ಕುಟ್ಟಿದಾಗ ಮುಚ್ಚಳ ಸೃಷ್ಟಿ


Team Udayavani, Sep 6, 2018, 6:00 AM IST

1.jpg

ಯಾವುದಾದರೂ ವಸ್ತು ಕಳೆದುಹೋದಾಗ ಮನೆಯೆಲ್ಲಾ ಹುಡುಕಾಡುತ್ತೇವೆ. ಬ್ಯಾಗು, ಪ್ಲಾಸ್ಟಿಕ್‌ ಚೀಲ ಎಲ್ಲವನ್ನೂ ತಡಕಾಡುತ್ತೇವೆ. ಆಗಲೂ ಸಿಗದಿದ್ದಾಗ ಬ್ಯಾಗನ್ನು ಉಲ್ಟಾ ಮಾಡಿ ಕೊಡವುತ್ತೇವೆ. ಆಗ, ನಾವು ಹುಡುಕುತ್ತಿದ್ದ ವಸ್ತು ಅದರೊಳಗಿದ್ದರೆ ಕೆಳಕ್ಕೆ ಬೀಳುತ್ತದೆ. ಹಾಂ, ಈ ವಿಷಯ ಇಲ್ಲೇಕೆ ಬಂತೆಂದರೆ, ಇವತ್ತು ಹೇಳಿಕೊಡುತ್ತಿರುವ ಜಾದೂ ಅದೇ ರೀತಿಯದ್ದು. ಖಾಲಿ ಬಾಟಲಿಯ ತಳಕ್ಕೆ ಗುದ್ದಿ, ಮುಚ್ಚಳವನ್ನು ಸೃಷ್ಟಿಸುವಂಥದ್ದು. 

ಬೇಕಾಗುವ ವಸ್ತು: ತಂಪು ಪಾನೀಯದ ಖಾಲಿ ಪ್ಲಾಸ್ಟಿಕ್‌ ಬಾಟಲಿ, ಚಾಕು, ಗಮ್‌ಟೇಪ್‌

ಪ್ರದರ್ಶನ: ಜಾದೂಗಾರನ ಬಳಿ ಖಾಲಿ ಪ್ಲಾಸ್ಟಿಕ್‌ ಬಾಟಲಿಯೊಂದು ಇರುತ್ತದೆ. ಅದಕ್ಕೆ ಮುಚ್ಚಳ ಇರುವುದಿಲ್ಲ. ಜಾದೂಗಾರ ಅದನ್ನೆತ್ತಿಕೊಂಡು, ಪ್ರೇಕ್ಷಕರಿಗೆ ತೋರಿಸುತ್ತಾನೆ. ನಂತರ ಖಾಲಿ ಬಾಟಲಿಯ ಮೇಲೆ ಜೋರಾಗಿ ಕುಟ್ಟುತ್ತಾನೆ. ಇದ್ದಕ್ಕಿದ್ದಂತೆ, ಬಾಟಲಿಯ ಮುಚ್ಚಳವು ಠಣ್ಣೆಂದು ಕೆಳಕ್ಕೆ ಬೀಳುತ್ತದೆ. ಬಾಟಲಿಯೊಳಗೆ ಮುಚ್ಚಳ ಹೇಗೆ ಬಂತು?
 
ತಯಾರಿ: ಈ ಜಾದೂ ಪ್ರದರ್ಶನಕ್ಕೆ ಅಂಗಡಿಗಳಲ್ಲಿ ಸಿಗುವ ತಂಪು ಪಾನೀಯದ ಖಾಲಿ ಬಾಟಲಿಯನ್ನೇ ಬಳಸಬೇಕು. ಯಾಕೆಂದರೆ, ಅಂಥ ಬಾಟಲಿಗಳ ಮೇಲೆ ಕಂಪನಿಯ ಹೆಸರು ಬರೆದಿರುವ ಲೇಬಲ್‌ ಒಂದನ್ನು ಅಂಟಿಸಿರುತ್ತಾರೆ. ನಮ್ಮ ಜಾದೂವಿಗೆ ಅಗತ್ಯವಾಗಿ ಬೇಕಾಗಿರುವುದೇ ಅದು. ಪ್ರದರ್ಶನಕ್ಕೂ ಮೊದಲು ಆ ಲೇಬಲ್‌ ಅನ್ನು ಜೋಪಾನವಾಗಿ, ಹರಿಯದಂತೆ ತೆಗೆಯಿರಿ. ನಂತರ ಬಾಟಲಿಯ ಮೇಲೆ ಚಾಕುವಿನಿಂದ ಸ್ವಲ್ಪ ಅಗಲವಾದ ರಂಧ್ರ ಮಾಡಿ. ಆ ರಂಧ್ರದೊಳಗೆ ಬಾಟಲಿಯ ಮುಚ್ಚಳವನ್ನು ಹಾಕಿ, ಗಮ್‌ನ ಸಹಾಯದಿಂದ ಅಂಟಿಸಿ. ನಂತರ ಲೇಬಲ್‌ ಅನ್ನು ಪುನಃ ಬಾಟಲಿಯ ಮೇಲೆ ಅಂಟಿಸಿ. ಪ್ರೇಕ್ಷಕರಿಗೆ ಲೇಬಲ್‌ ಒಳಗಿನ ರಹಸ್ಯ ತಿಳಿಯುವುದಿಲ್ಲ. ಆಮೇಲೆ, ಬಾಯಲ್ಲಿ ಮಂತ್ರ ಜಪಿಸಿದಂತೆ ಮಾಡುತ್ತಾ ಜೋರಾಗೊಮ್ಮೆ ಬಾಟಲಿಯ ಮೇಲೆ ಕುಟ್ಟಿ. ಆ ಪೆಟ್ಟಿನ ರಭಸಕ್ಕೆ, ಬಾಟಲಿಗೆ ಅಂಟಿಕೊಂಡಿದ್ದ ಮುಚ್ಚಳ ಕೆಳಕ್ಕೆ ಬೀಳುತ್ತದೆ. ಮುಚ್ಚಳವು ಬಾಟಲಿಯೊಳಗೆ ಬಂದದ್ದು ಹೇಗೆಂದು ನೋಡುಗರು ಅಚ್ಚರಿಪಡುತ್ತಾರೆ. 

ವಿನ್ಸೆಂಟ್‌ ಲೋಬೋ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.