ಚಿನ್ನ ತಯಾರಿಸುವ ಉಪಾಯ!


Team Udayavani, Sep 20, 2018, 6:00 AM IST

7.jpg

ಬಹಳ ಹಿಂದೆ ಮ್ಯಾನ್ಮಾರ್‌ನ ನದೀ ತೀರದಲ್ಲಿ ತುಝಾ ಹಾಗೂ ತೆಂಘೀ ಎಂಬ ದಂಪತಿಗಳಿದ್ದರು. ತೆಂ  ತನ್ನನ್ನು ತಾನು ರಾಸಾಯನಿಕ ಶಾಸ್ತ್ರಜ್ಞನೆಂದು ಕರೆದುಕೊಳ್ಳುತ್ತಿದ್ದ. ಅಲ್ಲದೆ ಯಾವಾಗಲೂ ಮಣ್ಣನ್ನು ಚಿನ್ನವನ್ನಾಗಿ ಪರಿವರ್ತಿಸುವ ಕನಸು ಕಾಣುತ್ತಿದ್ದ. ಪ್ರತಿದಿನ ಅದೇ ಪರಿಶೋಧನೆಯಲ್ಲಿ ತೊಡಗಿಕೊಂಡು ತನ್ನ ಸಮಯ ಮತ್ತು ಹಣವನ್ನು ವ್ಯಯಿಸುತ್ತಿದ್ದ. ಇದರಿಂದ ಬೇಸರಗೊಂಡ ಆತನ ಹೆಂಡತಿ “ಯಾವುದಾದರೂ ಒಳ್ಳೆಯ ಕೆಲಸಕ್ಕೆ ಸೇರಿಕೊಂಡು ಹಣ ಸಂಪಾದನೆ ಮಾಡಬಾರದಾ? ಜೀವನ ನಡೆಸುವುದೇ ದುಸ್ತರವಾಗಿದೆ’ ಎಂದು ಅಲವತ್ತುಕೊಳ್ಳುತ್ತಿದ್ದಳು. ಆದರೆ ಅದ್ಯಾವುದೂ ತೆಂ ಯ ಕಿವಿಗೆ ಬೀಳಲಿಲ್ಲ. ಆತ ತನ್ನ ಪಾಡಿಗೆ ತಾನು ಪ್ರಯೋಗಗಳನ್ನು ಮಾಡುತ್ತ, ಚಿನ್ನ ಗಳಿಸುವ ಮತ್ತು ಶ್ರೀಮಂತನಾಗುವ ಕನಸು ಕಾಣುತ್ತಲೇ ಇದ್ದ. ಇದರಿಂದ ಮನನೊಂದುಕೊಂಡ ತುಝಾ ತನ್ನ ವೃದ್ಧ ತಂದೆಯ ಬಳಿ ಬಂದು ತನ್ನ ಸಮಸ್ಯೆಯನ್ನು ನಿವೇದಿಸಿಕೊಂಡಳು. ತುಝಾಳ ತಂದೆ ಒಂದು ಸೂಕ್ತ ಉಪಾಯ ಯೋಚಿಸಿ, ತೆಂಘಿಯನ್ನು ತನ್ನ ಬಳಿಗೆ ಕರೆತರುವಂತೆ ಸೂಚಿಸಿದ.   

ಮರುದಿನ ತೆಂಘೀ ಮಾವನನ್ನು ಕಾಣಲು ಆತನ ಮನೆಗೆ ಹೋದ. ಮಾವ ತೆಂಘೀಯನ್ನು ತನ್ನ ಹತ್ತಿರ ಕೂರಿಸಿಕೊಂಡು “ನಾನೂ ಕೂಡ ಯೌವನದಲ್ಲಿ ನಿನ್ನ ಹಾಗೆ ರಾಸಾಯನಿಕ ಶಾಸ್ತ್ರಜ್ಞನಾಗಿದ್ದೆ. ಕೆಲ ಹಂತದವರೆಗೆ ನಾನೂ ಪ್ರಯೋಗಗಳನ್ನು ಮಾಡಿದ್ದೇನೆ. ನಿನ್ನ ಪ್ರಯೋಗಗಳನ್ನು ವಿವರಿಸು’ ಎಂದನು. ಇಬ್ಬರೂ ಅದೇ ವಿಷಯವಾಗಿ ತುಂಬಾ ಹೊತ್ತು ಚರ್ಚಿಸಿದರು. 

