ಜಾಣ ಕಳ್ಳನಿಗಿತ್ತು ಜೇನು ತಿನ್ನುವ ಚಪಲ


Team Udayavani, Sep 6, 2018, 6:00 AM IST

2.jpg

ಅವನು ಅಂತಿಂಥ ಕಳ್ಳನಲ್ಲ. ಯಾರ ಕಣ್ಣಿಗೂ ಬೀಳದಂತೆ, ತನ್ನ ಕೆಲಸ ಮುಗಿಸಿಕೊಂಡು, ಪುಳಕ್ಕನೆ ಎಸ್ಕೇಪ್‌ ಆಗುವ ಚೋರ. ಆತ ಇರೋದು ದಕ್ಷಿಣ ಚೀನಾದಲ್ಲಿ. ಅಲ್ಲಿನ ಯುನ್ನಾನ್‌ ಪ್ರಾಂತ್ಯದಲ್ಲಿ ದಿನಪೂರ್ತಿ ದುಡಿದು ದಣಿದ ರೈತ, ಮನೆಗೆ ಹೋಗಿ ಮಲಗುವ ವೇಳೆಯೇ, ಈತ ಬಂದು ರಾತ್ರಿಯಿಡೀ ಕಳ್ಳತನ ಮಾಡ್ತಿದ್ದ. ಅವನು ಕದಿಯುವುದು ರೈತ ಕೂಡಿಟ್ಟ ಹಣವನ್ನೋ, ಅಡಗಿಸಿಟ್ಟ ಚಿನ್ನವನ್ನೋ ಅಲ್ಲ. ಅಲ್ಲಿನ ರೈತರ ಮೂಲಾಧಾರವೇ ಜೇನುಕೃಷಿ. ಆ ರುಚಿ ರುಚಿಯಾದ ತುಪ್ಪವನ್ನು ಕದಿಯಲೆಂದೇ ಬರುತ್ತಿದ್ದ ಈ ಕಳ್ಳ, ಅಪಾರ ನಷ್ಟ ಮಾಡಿಟ್ಟು ಹೋಗ್ತಿದ್ದ.

  ಈ ವಿಚಾರವಾಗಿ ರೈತರು ಪರಸ್ಪರ ಅನುಮಾನಿಸಿಕೊಂಡು, ಜಗಳವಾಡುತ್ತಿದ್ದರಂತೆ. ಕೆಲವರು ಪಕ್ಕದ ಮನೆಯವರ ಜೊತೆ ಫೈಟಿಂಗೂ ಮಾಡಿದ್ದರು. ಒಂದು ದಿನವಂತೂ ಊರಿನವರೆಲ್ಲ ನಿದ್ದೆಬಿಟ್ಟು, ಕಾದು ಕುಳಿತರು. ಹೇಗಾದರೂ ಮಾಡಿ ಅವನನ್ನು ಇವತ್ತು ಹಿಡಿಯಲೇಬೇಕು ಅಂತ. ಆದರೆ, ಅವತ್ತು ಜೇನು ಕಳವಾಯಿತೇ ವಿನಾ ಈ ಕಳ್ಳ ಸಿಕ್ಕಿಬೀಳಲಿಲ್ಲ. ಕೊನೆಗೆ ಈ ಪ್ರಕರಣ ಪೊಲೀಸ್‌ ಠಾಣೆಯ ಮೆಟ್ಟಿಲೇರಿತು. ಹತ್ತಾರು ಪೊಲೀಸರು ಬಂದು, ರಾತ್ರಿಯಿಡೀ ಜಮೀನು ಕಾದರು. ಅವತ್ತೂ ಜೇನು ಸ್ವಾಹವಾಗಿತ್ತು. ಕಳ್ಳ ಮಾತ್ರ ಕೈಗೆ ಸಿಗಲಿಲ್ಲ. 

  ಇದೆಲ್ಲ ನೋಡಿ ನೋಡಿ ಸಾಕಾಗಿ, ಕೊನೆಗೆ ಸರ್ಕಾರವೇ ಜಮೀನಿನ ಸುತ್ತ ಸಿಸಿ ಕ್ಯಾಮೆರಾ ಹಾಕಿತು. ಅದರ ಮರುದಿನ ಎಲ್ಲರಿಗೂ ಅಚ್ಚರಿಯ ಆಘಾತ ಆಯ್ತು. ಯಾಕೆ ಗೊತ್ತಾ? ಹಾಗೆ ಜೇನು ಕದಿಯುತ್ತಿದ್ದವನು, ರೈತರು ಅನುಮಾನಿಸಿದಂತೆ ಯಾವುದೇ ಮನುಷ್ಯ ಆಗಿರಲಿಲ್ಲ. ಒಂದು ಕಪ್ಪು ಆಕೃತಿ! ಹಾಗಾದರೆ, ಭೂತನಾ? ಅಲ್ಲ. ಝೂಮ್‌ ಮಾಡಿ ನೋಡಿದಾಗಲೇ ಗೊತ್ತಾಗಿದ್ದು, ಅದೊಂದು ಕರಡಿ ಅಂತ! ಈ ಚೋರನ ಮೇಲೆ ರೈತರೆಲ್ಲ ಈಗ ಸಿಟ್ಟಾಗಿದ್ದಾರೆ. ಊರಿನ ಸುತ್ತ ಬೆಂಕಿ ಹಾಕಿ, ಮನೆಗೆ ಒಬ್ಬೊಬ್ಬರಂತೆ ಈಗ ಕಾವಲು ನಿಲ್ಲುತ್ತಿದ್ದಾರಂತೆ. ವಾರವಾಯ್ತು. ಈ ಚೋರ, ಮತ್ತೆ ಜೇನಿನ ಆಸೆಗಾಗಿ, ಜಮೀನಿನತ್ತ ಬರಲಿಲ್ಲ!

 ಹುಷಾರು ಮಕ್ಕಳೇ, ಆ ಚೋರ ನಿಮ್ಮನೆ ತೋಟಕ್ಕೂ ಬಂದಾನು!!!

ಟಾಪ್ ನ್ಯೂಸ್

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.