ರಕ್ತ ಒಸರುವ ಮರ


Team Udayavani, Sep 6, 2018, 6:00 AM IST

7.jpg

ಮೊದಲು ಪತ್ತೆಯಾದಾಗ ಈ ಮರವನ್ನು ಕಂಡು ಸ್ಥಳೀಯರು ಭಯಪಟ್ಟಿದ್ದರಂತೆ. ಕೆಲವರು ಇದನ್ನು ಮಾಟ ಮಂತ್ರದ ಮರ ಅಂತಲೂ ಕರೆದು ಭಯ ಹುಟ್ಟಿಸಿದ್ದರಂತೆ!

ಆಪ್ರಿಕಾದ ದಕ್ಷಿಣ ಪ್ರದೇಶದಲ್ಲಿ ಪೆಟೋಕಾರ್ಪಸ್‌ ಅಂಗೋಲೆನ್ಸಿಸ್‌ ಎಂದು ಸಸ್ಯಶಾಸ್ತ್ರದಲ್ಲಿ ಗುರುತಿಸಲ್ಪಡುವ ಮರವಿದೆ. ಅದನ್ನು ಹೆಚ್ಚಾಗಿ ಗುರುತಿಸುವುದು “ಬ್ಲಿಡ್‌ ವುಡ್‌ ಟ್ರೀ’ ಎಂಬ ಹೆಸರಿನಿಂದ. ಯಾಕೆಂದರೆ, ಈ ಮರವನ್ನು ಕಡಿದಾಗ ಅದರಿಂದ ರಕ್ತದಂಥ ದ್ರವ ಒಸರುತ್ತದೆ. ಈ ಮರವನ್ನು ಸ್ಥಳೀಯರು, “ಕಿಯಾಟ್‌’, “ಮುನಿಂಗಾ’, “ಮುಕ್ವಾ’ ಮುಂತಾದ ಹೆಸರುಗಲಿಂದ ಕರೆಯುತ್ತಾರೆ. ಆದರೆ ವಿಶ್ವಾದ್ಯಂತ ಇದು ಪ್ರಸಿದ್ದಿಯಾಗಿರುವುದು “ಬ್ಲಿಡ್‌ ವುಡ್‌ ಟ್ರೀ’ ಎಂದು!

ಭಯ ಹುಟ್ಟಿಸಿದ್ದ ಮರ
ಬ್ಲಿಡ್‌ ವುಡ್‌ ಟ್ರೀಯ ಕಾಂಡವನ್ನಾಗಲಿ, ಕೊಂಬೆಯನ್ನಾಗಲಿ ಕೊಡಲಿ ಅಥವಾ ಇನ್ನಾವುದೇ ಹರಿತವಾದ ಆಯುಧದಿಂದ ಕಡಿದಾಗ, ಆ ಜಾಗದಿಂದ ಕೆಂಪು ಬಣ್ಣದ ದ್ರವ ಹೊರಬರುತ್ತದೆ. ದ್ರವ ಅಂಟಂಟಾಗಿರುವುದರಿಂದ ರಕ್ತವನ್ನೇ ಹೆಚ್ಚು ಹೋಲುತ್ತದೆ. ಮೊದಲು ಪತ್ತೆಯಾದಾಗ ಈ ಮರವನ್ನು ಕಂಡು ಸ್ಥಳೀಯರು ಭಯಪಟ್ಟಿದ್ದರಂತೆ. ಕೆಲವರು ಇದನ್ನು ಮಾಟ ಮಂತ್ರದ ಮರ ಅಂತಲೂ ಕರೆದು ಭಯ ಹುಟ್ಟಿಸಿದ್ದರಂತೆ. ಆದರೀಗ ಯಾರಿಗೂ ಆ ಭಯ ಇಲ್ಲ.

