ಮಹಾರಾಜ ಆಗೋದು ಐಶ್ವರ್ಯದಿಂದಲ್ಲ, ಒಳ್ಳೆ ಮನಸ್ಸಿನಿಂದ!


Team Udayavani, Sep 6, 2018, 6:00 AM IST

8.jpg

     ಮೈಕೇಲ್‌ ಮಧುಸೂದನ ದತ್ತ ಅವರು ಇಡೀ ದೇಶದಲ್ಲಿ ಮಹಾದಾನಿಗಳು ಎಂದು ಪ್ರಸಿದ್ಧರಾಗಿದ್ದರು. ಬಂಗಾಳದಲ್ಲಂತೂ ಅವರು ಮನೆಮಾತು. ಬ್ರಾಹ್ಮಣನೊಬ್ಬ ಅವರ ಬಳಿಗೆ ಸಹಾಯ ಬಯಸಿ ಬಂದ. ಆದರೆ ದತ್ತ ಅವರ ಹರಕಲು ಅಂಗಿ, ಮಾಸಿದ ಮುಖ ನೋಡಿ ಅವರೆ ದತ್ತ ಎಂದು ಅನುಮಾನ ಬಂತು. ಅವನ ಸಂಶಯವನ್ನು ಗ್ರಹಿಸಿದ ದತ್ತ ಅವರು “ನಾನೇ ಮೈಕೇಲ್‌ ಮದುಸೂದನ ದತ್ತ. ನೀವು ನೋಡಿದ ಭಾವಚಿತ್ರ ಅದು ಗತಕಾಲದ್ದು. ಈಗ ನೋಡುತ್ತಿರುವುದು ಇಂದಿನ ದತ್ತ. ಹೇಳಿ, ನನ್ನಿಂದ ಏನಾಗಬೇಕಿತ್ತು?’ ಎಂದು ಕೇಳಿದರು. ಬ್ರಾಹ್ಮಣ ಸಂಕೋಚಪಡುತ್ತ ಹೇಳಿದ “ನಿಮ್ಮ ಹತ್ತಿರ ಬಂದವರಾರೂ ಬರಿಗೈಯಿಂದ ಮರಳಿದ್ದು ಇಲ್ಲ ಎಂದು ಕೇಳಿದ್ದೇನೆ. ಆದರೆ ನೀವೇ ಕಷ್ಟದಲ್ಲಿದ್ದೀರಿ. ನಿಮ್ಮ ಸಹಾಯ ಕೋರುವುದು ಸರಿಯಲ್ಲ. ನಾನು ಹೊರಡುತ್ತೇನೆ’ ಎಂದು ಹೊರಡಲು ಅನುವಾದ.

ಮಧುಸೂದನದತ್ತ ನಗುತ್ತ ತಮ್ಮ ಸಹಜವಾದ ತಿಳಿ ಹಾಸ್ಯದೊಂದಿಗೆ ಹೇಳಿದರು “ಪೂಜ್ಯರೆ, ಮೈಕೇಲ್‌ ದತ್ತ ಹಣ ಸಂಪತ್ತಿನ ದೃಷ್ಟಿಯಿಂದ ಬಡವನಾಗಿದ್ದರೂ ಮನಸ್ಸಿನಿಂದ ಮಹಾರಾಜರನ್ನೂ ಮೀರಿಸಿದವನಾಗಿದ್ದಾನೆ!’. ಅದು ಅವರ ಅಹಂಕಾರದ ಮಾತಾಗಿರಲಿಲ್ಲ. ಉದಾರ ಮನೋಭಾವದ ದ್ಯೋತಕವಾಗಿತ್ತು.

ಬ್ರಾಹ್ಮಣ ಸಂಕೋಚದಿಂದಲೇ ಹೇಳಿದ: “ನಾನೊಬ್ಬ ಬಡ ಪುರೋಹಿತ. ಮಗಳ ಮದುವೆಗೆ ದುಡ್ಡು ಹೊಂದಿಸಲಾಗುತ್ತಿಲ್ಲ’. ಇಷ್ಟು ಕೇಳುತ್ತಲೇ ಬ್ರಾಹ್ಮಣನಿಗೆ ದುಃಖ ತಡೆಯಲಾಗದೇ ಕಣ್ಣೀರು ಉಕ್ಕಿ ಬಂತು. ಪಂಚೆಯ ಸೆರಗಿನಿಂದ ಕಣ್ಣೀರು ಒರೆಸಿಕೊಂಡ. ದತ್ತ ಅವರು ಕೂಡಲೇ ತಮ್ಮ ಹರಕು ಅಂಗಿಯ ಜೇಬಿನಿಂದ ಇದ್ದ ಒಂದೇ ಒಂದು ಐವತ್ತು ರೂಪಾಯಿ ನೋಟು ತೆಗೆದು ಬ್ರಾಹ್ಮಣನ ಕೈಗಿತ್ತರು.  ಆಗಿನ ಕಾಲದಲ್ಲಿ ಐವತ್ತು ಎಂದರೆ ಸಾವಿರಕ್ಕೂ ಹೆಚ್ಚಿನ ಬೆಲೆ ಇತ್ತು. ಅವನಿಗೆ ತಾನು ಈ ಮನುಷ್ಯನನ್ನು ಸಂದೇಹ ಪಟ್ಟಿದ್ದಕ್ಕೆ ನಾಚಿಕೆಯಾಯಿತು. “ಇಂದು ನನಗೆ ನಿಮ್ಮ ಮಹಾನ್‌ ವ್ಯಕ್ತಿತ್ವದ ಪರಿಚಯವಾಯಿತು. ದಾನಶೂರ ಕರ್ಣ, ಮಹಾದಾನಿ ಶಿಬಿ ಚಕ್ರವರ್ತಿ, ಸತ್ಯ ಹರಿಶ್ಚಂದ್ರ ಮುಂತಾದ ಮಹನೀಯರನ್ನು ನಿಮ್ಮಲ್ಲಿ ಕಂಡೆ’ ಎಂದು ಆತ ನಮಸ್ಕರಿಸಿದ.

 ವನರಾಗ ಶರ್ಮ

ಟಾಪ್ ನ್ಯೂಸ್

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು

Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.