ಮಹಾರಾಜ ಆಗೋದು ಐಶ್ವರ್ಯದಿಂದಲ್ಲ, ಒಳ್ಳೆ ಮನಸ್ಸಿನಿಂದ!


Team Udayavani, Sep 6, 2018, 6:00 AM IST

8.jpg

     ಮೈಕೇಲ್‌ ಮಧುಸೂದನ ದತ್ತ ಅವರು ಇಡೀ ದೇಶದಲ್ಲಿ ಮಹಾದಾನಿಗಳು ಎಂದು ಪ್ರಸಿದ್ಧರಾಗಿದ್ದರು. ಬಂಗಾಳದಲ್ಲಂತೂ ಅವರು ಮನೆಮಾತು. ಬ್ರಾಹ್ಮಣನೊಬ್ಬ ಅವರ ಬಳಿಗೆ ಸಹಾಯ ಬಯಸಿ ಬಂದ. ಆದರೆ ದತ್ತ ಅವರ ಹರಕಲು ಅಂಗಿ, ಮಾಸಿದ ಮುಖ ನೋಡಿ ಅವರೆ ದತ್ತ ಎಂದು ಅನುಮಾನ ಬಂತು. ಅವನ ಸಂಶಯವನ್ನು ಗ್ರಹಿಸಿದ ದತ್ತ ಅವರು “ನಾನೇ ಮೈಕೇಲ್‌ ಮದುಸೂದನ ದತ್ತ. ನೀವು ನೋಡಿದ ಭಾವಚಿತ್ರ ಅದು ಗತಕಾಲದ್ದು. ಈಗ ನೋಡುತ್ತಿರುವುದು ಇಂದಿನ ದತ್ತ. ಹೇಳಿ, ನನ್ನಿಂದ ಏನಾಗಬೇಕಿತ್ತು?’ ಎಂದು ಕೇಳಿದರು. ಬ್ರಾಹ್ಮಣ ಸಂಕೋಚಪಡುತ್ತ ಹೇಳಿದ “ನಿಮ್ಮ ಹತ್ತಿರ ಬಂದವರಾರೂ ಬರಿಗೈಯಿಂದ ಮರಳಿದ್ದು ಇಲ್ಲ ಎಂದು ಕೇಳಿದ್ದೇನೆ. ಆದರೆ ನೀವೇ ಕಷ್ಟದಲ್ಲಿದ್ದೀರಿ. ನಿಮ್ಮ ಸಹಾಯ ಕೋರುವುದು ಸರಿಯಲ್ಲ. ನಾನು ಹೊರಡುತ್ತೇನೆ’ ಎಂದು ಹೊರಡಲು ಅನುವಾದ.

ಮಧುಸೂದನದತ್ತ ನಗುತ್ತ ತಮ್ಮ ಸಹಜವಾದ ತಿಳಿ ಹಾಸ್ಯದೊಂದಿಗೆ ಹೇಳಿದರು “ಪೂಜ್ಯರೆ, ಮೈಕೇಲ್‌ ದತ್ತ ಹಣ ಸಂಪತ್ತಿನ ದೃಷ್ಟಿಯಿಂದ ಬಡವನಾಗಿದ್ದರೂ ಮನಸ್ಸಿನಿಂದ ಮಹಾರಾಜರನ್ನೂ ಮೀರಿಸಿದವನಾಗಿದ್ದಾನೆ!’. ಅದು ಅವರ ಅಹಂಕಾರದ ಮಾತಾಗಿರಲಿಲ್ಲ. ಉದಾರ ಮನೋಭಾವದ ದ್ಯೋತಕವಾಗಿತ್ತು.

ಬ್ರಾಹ್ಮಣ ಸಂಕೋಚದಿಂದಲೇ ಹೇಳಿದ: “ನಾನೊಬ್ಬ ಬಡ ಪುರೋಹಿತ. ಮಗಳ ಮದುವೆಗೆ ದುಡ್ಡು ಹೊಂದಿಸಲಾಗುತ್ತಿಲ್ಲ’. ಇಷ್ಟು ಕೇಳುತ್ತಲೇ ಬ್ರಾಹ್ಮಣನಿಗೆ ದುಃಖ ತಡೆಯಲಾಗದೇ ಕಣ್ಣೀರು ಉಕ್ಕಿ ಬಂತು. ಪಂಚೆಯ ಸೆರಗಿನಿಂದ ಕಣ್ಣೀರು ಒರೆಸಿಕೊಂಡ. ದತ್ತ ಅವರು ಕೂಡಲೇ ತಮ್ಮ ಹರಕು ಅಂಗಿಯ ಜೇಬಿನಿಂದ ಇದ್ದ ಒಂದೇ ಒಂದು ಐವತ್ತು ರೂಪಾಯಿ ನೋಟು ತೆಗೆದು ಬ್ರಾಹ್ಮಣನ ಕೈಗಿತ್ತರು.  ಆಗಿನ ಕಾಲದಲ್ಲಿ ಐವತ್ತು ಎಂದರೆ ಸಾವಿರಕ್ಕೂ ಹೆಚ್ಚಿನ ಬೆಲೆ ಇತ್ತು. ಅವನಿಗೆ ತಾನು ಈ ಮನುಷ್ಯನನ್ನು ಸಂದೇಹ ಪಟ್ಟಿದ್ದಕ್ಕೆ ನಾಚಿಕೆಯಾಯಿತು. “ಇಂದು ನನಗೆ ನಿಮ್ಮ ಮಹಾನ್‌ ವ್ಯಕ್ತಿತ್ವದ ಪರಿಚಯವಾಯಿತು. ದಾನಶೂರ ಕರ್ಣ, ಮಹಾದಾನಿ ಶಿಬಿ ಚಕ್ರವರ್ತಿ, ಸತ್ಯ ಹರಿಶ್ಚಂದ್ರ ಮುಂತಾದ ಮಹನೀಯರನ್ನು ನಿಮ್ಮಲ್ಲಿ ಕಂಡೆ’ ಎಂದು ಆತ ನಮಸ್ಕರಿಸಿದ.

 ವನರಾಗ ಶರ್ಮ

ಟಾಪ್ ನ್ಯೂಸ್

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.