ಬರಿ  ಮನೆಯಲ್ಲ ಮುಚ್ಚಳದ ಮನೆ!


Team Udayavani, Aug 2, 2018, 11:50 AM IST

bari-maneyalla.jpg

ಮನೆ ಎಂದರೆ ಸಿಮೆಂಟು, ಕಲ್ಲು, ಮಣ್ಣು  ಇಟ್ಟಿಗೆಗಳಿಂದ ಮಾಡಿರಲೇಬೇಕೆಂಬ ನಿಯಮ ಎಲ್ಲೂ ಇಲ್ಲ. ಮನೆ ಎಂದರೆ ಗೋಡೆ, ಕಾಂಪೌಂಡುಗಳಿಗೆ ಸುಣ್ಣ ಬಣ್ಣ ಬಳಿದಿರಬೇಕೆಂದೂ ಇಲ್ಲ. ಅದಕ್ಕೆ ಉದಾಹರಣೆ ಈ ಮುಚ್ಚಳದ ಮನೆ. ಅರ್ಥಾತ್‌ ಬಾಟಲಿ ಮುಚ್ಚಳಗಳಿಂದ ತಯಾರಾದ ಮನೆ!

ಈ ಪುಟ್ಟ ಮನೆಯ ಗೋಡೆಗಳಿಗೆ ಸುಣ್ಣ, ಬಣ್ಣ ಬಳಿದಿಲ್ಲ. ಮೊಸಾಯಿಕ್‌ ಹೆಂಚುಗಳನ್ನು ಜೋಡಿಸಿಲ್ಲ. ಆದರೂ ಈ ಮನೆ, ಮನ ಸೆಳೆಯುವ ಬಣ್ಣಗಳಿಂದ ಆಕರ್ಷಕವಾಗಿದೆ. ನೇಯ್ಗೆಯ ಕೌಶಲ ಬಳಸಿರುವ ಚಿತ್ರಗಳೂ ಇವೆ.

ಅಚ್ಚರಿಯ ವಿಷಯವೆಂದರೆ ಈ ಕಲೆ ಸೃಷ್ಟಿಯಾಗಿರುವುದು ಸೋಡಾ, ನೀರು ಮತ್ತು ಕಿತ್ತಳೆಯ ಜ್ಯೂಸ್‌ ತುಂಬಿಡುವ ಬಾಟಲಿಗಳ ನಿರುಪಯುಕ್ತ ಮುಚ್ಚಳಗಳಿಂದ. ನಾವೆಲ್ಲಾ ಬಳಸಿ ಬಿಸಾಡುವ ಮುಚ್ಚಳಗಳಿಂದ ಈ ಕಲೆ ಸೃಷ್ಟಿಯಾಗಿದ್ದು, ಒಟ್ಟು ಮೂವತ್ತು ಸಾವಿರ ಮುಚ್ಚಳಗಳ ಬಳಕೆಯಾಗಿದೆ.

ಎಲ್ಲಿದೆ ಮುಚ್ಚಳದ ಮನೆ?: ಇಂಥ ಚಂದದ ಮನೆ ಇರುವುದು ರಷ್ಯಾದ ಕಮರ್ಚಾಗಾ ಗ್ರಾಮದಲ್ಲಿ. ಕ್ರಸ್ನೋಯಾರ್ಕ್‌ ನಗರದಿಂದ ಆಗ್ನೇಯಕ್ಕೆ ಎಂಬತ್ತು ಕಿಲೊಮೀಟರ್‌ ದೂರದಲ್ಲಿರುವ ಈ ಗ್ರಾಮದಲ್ಲಿ ಜನಸಂಖ್ಯೆ ಬಹು ವಿರಳವಾಗಿದೆ. ಚದರ ಕಿಲೋಮೀಟರ್‌ಗೆ ಮೂರು ಜನರಿದ್ದಾರೆ. ಇಂಥ ಊರಿನಲ್ಲಿ ಅಪರೂಪದ ಮನೆಯೊಂದನ್ನು ಸೃಷ್ಟಿಸಿರುವುದು ಓಲ್ಗಾ ಕೋಸ್ಟಿನಾ ಎಂಬ ಮಹಿಳೆ. 

ಉದ್ಯೋಗದಿಂದ ನಿವೃತ್ತರಾಗಿರುವ ಓಲ್ಗಾ, ಒಮ್ಮೆ ಸಮೀಪದ ಟೈಗಾದ ಕಾಡುಪ್ರದೇಶಕ್ಕೆ ಹೋಗಿದ್ದರು. ಅಲ್ಲಿ ವಿಹಾರಕ್ಕೆ ಬರುವ ಪ್ರವಾಸಿಗರು ಎಸೆದುಹೋದ ಸಾವಿರಾರು ಪ್ಲಾಸ್ಟಿಕ್‌ ಬಾಟಲಿಗಳತ್ತ ಅವರ ಲಕ್ಷÂ ಹರಿಯಿತು. ಪರಿಸರವನ್ನು ಕೆಡಿಸುವ ಈ ಬಾಟಲಿಗಳ ರಾಶಿಯನ್ನು ಕಂಡು ದುಃಖವೂ ಆಯಿತು. ಅವುಗಳನ್ನು ಬಳಸಿಕೊಂಡು ಏನಾದರೂ ಮಾಡಬೇಕು ಎಂದವರು ಯೋಚಿಸಿದರು.

ಕಸದಿಂದ ರಸ: ಓಲ್ಗಾ ಈ ಮುಚ್ಚಳಗಳನ್ನು ಸಂಗ್ರಹಿಸಲೆಂದೇ ಕಾಡಿನಲ್ಲಿ ಹಲವು ತಿಂಗಳು ತಿರುಗಾಟ ನಡೆಸಿದರು. ಮೂವತ್ತು ಸಾವಿರ ವರ್ಣರಂಜಿತ ಮುಚ್ಚಳಗಳು ಸಂಗ್ರಹವಾದಾಗ, ಇದರಿಂದ ಏನು ಮಾಡಬಹುದೆಂದು ಯೋಚಿಸಿದರು.

ಈ ಮುಚ್ಚಳಗಳನ್ನು ಬಳಸಿ, ತನ್ನ ಚಿಕ್ಕ ಮನೆಯ ಗೋಡೆಗಳನ್ನು ಕಲಾತ್ಮಕಗೊಳಿಸುವ ಯೋಚನೆ ಮೂಡಿತು. ಮರದಿಂದ ನಿರ್ಮಾಣವಾದ ಅವರ ಸರಳವಾದ ಮನೆಗೆ ಈ ಕಲಾತ್ಮಕ ವಿನ್ಯಾಸ ಅಚ್ಚಳಿಯದ ಶೋಭೆ ತಂದಿದೆ. ಸಾಂಪ್ರದಾಯಿಕ ಶೈಲಿಯ ಚಿತ್ರಗಳಿರುವ ಈ ಮನೆಯ ಗೋಡೆ ಇಂದು ಪ್ರವಾಸಿಗರ ದಂಡನ್ನು ಆಕರ್ಷಿಸುತ್ತಿದೆ. 

* ಪ.ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.