ತಿರುಗುಬಾಣವಾದ ಪಿತೂರಿ


Team Udayavani, Sep 6, 2018, 6:00 AM IST

9.jpg

ಒಂದೂರಲ್ಲಿ ರಾಮು ಮತ್ತು ಭೀಮು ಎಂಬ ಇಬ್ಬರು ಸ್ನೇಹಿತರಿದ್ದರು. ಇಬ್ಬರೂ ಅನೇಕ ವರ್ಷಗಳಿಂದ ಕುಂಬಾರಿಕೆಯಲ್ಲಿ ತೊಡಗಿದ್ದರು. ಸ್ನೇಹಿತರಾಗಿದ್ದರೂ ಅವರಿಬ್ಬರ ನಡುವೆ ವ್ಯತ್ಯಾಸಗಳಿದ್ದವು. ರಾಮು ಬಹಳ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದ. ಅಂದಿನ ಕೆಲಸವನ್ನು ಅಂದೇ ಮುಗಿಸುತ್ತಿದ್ದ. ಆಲಸ್ಯತನ ತೋರುತ್ತಿರಲಿಲ್ಲ. ಅವನ ಶ್ರಮ ಅವನ ಮಡಕೆಗಳಲ್ಲಿ ಕಾಣುತ್ತಿತ್ತು. ಅವನು ತಯಾರಿಸುತ್ತಿದ್ದ ಮಡಕೆಗಳು ಉತ್ತಮ ಗುಣಮಟ್ಟದ್ದಾಗಿರುತ್ತಿದ್ದವು. ಹೀಗಾಗಿ ಜನರು ಅವುಗಳನ್ನು ಕೊಳ್ಳಲು ಮುಗಿಬೀಳುತ್ತಿದ್ದರು. ಪರ ಊರಿನ ಮಾರುಕಟ್ಟೆಯಲ್ಲಿಯೂ ರಾಮುವಿನ ಮಡಕೆಗಳಿಗೆ ಬಹಳ ಬೇಡಿಕೆ ಇತ್ತು. 

ಅವನ ಗೆಳೆಯ ಭೀಮು ರಾಮುವಿಗೆ ತದ್ವಿರುದ್ಧ ಸ್ವಭಾವದವನು. ಅಂದಿನ ಕೆಲಸವನ್ನು ಅಂದೇ ಮುಗಿಸುತ್ತಿರಲಿಲ್ಲ. ಮೈಗಳ್ಳನೂ ಆಗಿದ್ದ. ಹೀಗಾಗಿ ಅವನ ಮಡಕೆಗಳು ಮುಟ್ಟಿದರೆ ಒಡೆದುಹೋಗುವಂತಿರುತ್ತಿದ್ದವು. ಜನರು ಅವುಗಳನ್ನು ಕೊಳ್ಳುತ್ತಲೂ ಇರಲಿಲ್ಲ. ಅದರ ಮೇಲೆ ಭೀಮು ದುರಾಸೆ ಪ್ರವೃತ್ತಿಯುಳ್ಳವನಾಗಿದ್ದ. ರಾಮು ಮತ್ತು ಬೀಮು ಹೇಗೆ ಸ್ನೇಹಿತರಾದರು ಎನ್ನುವುದು ಜನರಿಗೆ ಬಿಡಿಸಲಾರದ ಒಗಟಾಗಿತ್ತು.

