ಕಾಗೆ ಮತ್ತು ಕೋಗಿಲೆ


Team Udayavani, Aug 16, 2018, 11:54 AM IST

kaage-kog.jpg

ಮರದ ಮೇಲೆ ದಟ್ಟಹಸಿರೆಲೆಗಳ ನಡುವೆ ಕಾಗೆ ಗೂಡು ಕಟ್ಟುತ್ತಿತ್ತು. ಅದನ್ನೇ ಹೊಂಚು ಹಾಕುತ್ತಾ ಕೋಗಿಲೆಯೊಂದು ಕಾದು ಕುಳಿತಿತ್ತು. ಗೂಡು ಕಟ್ಟಿ ಮುಗಿಸಿದ ಕಾಗೆ ಗೂಡಿನಲ್ಲಿ ಮೊಟ್ಟೆ ಇಟ್ಟಿತು. ಆಹಾರ ಹುಡುಕಲು ಕಾಗೆ ಹಾರಿ ಹೋದಾಗ ಕೋಗಿಲೆ ಮೆತ್ತಗೆ ಬಂದು ಮೊಟ್ಟೆ ಇಟ್ಟು ಪಲಾಯನಗೈದಿತು. ಹಿಂತಿರುಗಿ ಬಂದ ಕಾಗೆಗೆ ಗೂಡಿನಲ್ಲಿ ಕೋಗಿಲೆ ಮೊಟ್ಟೆಗಳಿದ್ದಿದ್ದು ಗಮನಕ್ಕೆ ಬರಲಿಲ್ಲ. 

ಕಾಗೆಯ ಕಾವಿನಿಂದ ಮೊಟ್ಟೆ ಒಡೆದು ಮರಿಗಳು ಹೊರಗೆ ಬಂದವು. ಕಾಗೆ ಎಲ್ಲ ಮರಿಗಳನ್ನು ನೋಡಿ ಖುಷಿಯಿಂದ ಸಂಭ್ರಮಪಟ್ಟಿತು. ಆಗಲೂ ಕೋಗಿಲೆ ಮರಿಯನ್ನು ಭೇದ ಮಾಡಲಿಲ್ಲ. ಎಲ್ಲವಕ್ಕೂ ಗುಟುಕು ತಂದು ನೀಡಿತು. ಮರಿಗಳೆಲ್ಲ ಬೆಳೆದು ಕೊಂಚ ದೊಡ್ಡವಾಗುವಷ್ಟರಲ್ಲಿ ಕೋಗಿಲೆ ತನ್ನ ಮರಿಗಳನ್ನು ಕರೆದೊಯ್ಯಲು ಬಂದಿತು. ಆಗ ಕಾಗೆಯ ಮರಿಗಳು ತಮ್ಮ ಸಹೋದರರನ್ನು ಯಾವುದೋ ದುಷ್ಟ ಪಕ್ಷಿಯೊಂದು ಹೊತ್ತೂಯ್ಯಲು ಬಂದಿದೆ ಎಂದು ತಿಳಿದು ಪ್ರತಿಭಟಿಸಿದವು.

ಹಾರಲು ಬಾರದಿದ್ದರೂ ಅವೆಲ್ಲವೂ ಕೋಗಿಲೆಯ ವಿರುದ್ಧ ತಿರುಗಿ ಬಿದ್ದವು. ಆಗ ಕೋಗಿಲೆ ಒಂದು ಮರಿಯನ್ನು ಗೂಡಿನಿಂದ ತಳ್ಳಿ ಹಾಕಿತು. ಮಿಕ್ಕ ಮರಿಗಳು ಹೆದರಿ ಹಿಂದೆ ಸರಿದವು.  ಕಡೆಗೂ ಕೋಗಿಲೆ ತನ್ನ ಮರಿಗಳನ್ನು ಅಲ್ಲಿಂದ ಹೊತ್ತೂಯ್ಯುವಲ್ಲಿ ಸಫ‌ಲವಾಯಿತು. ಕೋಗಿಲೆ ಮರಿಗಳು ಆದ ಘಟನೆಯೆಲ್ಲವನ್ನೂ ಪರಾಮರ್ಶಿಸಿದವು. ತನ್ನದಲ್ಲದೇ ಹೋದರೂ ಕಾಗೆ ಕಾವು ಕೊಟ್ಟಿತು, ಆಹಾರ ನೀಡಿ ಪೋಷಿಸಿತು. ಕಾಗೆಯ ಮರಿಗಳು ತಮ್ಮನ್ನೂ ಸ್ವಂತದವರಂತೆ ಕಂಡು ರಕ್ಷಿಸಲು ಮುಂದಾದವು.

ಆದರೆ ಕೃತಜ್ಞತೆ ಇಲ್ಲದ ಕೋಗಿಲೆ ಕಾಗೆಯ ಮರಿಗಳನ್ನೇ ದೂರ ತಳ್ಳಿ ಹಾಕಿತ್ತು. ಕೋಗಿಲೆ ಮರಿಗಳು ಕೋಗಿಲೆಯ ವಿರುದ್ಧ ತಿರುಗಿ ಬಿದ್ದವು. ಕೋಗಿಲೆಗೆ ತಾನು ಮಾಡಿದ ತಪ್ಪಿನ ಅರಿವಾಗಿತ್ತು. ಆದರೆ ಅಷ್ಟರಲ್ಲಾಗಲೇ ತಡವಾಗಿತ್ತು. ಕೋಗಿಲೆ ಮರಿಗಳು ಹಾರಲು ಕಲಿತ ತಕ್ಷಣ ಕಾಗೆಯ ಗೂಡಿಗೆ ತೆರಳಿ ಎಲ್ಲಾ ವಿಚಾರ ತಿಳಿಸಿತು. ಕಾಗೆ “ನನಗೆ ನೀವು ಕೋಗಿಲೆಯ ಮರಿಗಳು ಎಂದು ಗೊತ್ತಾಗಿತ್ತು. ಆದರೆ ಹಾಗೆಂದು ಆಹಾರ ನೀಡದೆ ಸಾಯಿಸಲು ಮನಸ್ಸು ಬರಲಿಲ್ಲ.’ ಎಂದಿತು. ಕೋಗಿಲೆ ಮರಿಗಳು ಕಾಗೆಯನ್ನು ಅಪ್ಪಿಕೊಂಡವು.

* ಉಮ್ಮೆ ಅಸ್ಮ ಕೆ.ಎಸ್‌.

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.