ಕುಣಿಕೆ ಕಟ್ಟದೆ ಬಾಟಲಿ ಎತ್ತಬಲ್ಲಿರಾ?


Team Udayavani, Aug 16, 2018, 11:54 AM IST

magic-4.jpg

ಬಾವಿಯಿಂದ ನೀರು ಸೇದಬೇಕಾಗಿ ಬಂದಾಗ ಬಿಂದಿಗೆಯ ಬಾಯಿಗೆ ಹಗ್ಗವನ್ನು ಬಿಗಿದು ಕೆಳಕ್ಕೆ ಇಳಿಸಿ ಮೇಲಕ್ಕೆತ್ತುತ್ತಿದ್ದರು. ಆದರೆ ಕುಣಿಕೆ ಬಿಗಿಯದೆ ಯಾವುದೇ ವಸ್ತುವನ್ನು ಎತ್ತುವುದನ್ನು ನೋಡಿದ್ದೀರಾ? ಈ ಮ್ಯಾಜಿಕ್‌ ಅದರ ಕುರಿತೇ ಆಗಿದೆ.

ಬೇಕಾಗುವ ವಸ್ತು: ಸಣ್ಣ ಬಾಯಿಯ ಅಪಾರದರ್ಶಕ ಗಾಜಿನ ಬಾಟಲಿ, ಪ್ಲಾಸ್ಟಿಕ್‌ ಹಗ್ಗ ಮತ್ತು ಸಿಲ್ವರ್‌ ಪೇಪರ್‌.

ಪ್ರದರ್ಶನ: ಮೇಜಿನ ಮೇಲೆ ಒಂದು ಗಾಜಿನ ಬಾಟಲಿ ಇದೆ. ಜಾದೂಗಾರ ಅದರೊಳಗೆ ಪ್ಲಾಸ್ಟಿಕ್‌ ಹಗ್ಗವನ್ನು ಹಾಕಿ, ಒಂದು ಸಲ ಉಲ್ಟಾ ಮಾಡುತ್ತಾನೆ. ನಂತರ, ಬಾಟಲಿಯನ್ನು ಸೀದಾ ಮಾಡಿ ಆ ಹಗ್ಗವನ್ನು ಮೇಲಕ್ಕೆತ್ತಿದಾಗ, ಬಾಟಲಿಯೂ ಮೇಲಕ್ಕೆದ್ದು ಬರುತ್ತದೆ. ಅದು ಹೇಗೆ ಸಾಧ್ಯವಾಯ್ತು?

ತಯಾರಿ: ಪ್ರದರ್ಶನಕ್ಕೂ ಮೊದಲು, ಸಿಲ್ವರ್‌ ಪೇಪರ್‌ ಅನ್ನು ಮುದ್ದೆ ಮಾಡಿ ಬಾಟಲಿಯೊಳಗೆ ಹಾಕಿ. ಆ ಪೇಪರ್‌ ಉಂಡೆ, ಬಾಟಲಿಯ ಕುತ್ತಿಗೆಯ ಅರ್ಧದಷ್ಟಾದರೂ ಅಗಲವಿರಬೇಕು. ಆನಂತರ ಬಾಟಲಿಯೊಳಗೆ ಹಗ್ಗವನ್ನು ಹಾಕಿ, ಉಲ್ಟಾ ಮಾಡಿ. ಆಗ ಆ ಪೇಪರ್‌ ಉಂಡೆ, ಬಾಟಲಿಯ ಕುತ್ತಿಗೆಯವರೆಗೆ ಬಂದು ನಿಲ್ಲುತ್ತದೆ. ಬಾಟಲಿ ಮತ್ತು ಪೇಪರ್‌ ಉಂಡೆಯ ನಡುವೆ ಹಗ್ಗ ಸಿಕ್ಕಿ ಹಾಕಿಕೊಳ್ಳುತ್ತದೆ. ನಂತರ ಬಾಟಲಿಯನ್ನು ಸೀದಾ ಮಾಡಿದಾಗ, ಹಗ್ಗದ ಜೊತೆಗೆ ಬಾಟಲಿಯೂ ಮೇಲಕ್ಕೆದ್ದು ಬರುತ್ತದೆ. ಹಾಂ, ಅಪಾರದರ್ಶಕ ಬಾಟಲಿಯಾದ್ದರಿಂದ ನಿಮ್ಮ ರಹಸ್ಯ ಬಯಲಾಗುವುದಿಲ್ಲ!

* ವಿನ್ಸೆಂಟ್ ಲೋಬೋ

ಟಾಪ್ ನ್ಯೂಸ್

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.