ತೊಳೆದ ಮುತ್ತನು ಕಂಡೆ…


Team Udayavani, Mar 13, 2019, 12:30 AM IST

x-1.jpg

ಮಗಳು ಹೆರಿಗೆಗೆಂದು ಮನೆಗೆ ಬಂದ ಕ್ಷಣದಿಂದಲೇ, ಮಗುವಿಗೆ ಸ್ನಾನ ಮಾಡಿಸುವುದು ಹೇಗೆ ಎಂಬ ಚಿಂತೆ ಅಜ್ಜಿಯರನ್ನು ಕಾಡುತ್ತದೆ. ಮಗುವನ್ನು ಕಾಲಿನ ಮೇಲೆ ಅಥವಾ ತೊಡೆಯ ಮೇಲೆ ಮಲಗಿಸಿಕೊಂಡು, ಎಣ್ಣೆಯನ್ನು ಬೆಚ್ಚಗೆ ಮಾಡಿ, ಮೈಗೆಲ್ಲಾ ಹಚ್ಚಿ, ಬೆನ್ನು- ತಲೆಗೆ ತಟ್ಟುತ್ತಾ ಮೃದುವಾಗಿ ಮಸಾಜ್‌ ಮಾಡುವುದು, ಧ್ಯಾನಕ್ಕಿಂತಲೂ ತುಸು ಹೆಚ್ಚೇ ಏಕಾಗ್ರತೆಯನ್ನು ಬೇಡುತ್ತದೆ…

“ತೊಟ್ಟಿಲ ಒಳಗೊಂದು ತೊಳೆದ ಮುತ್ತನು ಕಂಡೆ 
ಹೊಟ್ಟೆ ಆಕಳಿಸಿ ನಗುವೋನ ನನ್ನಯ್ಯ 
ನೆತ್ತೀಲಿ ಕಂಡೆ ಹರಳೆಲೆ
ಮರದಲ್ಲಿ ಮರ ಹುಟ್ಟಿ, ಮರಚಿಂಗದ ಕಾಯಾಗಿ, ತಿನ್ನಲಾರದ ಹಣ್ಣು ಬಲುರುಚಿ…

 - ಹೀಗೆ ಜನಪದರು ಮಗುವನ್ನು ತೊಳೆದ ಮುತ್ತಿಗೆ, ತಿನ್ನಲಾರದ ಹಣ್ಣಿಗೆ ಹೋಲಿಸಿದ್ದಾರೆ. ಮಗುವನ್ನು ಆರೈಕೆ ಮಾಡುವ ಪ್ರಕ್ರಿಯೆಗಳೇ ಒಂದು ಚಾಲೆಂಜ್‌. ಮಗುವಿಗೆ ಎಣ್ಣೆ ಸ್ನಾನ ಮಾಡಿಸುವುದು ಅವುಗಳಲ್ಲೊಂದು. ಮಗಳು ಹೆರಿಗೆಗೆಂದು ಮನೆಗೆ ಬಂದ ಕ್ಷಣದಿಂದಲೇ, ಮಗುವಿಗೆ ಸ್ನಾನ ಮಾಡಿಸುವುದು ಹೇಗೆ ಎಂಬ ಚಿಂತೆ ಅಜ್ಜಿಯರನ್ನು ಕಾಡುತ್ತದೆ. ಮಗುವನ್ನು ಕಾಲಿನ ಮೇಲೆ ಅಥವಾ ತೊಡೆಯ ಮೇಲೆ ಮಲಗಿಸಿಕೊಂಡು, ಎಣ್ಣೆಯನ್ನು ಬೆಚ್ಚಗೆ ಮಾಡಿ, ಮೈಗೆಲ್ಲಾ ಹಚ್ಚಿ, ಬೆನ್ನು- ತಲೆಗೆ ತಟ್ಟುತ್ತಾ ಮೃದುವಾಗಿ ಮಸಾಜ್‌ ಮಾಡುವುದು, ಧ್ಯಾನಕ್ಕಿಂತಲೂ ತುಸು ಹೆಚ್ಚೇ ಏಕಾಗ್ರತೆಯನ್ನು ಬೇಡುತ್ತದೆ. ಸ್ನಾನ ಮಾಡಿಸುವಾಗ ನೀರು ಮಗುವಿನ ಕಣ್ಣು, ಮೂಗು, ಬಾಯಿಗೆ ಹೋಗದಂತೆ ತಡೆಯಲು ಹಣೆಯ ಮೇಲೆ ಕೈ ಹಿಡಿದು ಸ್ನಾನ ಮಾಡಿಸುವುದೂ ಒಂದು ಕಲೆ. ನಂತರ ಮಗುವಿಗೆ ಧೂಪ ಅಥವಾ ಲೊಬಾನ ಹಾಕಿ ಹಾಯಾಗಿ ನಿದ್ದೆ ಮಾಡಿಸುತ್ತಾರೆ. ಮಗುವಿಗೆ ಒಂದೆರಡು ವರ್ಷ ತುಂಬುವವರೆಗೂ ಎಣ್ಣೆ ಸ್ನಾನ ಮಾಡಿಸಿದರೆ ಆರೋಗ್ಯಕ್ಕೆ ಒಳ್ಳೆಯದು.  