ದುಡಿಮೆಯಿಂದ ಲಾಭವಾಗಿ ರಾಮುವಿನ ಬಳಿ ದುಡ್ಡು ಸೇರುತ್ತಿತ್ತು. ಕ್ರಮೇಣ ಭೀಮುವಿಗೆ ಅದನ್ನು ಕಂಡು ಸಹಿಸಿಕೊಳ್ಳಲಾಗಲಿಲ್ಲ. ಶುರುವಿನಲ್ಲಿ ಚಿಕ್ಕದಾಗಿ ಮೊಳೆತಿದ್ದ ಅಸೂಯೆಯ ಬೀಜ ದಿನಗಳು ಉರುಳುವಷ್ಟರಲ್ಲಿ ಹೆಮ್ಮರವಾಗಿ ಬೆಳೆದಿತ್ತು. ತನ್ನ ಮಡಕೆಗಳನ್ನು ಯಾಕೆ ಜನರು ಕೊಳ್ಳುತ್ತಿಲ್ಲ ಎಂದು ಅವನು ಚಿಂತಿಸಿದ. ಅವನಿಗೆ ತನ್ನ ಮಡಕೆಗಳಲ್ಲಿ ಗುಣಮಟ್ಟ ಇಲ್ಲ ಎನ್ನುವುದನ್ನು ಒಪ್ಪಿಕೊಳ್ಳಲಾಗಲಿಲ್ಲ. ಅವನು ತನ್ನ ನಷ್ಟಕ್ಕೆ ರಾಮುವನ್ನೇ ಹೊಣೆಗಾರನನ್ನಾಗಿಸಿದ. ಹೇಗಾದರೂ ಮಾಡಿ ಅವನನ್ನು ಊರಿನಿಂದ ಹೊರಗೆ ಓಡಿಸಿದರೆ ತನ್ನ ಮಡಕೆಗಳಿಗೆ ಬೇಡಿಕೆ ಬರುತ್ತದೆ ಎಂದು ಕೆಟ್ಟ ಯೋಚನೆ ಮಾಡಿದ.

ಭೀಮು ರಾಜನನ್ನು ನೋಡಲೆಂದು ಅರಮನೆಗೆ ಹೋದ. ಅರಮನೆಯ ಹೊರಗೆ ನಿಂತಿದ್ದ ರಾಜನ ಪಟ್ಟದಾನೆಯನ್ನು ನೊಡಿದಾಗ ಭೀಮುಗೆ ತಲೆಯಲ್ಲಿ ಕೆಟ್ಟ ಉಪಾಯ ಹೊಳೆಯಿತು. ಅವನು ರಾಜನ ಬಳಿ “ನಮ್ಮೂರಿನಲ್ಲಿ ರಾಮು ಎಂಬ ಅತ್ಯುತ್ತಮ ದರ್ಜೆಯ ಕುಂಬಾರ ಇದ್ದಾನೆ. ಅವನಿಗೆ ನಿಮ್ಮ ಕಪ್ಪು ಆನೆಯನ್ನು ಬಿಳಿಯದಾಗಿ ಮಾಡಿಕೊಡುವ ಸಾಮರ್ಥ್ಯ ಇದೆ’ ಎಂದು ಹೇಳಿದ. ರಾಜ ನಂಬಲಿಲ್ಲ. ಆದರೆ ಭೀಮು “ಅವನನ್ನು ಕರೆಸಿ ಕೇಳಿದರೆ ಮೊದಲಿಗೆ ಒಪ್ಪಿಕೊಳ್ಳುವುದಿಲ್ಲ. ಆದರೆ ಕಠಿಣ ಶಿಕ್ಷೆ ಕೊಡುವುದಾಗಿ ಬೆದರಿಸಿದರೆ ಆನೆಯನ್ನು ಬೆಳ್ಳಗೆ ಮಾಡಿಕೊಡುತ್ತಾನೆ’ ಎಂದು ರಾಜನ ಕಿವಿ ಚುಚ್ಚಿದ. ಈ ಮಾತನ್ನು ನಿಜವೆಂದು ನಂಬಿದ ರಾಜ ಕೂಡಲೇ ಭಟರನ್ನು ಕಳುಹಿಸಿ ರಾಮುವನ್ನು ಅರಮನೆಗೆ ಕರೆಸಿಕೊಂಡ. ತನ್ನ ಆನೆಯನ್ನು ಬಿಳಿಯಾಗಿಸಲು ಸೂಚಿಸಿದ. ರಾಜನ ಮಾತನ್ನು ಕೇಳಿ ರಾಮು ತಬ್ಬಿಬ್ಟಾದ. ತನಗೆ ಆ ಶಕ್ತಿ ಇಲ್ಲವೆಂದು ಬೇಡಿಕೊಂಡ. ಆದರೆ ರಾಜ ಕೇಳಲಿಲ್ಲ. ಈ ಕೆಲಸ ಮಾಡದಿದ್ದರೆ ಶಿರಚ್ಛೇದನ ಮಾಡುವುದಾಗಿ ಬೆದರಿಸಿದ. ಪಕ್ಕದಲ್ಲೇ ನಸುನಗುತ್ತಾ ನಿಂತಿದ್ದ ಭೀಮುವನ್ನು ನೋಡಿದ ರಾಮುವಿಗೆ ಇದೆಲ್ಲಾ ಅವನದೇ ಪಿತೂರಿ ಎಂದು ಅರ್ಥವಾಯಿತು. 

