ಕುಟ್ಟಿದಾಗ ಮುಚ್ಚಳ ಸೃಷ್ಟಿ
Team Udayavani, Sep 6, 2018, 6:00 AM IST
ಯಾವುದಾದರೂ ವಸ್ತು ಕಳೆದುಹೋದಾಗ ಮನೆಯೆಲ್ಲಾ ಹುಡುಕಾಡುತ್ತೇವೆ. ಬ್ಯಾಗು, ಪ್ಲಾಸ್ಟಿಕ್ ಚೀಲ ಎಲ್ಲವನ್ನೂ ತಡಕಾಡುತ್ತೇವೆ. ಆಗಲೂ ಸಿಗದಿದ್ದಾಗ ಬ್ಯಾಗನ್ನು ಉಲ್ಟಾ ಮಾಡಿ ಕೊಡವುತ್ತೇವೆ. ಆಗ, ನಾವು ಹುಡುಕುತ್ತಿದ್ದ ವಸ್ತು ಅದರೊಳಗಿದ್ದರೆ ಕೆಳಕ್ಕೆ ಬೀಳುತ್ತದೆ. ಹಾಂ, ಈ ವಿಷಯ ಇಲ್ಲೇಕೆ ಬಂತೆಂದರೆ, ಇವತ್ತು ಹೇಳಿಕೊಡುತ್ತಿರುವ ಜಾದೂ ಅದೇ ರೀತಿಯದ್ದು. ಖಾಲಿ ಬಾಟಲಿಯ ತಳಕ್ಕೆ ಗುದ್ದಿ, ಮುಚ್ಚಳವನ್ನು ಸೃಷ್ಟಿಸುವಂಥದ್ದು.
ಬೇಕಾಗುವ ವಸ್ತು: ತಂಪು ಪಾನೀಯದ ಖಾಲಿ ಪ್ಲಾಸ್ಟಿಕ್ ಬಾಟಲಿ, ಚಾಕು, ಗಮ್ಟೇಪ್
ಪ್ರದರ್ಶನ: ಜಾದೂಗಾರನ ಬಳಿ ಖಾಲಿ ಪ್ಲಾಸ್ಟಿಕ್ ಬಾಟಲಿಯೊಂದು ಇರುತ್ತದೆ. ಅದಕ್ಕೆ ಮುಚ್ಚಳ ಇರುವುದಿಲ್ಲ. ಜಾದೂಗಾರ ಅದನ್ನೆತ್ತಿಕೊಂಡು, ಪ್ರೇಕ್ಷಕರಿಗೆ ತೋರಿಸುತ್ತಾನೆ. ನಂತರ ಖಾಲಿ ಬಾಟಲಿಯ ಮೇಲೆ ಜೋರಾಗಿ ಕುಟ್ಟುತ್ತಾನೆ. ಇದ್ದಕ್ಕಿದ್ದಂತೆ, ಬಾಟಲಿಯ ಮುಚ್ಚಳವು ಠಣ್ಣೆಂದು ಕೆಳಕ್ಕೆ ಬೀಳುತ್ತದೆ. ಬಾಟಲಿಯೊಳಗೆ ಮುಚ್ಚಳ ಹೇಗೆ ಬಂತು?
ತಯಾರಿ: ಈ ಜಾದೂ ಪ್ರದರ್ಶನಕ್ಕೆ ಅಂಗಡಿಗಳಲ್ಲಿ ಸಿಗುವ ತಂಪು ಪಾನೀಯದ ಖಾಲಿ ಬಾಟಲಿಯನ್ನೇ ಬಳಸಬೇಕು. ಯಾಕೆಂದರೆ, ಅಂಥ ಬಾಟಲಿಗಳ ಮೇಲೆ ಕಂಪನಿಯ ಹೆಸರು ಬರೆದಿರುವ ಲೇಬಲ್ ಒಂದನ್ನು ಅಂಟಿಸಿರುತ್ತಾರೆ. ನಮ್ಮ ಜಾದೂವಿಗೆ ಅಗತ್ಯವಾಗಿ ಬೇಕಾಗಿರುವುದೇ ಅದು. ಪ್ರದರ್ಶನಕ್ಕೂ ಮೊದಲು ಆ ಲೇಬಲ್ ಅನ್ನು ಜೋಪಾನವಾಗಿ, ಹರಿಯದಂತೆ ತೆಗೆಯಿರಿ. ನಂತರ ಬಾಟಲಿಯ ಮೇಲೆ ಚಾಕುವಿನಿಂದ ಸ್ವಲ್ಪ ಅಗಲವಾದ ರಂಧ್ರ ಮಾಡಿ. ಆ ರಂಧ್ರದೊಳಗೆ ಬಾಟಲಿಯ ಮುಚ್ಚಳವನ್ನು ಹಾಕಿ, ಗಮ್ನ ಸಹಾಯದಿಂದ ಅಂಟಿಸಿ. ನಂತರ ಲೇಬಲ್ ಅನ್ನು ಪುನಃ ಬಾಟಲಿಯ ಮೇಲೆ ಅಂಟಿಸಿ. ಪ್ರೇಕ್ಷಕರಿಗೆ ಲೇಬಲ್ ಒಳಗಿನ ರಹಸ್ಯ ತಿಳಿಯುವುದಿಲ್ಲ. ಆಮೇಲೆ, ಬಾಯಲ್ಲಿ ಮಂತ್ರ ಜಪಿಸಿದಂತೆ ಮಾಡುತ್ತಾ ಜೋರಾಗೊಮ್ಮೆ ಬಾಟಲಿಯ ಮೇಲೆ ಕುಟ್ಟಿ. ಆ ಪೆಟ್ಟಿನ ರಭಸಕ್ಕೆ, ಬಾಟಲಿಗೆ ಅಂಟಿಕೊಂಡಿದ್ದ ಮುಚ್ಚಳ ಕೆಳಕ್ಕೆ ಬೀಳುತ್ತದೆ. ಮುಚ್ಚಳವು ಬಾಟಲಿಯೊಳಗೆ ಬಂದದ್ದು ಹೇಗೆಂದು ನೋಡುಗರು ಅಚ್ಚರಿಪಡುತ್ತಾರೆ.
ವಿನ್ಸೆಂಟ್ ಲೋಬೋ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