ಎಣ್ಣೆ ಸ್ನಾನ ಒಳ್ಳೇದು…
ಎಳ್ಳೆಣ್ಣೆ, ಹರಳೆಣ್ಣೆ, ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆ… ಇವುಗಳಲ್ಲಿ ಯಾವ ಎಣ್ಣೆಯಾದರೂ ಆದೀತು. ಅಭ್ಯಂಜನದಿಂದ ಮಗುವಿನ ಮಾಂಸಖಂಡಗಳ ಬೆಳವಣಿಗೆ ಸರಿಯಾಗಿ, ಮೂಳೆ ಗಟ್ಟಿಯಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಲು, ಚರ್ಮಕ್ಕೆ ಹೊಳಪು ಬರಲು, ಮಗುವಿಗೆ ಚೆನ್ನಾಗಿ ನಿದ್ದೆ ಬರಲು ಎಣ್ಣೆಸ್ನಾನ ಸಹಕಾರಿ. ಮಗು ದೊಡ್ಡದಾಗುವವರೆಗೆ ಪ್ರತಿದಿನ ಎಣ್ಣೆಸ್ನಾನ ಮಾಡಿಸಿ. ನೆಗಡಿ, ಕೆಮ್ಮು, ಜ್ವರ ಇದ್ದಾಗ ಸ್ನಾನಕ್ಕೆ ವಿರಾಮ ನೀಡಬಹುದು.

  ಒಂದು ಪಾತ್ರೆಯಲ್ಲಿ ನೀರು ಹಾಕಿ ಕಾಯಿಸಿ, ಆ ಪಾತ್ರೆಯಲ್ಲಿ ಎಣ್ಣೆಯ ಬಟ್ಟಲನ್ನಿಟ್ಟು ಎಣ್ಣೆಯನ್ನು ಬಿಸಿ ಮಾಡಿ. ಉಗುರು ಬೆಚ್ಚಗಾದ ಎಣ್ಣೆಯನ್ನು ಮಗುವಿನ ಕೈ ಕಾಲುಗಳಿಗೆ ಮೇಲಿನಿಂದ ಕೆಳಗೆ ಹಚ್ಚಬೇಕು. ಹೊಕ್ಕಳು ಹಾಗೂ ನೆತ್ತಿಗೆ ಸ್ವಲ್ಪ ಜಾಸ್ತಿ ಎಣ್ಣೆ ಹಾಕಿ. ಕೀಲುಗಳ ಮತ್ತು ಹೊಟ್ಟೆಯ ಭಾಗದಲ್ಲಿ ವೃತ್ತಾಕಾರವಾಗಿ, ತಲೆಯ ಮೇಲೆ ಬೆರಳುಗಳ ತುದಿಯಿಂದ, ಬೆನ್ನಿನ ಮೇಲೆ ಮೃದುವಾಗಿ ತಟ್ಟಿ, ಪಾದಗಳಿಗೆ ಮೃದುವಾಗಿ ಸವರುತ್ತಾ ಎಣ್ಣೆ ಹಚ್ಚಬೇಕು.