ದ್ರವದಿಂದ ಸೌಂದರ್ಯ
ಮೊದಲು ಭಯ ಪಟ್ಟಿದ್ದೇನೋ ನಿಜ, ಆದರೆ ಕ್ರಮೇಣ ಭಯ ಮಾಯವಾದ ನಂತರ ಮನುಷ್ಯ ರಕ್ತವರ್ಣದ ದ್ರವವನ್ನು ದಿನಬಳಕೆ ವಸ್ತುಗಳ ತಯಾರಿಕೆಯಲ್ಲಿ ಬಳಸಿಕೊಳ್ಳುವುದು ಹೇಗೆ ಎಂಬುದರ ಕುರಿತು ಅಧ್ಯಯನ ನಡೆಸಿದ. ಈಗ ದ್ರವವನ್ನು ಬಣ್ಣದ ವಸ್ತುಗಳ ತಯಾರಿಕೆಯಲ್ಲಿ ಬಳಸುತ್ತಿದ್ದಾರೆ. ಮತ್ತೆ ಕೆಲವೆಡೆ ಪ್ರಾಣಿಯ ಕೊಬ್ಬನ್ನು ಇದರೊಡನೆ ಬೆರೆಸಿ ಅನೇಕ ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿಯೂ ಬಳಸಲಾಗುತ್ತಿದೆ. ಮೈ ಮತ್ತು ಮುಖದ ಸೌಂದರ್ಯ ಹೆಚ್ಚಿಸಲು ಬಳಸುವ ಸೌಂದರ್ಯವರ್ಧಕಗಳ ತಯಾರಿಕೆಯಲ್ಲೇ ಇದರ ಬಳಕೆ ಹೆಚ್ಚು.

ಛತ್ರಿ ಮರ
ಬ್ಲಿಡ್‌ ವುಡ್‌ ಟ್ರೀ 12 ರಿಂದ 18 ಮೀಟರ್‌ ಎತ್ತರಕ್ಕೆ ಬೆಳೆಯುತ್ತದೆ. ಇದರ ತೊಗಟೆ ಬಹಳ ಒರಟು. ದಟ್ಟ ಕಂದು ಬಣ್ಣ. ಆಕರ್ಷಣೀಯವಾದ ಹಳದಿ ಹೂವುಗಳು ಇದರ ವೈಶಿಷ್ಟ್ಯ. ಮರದ ಕೊಂಬೆಗಳು ಬಹಳ ಎತ್ತರದಲ್ಲಿ ಕವಲೊಡೆಯುವುದರಿಂದ ಛತ್ರಿಯಾಕಾರದಂತೆ ಕಂಡುಬರುತ್ತದೆ. ಮಳೆ ಬಂದಾಗ ಇದರಡಿ ನಿಂತರೆ ಅಕ್ಷರಶಃ ಛತ್ರಿಯಂತೆ ಮಳೆಯಿಂದ ರಕ್ಷಣೆ ಪಡೆದುಕೊಳ್ಳಬಹುದು.

ಔಷಧೀಯ ಗುಣವೂ ಇದೆ 
ಬ್ಲಿಡ್‌ ವುಡ್‌ ಟ್ರೀನ ಕೆಂಪು ದ್ರವದಲ್ಲಿ ಅನೇಕ ಔಷಧೀಯ ಹಾಗೂ ಹಲವಾರು ಕಾಯಿಲೆಗಳನ್ನು ಗುಣಪಡಿಸುವ ಅಂಶವಿರುವುದನ್ನೂ ಸ್ಥಳೀಯರು ಕಂಡುಕೊಂಡಿದ್ದಾರೆ. ಗಾಯ ಬೇಗ ವಾಸಿಯಾಗಲು ಇದರ ಲೇಪನ ಅತ್ಯಂತ ಉಪಯುಕ್ತ. ಇದನ್ನು ಚರ್ಮದ ಮೇಲೆ ಹಚ್ಚಿದರೆ ಗಾಯ ಶೀಘ್ರ ಮಾಯುತ್ತದೆ ಎಂಬ ನಂಬಿಕೆ ಅವರಲ್ಲಿದೆ. ದ್ರವದ ಹೊರತಾಗಿ ಮರವನ್ನು ಪೀಠೊಪಕರಣ ತಯಾರಿಕೆಗೆ ಬಳಸಲಾಗುತ್ತಿದೆ. ಇವು ನೋಡಲು ಆಕರ್ಷಕವಾಗಿರುವುದರಿಂದ ಬೆಲೆಯೂ ಹೆಚ್ಚು. ಅತಿ ಹೆಚ್ಚು ಕಾಲ ಬಾಳಿಕೆ ಬರುವ ಮರವಾದ್ದರಿಂದ ದೋಣಿಗಳ ತಯಾರಿಕೆಯಲ್ಲಿ, ಸ್ನಾನದ ಮನೆಯ ನೆಲಹಾಸಾಗಿ ಹೆಚ್ಚು ಬಳಕೆಯಾಗುತ್ತದೆ.

ಪುರುಷೋತ್ತಮ್‌

ಟಾಪ್ ನ್ಯೂಸ್

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.