ಪ್ರಯತ್ನ ಪಡದೆ ಫ‌ಲವಿಲ್ಲ


Team Udayavani, Aug 30, 2018, 6:00 AM IST

lead-kathe1-1.jpg

ವಿದ್ಯಾರಣ್ಯಪುರ ಎಂಬುದೊಂದು ಊರು. ಅಲ್ಲೊಂದು ಆಶ್ರಮವಿತ್ತು. ಅಲ್ಲೊಬ್ಬ ಸಕಲ ವಿದ್ಯಾಪಾರಂಗತನೂ ಸರ್ವಜ್ಞಾನಿಯೂ ಆದ ಜಗದ್ಗುರು ಒಬ್ಬನಿದ್ದ. ಆತ ಏನೇ ಹೇಳಿದರೂ ಅದು ನಿಜವಾಗುತ್ತದೆಂಬ ನಂಬಿಕೆ ಜನರಲ್ಲಿತ್ತು. ಹಾಗಾಗಿ ವಿದ್ಯಾರಣ್ಯಪುರದ ಜನರು ಮಾತ್ರವಲ್ಲದೆ, ದೂರ ದೂರದ ಊರುಗಳ ಜನರೆಲ್ಲಾ ಆಶ್ರಮಕ್ಕೆ ಬಂದು ತಮ್ಮ ಭವಿಷ್ಯವನ್ನು ಕೇಳುತ್ತಿದ್ದರು. ಯಾರೇ ಬಂದರೂ ಒಂದಿನಿತೂ ಬೇಸರ ಪಟ್ಟುಕೊಳ್ಳದೆ ಬಹಳ ಹಸನ್ಮುಖೀಯಾಗಿ ಅವರ ಕಷ್ಟ ಕಾರ್ಪಣ್ಯಗಳಿಗೆ ಜಗದ್ಗುರು ಸ್ಪಂದಿಸುತ್ತಿದ್ದರು.

ಒಮ್ಮೆ ಮಹೇಶ ಮತ್ತು ಸುರೇಶ ಎಂಬ ಇಬ್ಬರು ವಿದ್ಯಾರ್ಥಿಗಳು ಆಶ್ರಮಕ್ಕೆ ಬಂದು ಜಗದ್ಗುರುವಿನ ಪಾದಗಳಿಗೆ ನಮಸ್ಕಾರ ಮಾಡಿ “ಗುರುಗಳೇ, ನಾವಿಬ್ಬರೂ ಗೆಳೆಯರು. ಒಂದೇ ಶಾಲೆಯಲ್ಲಿ ಓದುತ್ತಿದ್ದೇವೆ. ನಮಗೆ ನಿಮ್ಮ ಆಶೀರ್ವಾದ ಬೇಕು’ ಎಂದು ತಲೆ ಬಾಗಿದರು. ತಕ್ಷಣವೇ ಜಗದ್ಗುರು ಇವರಿಬ್ಬರನ್ನೂ ಒಂದು ಕ್ಷಣ ತದೇಕಚಿತ್ತದಿಂದ ನೋಡಿ “ನೀನು ಪ್ರಥಮ ದರ್ಜೆಯಲ್ಲಿ ಪರೀಕ್ಷೆ ಪಾಸಾಗುತ್ತೀಯಾ’ ಎಂದು ಮಹೇಶನಿಗೆ ಹೇಳಿದರು. ಹಾಗೆಯೇ ಸುರೇಶನಿಗೆ “ಪರೀಕ್ಷೆಯಲ್ಲಿ ನೀನು ಫೇಲಾಗುತ್ತೀಯಾ’ ಅಂದುಬಿಟ್ಟರು.

ತಾನು ಪ್ರಥಮ ದರ್ಜೆಯಲ್ಲಿ ಪಾಸಾಗುವ ಭವಿಷ್ಯ ಕೇಳಿ ಖುಷಿಗೊಂಡ ಮಹೇಶ ಓದುವುದನ್ನು ಬಿಟ್ಟ. ಜಗದ್ಗುರುಗಳ ಮಾತನ್ನೇ ನಂಬಿಕೊಂಡ. ಪಠ್ಯವೊಂದನ್ನು ಬಿಟ್ಟು ಮಿಕ್ಕೆಲ್ಲಾ ಚಟುವಟಿಕೆಗಳಲ್ಲಿ ತೊಡಗಿಕೊಂಡ. ಹೇಗಿದ್ದರೂ ಒಳ್ಳೆ ಅಂಕ ಪಡೆದು ಪಾಸಾಗುತ್ತೇನಲ್ಲ ಎಂದುಕೊಂಡು ಪುಸ್ತಕವನ್ನು ತೆರೆಯುವ ಗೋಜಿಗೇ ಹೋಗಲಿಲ್ಲ. ಆದರೆ ಅವನ ಗೆಳೆಯ ಸುರೇಶ ಜಗದ್ಗುರು ತಾನು ಫೇಲಾಗುತ್ತೇನೆಂದು ಹೇಳಿದ್ದರಿಂದ ಬೇಸರ ಪಟ್ಟುಕೊಂಡ. ಫೇಲಾಗುವ ಭಯದಿಂದಲೇ ಕಷ್ಟಪಟ್ಟು ಓದಲು ಶುರುಮಾಡಿದ. ಅಲ್ಲಿ- ಇಲ್ಲಿ, ಅತ್ತ- ಇತ್ತ, ಹಬ್ಬ- ಹರಿದಿನ ಅಂತ ಎಲ್ಲೂ ಅಲೆಯಲಿಲ್ಲ. ಹಗಲು ರಾತ್ರಿಯೆನ್ನದೆ ಏಕಾಗ್ರತೆಯಿಂದ ಚೆನ್ನಾಗಿ ಓದಿದ. 