ನೀರಿಗೇನು ಬೆರೆಸಬೇಕು?
ಎಣ್ಣೆ ಹಚ್ಚಿ ಅರ್ಧ ಗಂಟೆಯ ನಂತರ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಸಿ. ಅತಿಯಾದ ಬಿಸಿನೀರಿನ ಸ್ನಾನ ಬೇಡ. ಸ್ನಾನ ಮಾಡಿಸುವ ನೀರಿಗೆ ಸ್ವಲ್ಪ ಲಿಂಬೆರಸ, ಗುಲಾಬಿ ಜಲ, ಏಲಕ್ಕಿ ಪುಡಿ ಬೆರೆಸಬಹುದು. ತಲೆಗೆ ಸ್ನಾನ ಮಾಡಿಸುವಾಗ ಕಣ್ಣಿಗೆ ನೀರು ಹೋಗದಂತೆ ಜೋಪಾನ ಮಾಡಿ. ಸ್ನಾನವಾದ ನಂತರ ಸ್ವತ್ಛವಾದ ಟವೆಲ್‌ನಿಂದ ಮೈ ಒರೆಸಿ, ನೆತ್ತಿಯಿಂದ ಕಾಲಿನವರೆಗೆ ಧೂಪವನ್ನು ಹಿಡಿಯಿರಿ. ಮಗುವಿಗೆ ಸಂಜೆ ವೇಳೆ ಸ್ನಾನ ಮಾಡಿಸಿದರೆ, ರಾತ್ರಿ ಚೆನ್ನಾಗಿ ನಿದ್ದೆ ಮಾಡುತ್ತದೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ಮಗುವನ್ನು ಬೆಚ್ಚಗಿಡುವುದು ಕೂಡ ಮುಖ್ಯ. ಸ್ವೆಟರ್‌ ಹಾಕಿಸಿ, ಕಂಚಿಗೆ ಹಾಗೂ ಕುಲಾವಿ ಕಟ್ಟಬೇಕು, ಬೆಚ್ಚಗಿನ ಟೋಪಿ ಹಾಕಬೇಕು. ಮಗುವನ್ನು ಕಾಟನ್‌ ಸೀರೆಯ ಜೋಗುಳದಲ್ಲಿ ಮಲಗಿಸುವುದು ಅದರ ಬೆಳವಣಿಗೆಗೆ ಸಹಕಾರಿ ಅನ್ನುತ್ತಾರೆ ಹಿರಿಯರು.

ಕಂದನ ಸ್ನಾನ ಹೀಗಿರಲಿ…
1. ಮಗುವಿನ ಸ್ನಾನಕ್ಕೆ ಉಗುರು ಬೆಚ್ಚಗಿನ ನೀರು ಬಳಸಿ. ಬಿಸಿ ನೀರು, ಮಗುವಿನ ಚರ್ಮಕ್ಕೆ ಘಾಸಿ ಮಾಡುತ್ತದೆ. 
2. ಸೋಪ್‌ನ ಬದಲು, ಹೆಸರುಕಾಳು ಹಿಟ್ಟು, ಕಡಲೆ ಹಿಟ್ಟು ಮತ್ತು ಮೆಂತ್ಯೆ ಹಿಟ್ಟನ್ನು ಸಮ ಪ್ರಮಾಣದಲ್ಲಿ ಬೆರೆಸಿ, ಸ್ನಾನ ಮಾಡಿಸಿ. 
3. ಮಗುವಿನ ಮೈಗೆ ಎಣ್ಣೆ ಹಚ್ಚಿ, ಬೆಳಗಿನ ಬಿಸಿಲಿನಲ್ಲಿ ನಿಲ್ಲಿಸಿ. ಮೂಳೆಯ ಬೆಳವಣಿಗೆಗೆ ಬೇಕಾದ ವಿಟಿಮಿನ್‌ “ಎ’  ಮತ್ತು “ಡಿ’, ಸೂರ್ಯ ಕಿರಣಗಳಿಂದ ಸಿಗುತ್ತದೆ. ರಿಕೆಟ್ಸ್‌ನಂಥ ಕಾಯಿಲೆಗಳನ್ನೂ ತಡೆಗಟ್ಟಬಹುದು. 
4. ಮಗುವಿಗೆ 5 ತಿಂಗಳಾಗುವವರೆಗೆ ಕಾಲಿನ ಮೇಲೆ ಮಲಗಿಸಿಕೊಂಡು ಎಣ್ಣೆ ಹಚ್ಚಿ  ಸ್ನಾನ ಮಾಡಿಸಬೇಕು. ನಂತರ ಕಾಲಿನ ಮೇಲೆ ಕೂರಿಸಿ ಸ್ನಾನ ಮಾಡಿಸಬಹುದು. ಮಗು ನಿಲ್ಲುವ ಸ್ಥಿತಿಗೆ ಬಂದ ಮೇಲೆ ನಿಲ್ಲಿಸಿ ಸ್ನಾನ ಮಾಡಿಸಬಹುದು. 
7. ರಾಸಾಯನಿಕ ಅಂಶ ಅಧಿಕವಾಗಿರುವ ಶ್ಯಾಂಪೂ, ಕ್ರೀಂ, ಬಾಡಿ ಲೋಶನ್‌, ಪೌಡರ್‌ ಬಳಕೆ ಬೇಡ.

ಜ್ಯೋತಿ ಪುರದ, ಹಾವೇರಿ

ಟಾಪ್ ನ್ಯೂಸ್

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.