ಸ್ವಲ್ಪ ಯೋಚನೆ ಮಾಡಿದ ರಾಮು, “ಮಹಾರಾಜರೇ, ನಿಮ್ಮ ಆನೆಯನ್ನು ಬೆಳ್ಳಗೆ ಮಾಡುವುದು ಬಹಳ ಸುಲಭ. ಅದರ ಮೈಯನ್ನು ಹದವಾಗಿ ಕಾದ ನೀರಿನಲ್ಲಿ ತೊಳೆದು, ಅಂಟವಾಳ ಕಾಯಿ, ಸೀಗೇಕಾಯಿಪುಡಿ ಬೆರೆಸಿ ಸ್ವತ್ಛಗೊಳಿಸಬೇಕು, ಆದರೆ ಅದಕ್ಕಾಗಿ ಆನೆ ನಿಲ್ಲುವಷ್ಟು ದೊಡ್ಡದಾದ ಮಣ್ಣಿನ ಬುಗುಣಿಯ ಅವಶ್ಯಕತೆ ಇದೆ.  ಅಷ್ಟು ದೊಡ್ಡ ಮಣ್ಣಿನ ಬುಗುಣಿಯನ್ನು ಭೀಮು ಮಾತ್ರ ತಯಾರಿಸಲು ಸಾಧ್ಯ’ ಎಂದು ಹೇಳಿಬಿಟ್ಟ. ರಾಜ ಭೀಮುವಿಗೆ ಒಂದೇ ವಾರದಲ್ಲಿ ಆನೆ ಹಿಡಿಯುವಷ್ಟು ದೊಡ್ಡದಾದ ಮಣ್ಣಿನ ಬುಗುಣಿಯನ್ನು ತಯಾರಿಸಬೇಕೆಂದು ಆಜ್ಞೆ ಹೊರಡಿಸಿದನು.

ಭೀಮುವಿನ ಉಪಾಯ ಅವನಿಗೆ ತಿರುಗುಬಾಣವಾಗಿತ್ತು. ಆದರೆ ರಾಜರಿಗೆ ಮಾಡುವುದಿಲ್ಲ ಎಂದು ಹೇಳಲಾಗದೆ ಮಣ್ಣಿನ ಬುಗುಣಿ ತಯಾರಿಯನ್ನು ಶುರು ಮಾಡಿದ. ನಾಲ್ಕು ಬಂಡಿಯಷ್ಟು ಮಣ°ನ್ನು ತರಿಸಿ, ಅರಮನೆಯ ಪ್ರಾಂಗಣದಲ್ಲಿಯೇ ದೊಡ್ಡ ಬುಗುಣಿಯನ್ನು ಸಿದ್ಧಪಡಿಸಿದನು. ರಾಮು ಆನೆಯನ್ನು ಬುಗುಣಿಯೊಳಗೆ ಇಳಿಸುತ್ತಿದ್ದಂತೆ ಅದರ ಭಾರಕ್ಕೆ ಮಣ್ಣಿನ ಬುಗುಣಿ ಒಡೆದು ಚೂರಾಯಿತು. ಇದರಿಂದ ಸಿಟ್ಟಿಗೆದ್ದ ರಾಜನು ಭೀಮುವನ್ನು ರಾಜ್ಯದಿಂದ ಗಡೀಪಾರು ಮಾಡಿದನು. ರಾಮು ನಡೆದುದೆಲ್ಲವನ್ನೂ ರಾಜರಿಗೆ ವಿವರಿಸಿದನು. ರಾಜ ಅವನಿಗೆ ಪಾರಿತೋಷಕ ನೀಡಿ ಕಳುಹಿಸಿಕೊಟ್ಟನು. 

ಹರೀಶ್‌ ಕುಮಾರ್‌

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.