ಒಂದೆರೆಡು ತಿಂಗಳಲ್ಲಿ ಪರೀಕ್ಷೆ ಬಂತು. ಇಬ್ಬರೂ ಪರೀಕ್ಷೆ ಬರೆದರು. ಕೆಲವೇ ದಿನಗಳಲ್ಲಿ ಫ‌ಲಿತಾಂಶವೂ ಬಂತು. ಜಗದ್ಗುರುವಿನ ಭವಿಷ್ಯ ಸುಳ್ಳಾಗಿತ್ತು. ಪ್ರಥಮ ದರ್ಜೆಯಲ್ಲಿ ಪಾಸಾಗಬೇಕಿದ್ದ ಮಹೇಶ ಅತ್ಯಂತ ಕಡಿಮೆ ಅಂಕ ಪಡೆದಿದ್ದ. ಫೇಲಾಗುವುದಾಗಿ ಭವಿಷ್ಯ ನುಡಿಸಿಕೊಂಡಿದ್ದ ಸುರೇಶ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದ. ಕುಪಿತಗೊಂಡ ಮಹೇಶ ಆವೇಶದಿಂದ ಆಶ್ರಮಕ್ಕೆ ಹೋಗಿ ಜಗದ್ಗುರುವನ್ನು ಪ್ರಶ್ನಿಸಿದ. “ಗುರುಗಳೇ, ನೀವು ಪ್ರಥಮ ಶ್ರೇಣಿಯಲ್ಲಿ ಪಾಸಾಗುವೆ ಎಂದು ಆಶೀರ್ವಾದ ಮಾಡಿದ್ದಿರಿ. ಆದರೆ ನಾನು ಜಸ್ಟ್‌ ಪಾಸ್‌ ಆಗಿದ್ದೇನೆ. ನೀವು ಫೇಲಾಗುವುದಾಗಿ ಹೇಳಿದ್ದ ನನ್ನ ಗೆಳೆಯ ಸುರೇಶ ಡಿಸ್ಟಿಂಕ್ಷನ್‌ ಪಡೆದು ಪಾಸಾಗಿಬಿಟ್ಟ. ನಿಮ್ಮ ಮಾತನ್ನು ನಂಬಿ ನಾನು ಕೆಟ್ಟೆ…’ ಎಂದು ಗೋಳಾಡಿದ.

ಜಗದ್ಗುರು ಸಾವಧಾನದಿಂಟ ಅವನಿಗೆ ಅರ್ಥವಾಗುವಂತೆ ಹೇಳಿದರು “ನೋಡು ಮಗೂ, ನೀನು ನನ್ನ ಮಾತನ್ನು ನಂಬಿ ಕುಳಿತೆ. ಶ್ರದ್ಧೆಯಿಂದ ಓದುವ ಪ್ರಯತ್ನವನ್ನು ಮಾಡಲಿಲ್ಲ. ಬರೀ ಮಂತ್ರಕ್ಕೆ ಮರದ ಮೇಲಿನ ಮಾವಿನ ಕಾಯಿ ಕೆಳಕ್ಕೆ ಬೀಳುವುದಿಲ್ಲ. ಪ್ರಯತ್ನವಿಲ್ಲದೆ ಎಂದೂ ಫ‌ಲ ದೊರೆಯದು. ನಿನ್ನ ಸ್ನೇಹಿತ ಸುರೇಶ ನನ್ನ ಮಾತನ್ನು ಲೆಕ್ಕಿಸದೆ ತನ್ನ ಪ್ರಯತ್ನದ ಮೇಲೆ ನಂಬಿಕೆಯಿಟ್ಟ. ಕಷ್ಟಪಟ್ಟು ಓದಿದ. ಅದರ ಫ‌ಲ ಅವನಿಗೆ ಸಿಕ್ಕಿತು’.

ಮಹೇಶನಿಗೆ ತನ್ನ ತಪ್ಪಿನ ಅರಿವಾಗಿತ್ತು. ದೇವರೇ ನಮ್ಮ ಪರವಾಗಿದ್ದರೂ ಸ್ವಂತ ಪ್ರಯತ್ನವಿಲ್ಲದೆ ಫ‌ಲ ಸಿಗದು ಎಂಬ ಸತ್ಯ ಅವನಿಗೆ ಅರಿವಾಗಿತ್ತು. ಮುಂದೆಂದೂ ಹೀಗಾಗದಂತೆ ಎಚ್ಚರವಹಿಸುತ್ತೇನೆಂದು ಮನಸ್ಸಿನಲ್ಲಿ ದೃಢ ಸಂಕಲ್ಪ ಮಾಡಿದ.

– ಬನ್ನೂರು ಕೆ. ರಾಜು

ಟಾಪ್ ನ್ಯೂಸ್

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.