್‌ ದೂರದಲ್ಲಿರುವ ಈ ಗ್ರಾಮದಲ್ಲಿ ಜನಸಂಖ್ಯೆ ಬಹು ವಿರಳವಾಗಿದೆ. ಚದರ ಕಿಲೋಮೀಟರ್‌ಗೆ ಮೂರು ಜನರಿದ್ದಾರೆ. ಇಂಥ ಊರಿನಲ್ಲಿ ಅಪರೂಪದ ಮನೆಯೊಂದನ್ನು ಸೃಷ್ಟಿಸಿರುವುದು ಓಲ್ಗಾ ಕೋಸ್ಟಿನಾ ಎಂಬ ಮಹಿಳೆ. 

ಉದ್ಯೋಗದಿಂದ ನಿವೃತ್ತರಾಗಿರುವ ಓಲ್ಗಾ, ಒಮ್ಮೆ ಸಮೀಪದ ಟೈಗಾದ ಕಾಡುಪ್ರದೇಶಕ್ಕೆ ಹೋಗಿದ್ದರು. ಅಲ್ಲಿ ವಿಹಾರಕ್ಕೆ ಬರುವ ಪ್ರವಾಸಿಗರು ಎಸೆದುಹೋದ ಸಾವಿರಾರು ಪ್ಲಾಸ್ಟಿಕ್‌ ಬಾಟಲಿಗಳತ್ತ ಅವರ ಲಕ್ಷÂ ಹರಿಯಿತು. ಪರಿಸರವನ್ನು ಕೆಡಿಸುವ ಈ ಬಾಟಲಿಗಳ ರಾಶಿಯನ್ನು ಕಂಡು ದುಃಖವೂ ಆಯಿತು. ಅವುಗಳನ್ನು ಬಳಸಿಕೊಂಡು ಏನಾದರೂ ಮಾಡಬೇಕು ಎಂದವರು ಯೋಚಿಸಿದರು.

ಕಸದಿಂದ ರಸ: ಓಲ್ಗಾ ಈ ಮುಚ್ಚಳಗಳನ್ನು ಸಂಗ್ರಹಿಸಲೆಂದೇ ಕಾಡಿನಲ್ಲಿ ಹಲವು ತಿಂಗಳು ತಿರುಗಾಟ ನಡೆಸಿದರು. ಮೂವತ್ತು ಸಾವಿರ ವರ್ಣರಂಜಿತ ಮುಚ್ಚಳಗಳು ಸಂಗ್ರಹವಾದಾಗ, ಇದರಿಂದ ಏನು ಮಾಡಬಹುದೆಂದು ಯೋಚಿಸಿದರು.

ಈ ಮುಚ್ಚಳಗಳನ್ನು ಬಳಸಿ, ತನ್ನ ಚಿಕ್ಕ ಮನೆಯ ಗೋಡೆಗಳನ್ನು ಕಲಾತ್ಮಕಗೊಳಿಸುವ ಯೋಚನೆ ಮೂಡಿತು. ಮರದಿಂದ ನಿರ್ಮಾಣವಾದ ಅವರ ಸರಳವಾದ ಮನೆಗೆ ಈ ಕಲಾತ್ಮಕ ವಿನ್ಯಾಸ ಅಚ್ಚಳಿಯದ ಶೋಭೆ ತಂದಿದೆ. ಸಾಂಪ್ರದಾಯಿಕ ಶೈಲಿಯ ಚಿತ್ರಗಳಿರುವ ಈ ಮನೆಯ ಗೋಡೆ ಇಂದು ಪ್ರವಾಸಿಗರ ದಂಡನ್ನು ಆಕರ್ಷಿಸುತ್ತಿದೆ. 

* ಪ.ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.