ಮಾಯದ ವಸ್ತ್ರ!


Team Udayavani, Aug 23, 2018, 6:00 AM IST

s-1.jpg

ನಾಣ್ಯವನ್ನು ಮಾಯ ಮಾಡುವ ಕಲೆ ಗೊತ್ತಿದೆಯಾ? ಅಯ್ಯೋ, ಹಾಗಂದ್ರೆ ದುಡ್ಡನ್ನು ಕದಿಯೋದಲ್ಲ. ಬಟ್ಟೆಯ ಚೂರಿನಲ್ಲಿ ನಾಣ್ಯವನ್ನಿಟ್ಟು ಮಡಚಿ “ಉಫ್’ ಅಂತ ಕೈಮೇಲೆ ಊದಿ ಮಾಯ ಮಾಡುವುದು. ಸಿನಿಮಾಗಳಲ್ಲಿ ನಾಯಕರು ಹೀಗೆ ಮಾಡುವುದನ್ನು ನೋಡಿರುತ್ತೀರಿ. ಈ ಜಾದೂವನ್ನು ನೀವೂ ಮಾಡಬಹುದು.

ಬೇಕಾಗುವ ವಸ್ತು: ಬಟ್ಟೆ ಚೂರು, ನಾಣ್ಯ, ಸಿಲ್ವರ್‌ ಪೇಪರ್‌, ಕತ್ತರಿ

ಪ್ರದರ್ಶನ: ಜಾದೂಗಾರನ ಕೈಯಲ್ಲಿ ಕೆಂಪು ಬಟ್ಟೆ ಚೂರು ಹಾಗೂ ಒಂದು ನಾಣ್ಯ ಇದೆ. ಆತ ಅದನ್ನು ಎಲ್ಲರಿಗೂ ಎತ್ತಿ ತೋರಿಸುತ್ತಾನೆ. ನಂತರ ನಾಣ್ಯವನ್ನು, ಬಟ್ಟೆಯ ಒಳಗಿಟ್ಟು ಮಡಚುತ್ತಾನೆ. ಬಾಯಲ್ಲಿ ಏನೇನೋ ಮಂತ್ರ ಪಠಿಸುತ್ತಾ, ಬಟ್ಟೆ ಚೂರಿನ ಮುದ್ದೆಯನ್ನು ಬಿಡಿಸಿದರೆ ಅದರೊಳಗೆ ನಾಣ್ಯವೇ ಇಲ್ಲ! ಹಾಗಾದ್ರೆ ಆ ನಾಣ್ಯ ಎಲ್ಲಿ ಹೋಯ್ತು? ಜಾದೂಗಾರ ಹೇಳಿದ ಮಂತ್ರ ಯಾವುದು?

ತಯಾರಿ: ಅಚ್ಚರಿಯ ವಿಷಯ ಏನು ಎಂದರೆ ಜಾದೂಗಾರ ಜನರಿಗೆ ತೋರಿಸುವ ನಾಣ್ಯ ನಿಜವಾದ ನಾಣ್ಯವೇ ಅಲ್ಲ. ಅದು ನಾಣ್ಯವನ್ನೇ ಹೋಲುವ, ಅದೇ ಆಕಾರದ ಸಿಲ್ವರ್‌ ಪೇಪರ್‌! ಪ್ರದರ್ಶನಕ್ಕೆ ಮೊದಲು, ಸಿಲ್ವರ್‌ ಪೇಪರ್‌ಅನ್ನು ತೆಗೆದುಕೊಂಡು ನಾಣ್ಯದ ಆಕಾರಕ್ಕೆ ಕತ್ತರಿಸಿ. ನಂತರ ಪೇಪರ್‌ಅನ್ನು ನಾಣ್ಯದ ಮೇಲಿಟ್ಟು ಒತ್ತಿದರೆ, ನಾಣ್ಯದ ಮೇಲಿರುವ ಅಚ್ಚು ಸಿಲ್ವರ್‌ ಪೇಪರ್‌ ಮೇಲೆ ಮೂಡುತ್ತದೆ. ಆಗ ದೂರದಿಂದ ನೋಡುವವರಿಗೆ ಸಿಲ್ವರ್‌ ಪೇಪರ್‌ ಕೂಡ ನಾಣ್ಯದಂತೆಯೇ ತೋರುತ್ತದೆ. ನಕಲಿ ನಾಣ್ಯವನ್ನು, ಬಟ್ಟೆ ಚೂರಿನ ಒಳಗಿಟ್ಟು ಮುದ್ದೆ ಮಾಡಿ. ಸಿಲ್ವರ್‌ ಪೇಪರ್‌ ಕೂಡ ಬಟ್ಟೆಯ ಜೊತೆಗೇ ಮುದ್ದೆಯಾಗುತ್ತದೆ. ಒಂದು ಮಾತು ನೆನಪಿರಲಿ… ಸಿಲ್ವರ್‌ ಪೇಪರ್‌ ಪೂರ್ತಿಯಾಗಿ ಮುದ್ದೆಯಾಗಬೇಕು. ಇಲ್ಲದಿದ್ದರೆ ರಹಸ್ಯ ಬಯಲಾಗಿಬಿಡುತ್ತದೆ. ಪೇಪರ್‌ ಮುದ್ದೆಯಾಗುವವರೆಗೂ, ಬಾಯಲ್ಲಿ ಮಂತ್ರ ಹೇಳಿದಂತೆ ಮಾಡುತ್ತಾ ಜನರ ಗಮನವನ್ನು ಬೇರೆ ಕಡೆಗೆ ಸೆಳೆಯಿರಿ. ಆಮೇಲೆ ಪೇಪರ್‌ ಚೂರನ್ನು ಬೆರಳಿನ ಹಿಂಬದಿಯಲ್ಲಿ ಅಡಗಿಸಿಟ್ಟು, ಬಟ್ಟೆಯ ಚೂರನ್ನು ಬಿಡಿಸಿ, ನಾಣ್ಯ ಮಾಯವಾಗಿದೆ ಎಂದು ವೀಕ್ಷಕರು ಮೂಕವಿಸ್ಮಿತರಾಗುವರು. 

ವಿನ್ಸೆಂಟ್‌ ಲೋಬೋ

ಟಾಪ್ ನ್ಯೂಸ್

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

police crime

Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.