ಕೊನೆಗೆ ತೆಂ ಯ ಮಾವ ಎದ್ದು ನಿಂತು “ನೀನು ನಿನ್ನ ಸಂಶೋಧನೆಯಲ್ಲಿ ತುಂಬಾ ಮುಂದೆ ಹೋಗಿದ್ದಿ. ಅದಕ್ಕಾಗಿ ಹೃತೂ³ರ್ವಕ ಅಭಿನಂದನೆಗಳು. ಶೀಘ್ರವೇ ಮಣ್ಣನ್ನು ಬಂಗಾರವನ್ನಾಗಿ ಪರಿವರ್ತಿಸುವಲ್ಲಿ ನೀನು ಯಶಸ್ವಿಯಾಗಲಿದ್ದಿ. ಆದರೆ ನಿನ್ನ ಪ್ರಯೋಗದಲ್ಲಿ ಒಂದು ಮುಖ್ಯ ಪದಾರ್ಥವನ್ನು ಕಡೆಗಣಿಸಿದ್ದಿ. ನನಗೆ ಆ ವಸ್ತುವಿನ ಬಗ್ಗೆ ತಿಳಿದಾಗ ವೃದ್ಧಾಪ್ಯ ಸುàಪಿಸಿತ್ತು. ಹಾಗಾಗಿ ಬಳಸಲಾಗಲಿಲ್ಲ. ನೀನಾದರೂ ಪ್ರಯತ್ನಿಸು’ ಎಂದನು. ಈ ಮಾತುಗಳನ್ನು ಕೇಳಿ ತೆಂ ಯ ಉತ್ಸಾಹ ಮುಗಿಲು ಮುಟ್ಟಿತು. ಆತ ಕೂಡಲೆ “ಅದು ಯಾವ ಪದಾರ್ಥ? ನಾನು ಅದನ್ನು ಖಂಡಿತವಾಗಿಯೂ ಬಳಸುವೆ’ ಎಂದನು. ಅದಕ್ಕುತ್ತರವಾಗಿ ವೃದ್ದನು “ತುಂಬಾ ಸಂತೋಷ ಮಗನೇ. ಆ ರಹಸ್ಯ ಪದಾರ್ಥವು ಬಾಳೆ ಎಲೆಯಲ್ಲಿ ಸಿಗುವ ಬೆಳ್ಳಿಯಂಥ ಪುಡಿ. ಅದಕ್ಕಾಗಿ ನೀನು ಸ್ವತಃ ಬಾಳೆಗಿಡಗಳನ್ನು ಬೆಳೆದು, ಕೆಲವು ಮಂತ್ರಗಳನ್ನು ಹೇಳಬೇಕು. ಆಗ ಬೆಳೆದ ಎಲೆಯಲ್ಲಿ ಸಿಗುವ ಬೆಳ್ಳಿಯಂಥ ಪುಡಿಗೆ ಮಂತ್ರಶಕ್ತಿ ಲಭಿಸುತ್ತದೆ. ಒಂದು ಕಿಲೋಗ್ರಾಂ ನಷ್ಟು ಪುಡಿ ಇದ್ದರೆ ನಿನ್ನ ಪ್ರಯೋಗ ಯಶಸ್ವಿಯಾದಂತೆ’ ಎಂದನು. ಈ ಮಾತನ್ನು ಕೇಳಿ ಅದಮ್ಯ ಉತ್ಸಾಹದಿಂದ ತೆಂ  ಬಾಳೆ ಬೆಳೆಯಲು ಬೇಕಾದ ಹಣವನ್ನು ತೆಗೆದುಕೊಂಡು, ಮಂತ್ರವನ್ನೂ ಕಲಿತುಕೊಂಡು ಬಂದನು.    

ಮರುದಿನವೇ ಮನೆಯ ಹತ್ತಿರ ಒಂದು ಜಮೀನು ಖರೀದಿಸಿ, ನೆಲವನ್ನು ಹದಗೊಳಿಸಿ, ಮಂತ್ರವನ್ನು ಪಠಿಸುತ್ತ ತಾನೇ ಸ್ವತಃ ಬಾಳೆಯ ಗಿಡಗಳನ್ನು ನೆಟ್ಟನು. ಪ್ರತಿದಿನ ಶ್ರದ್ಧೆಯಿಂದ ಬಾಳೆಗಿಡಗಳನ್ನು ಕಾದನು. ಗಿಡಗಳು ದೊಡ್ಡವಾಗಿ, ಬಾಳೆಹಣ್ಣುಗಳ ಗೊನೆ ಕಾಣಿಸಿಕೊಂಡವು. ಆಗ ಅದರ ಎಲೆಗಳಿಂದ ಬೆಳ್ಳಿಯಂಥ ಪುಡಿಯನ್ನು ಸಂಗ್ರಸಿದನು. ಕೆಲ ಗ್ರಾಂಗಳಷ್ಟೆ ಪುಡಿ ಸಂಗ್ರಹವಾಯಿತು. ಒಂದು ಕೆ.ಜಿ ಯಷ್ಟಾಗಲು ತೆಂ  ಜಮೀನು ವಿಸ್ತರಿಸಿ, ಇನ್ನಷ್ಟು ಬಾಳೆ ಗಿಡಗಳನ್ನು ನೆಟ್ಟನು. 

ವರ್ಷಗಳು ಕಳೆದವು. ತೆಂ  ತನ್ನ ನಿರ್ಧಾರದಿಂದ ಹಿಂದೆ ಸರಿಯದೇ ಪ್ರಯತ್ನವನ್ನು ಮುಂದುವರಿಸಿದನು. ಕೊನೆಗೂ ಆತ ಒಂದು ಕೆ.ಜಿಯಷ್ಟು ಪುಡಿ ಸಂಗ್ರಹಿಸಿದನು. ಆ ದಿನ ಸಂತೋಷದಿಂದ ಓಡುತ್ತಾ ಮಾವನ ಮನೆಗೆ ಬಂದನು. ಮಾವನು “ತೆಂ , ನೀನು ತುಂಬಾ ಒಳ್ಳೆಯ ಕೆಲಸವನ್ನು ಮಾಡಿದ್ದೀಯಾ. ಈಗ ನಾನು ಮಣ್ಣನ್ನು ಹೇಗೆ ಚಿನ್ನವನ್ನಾಗಿ ಪರಿವರ್ತಿಸಬಹುದೆಂದು ತೋರಿಸುತ್ತೇನೆ.’ ಎಂದು ಹೇಳಿ ಮಗಳು ತುಝಾಳನ್ನು ಕೂಗಿ ಕರೆದನು. “ತುಝಾ, ಅಳಿಯಂದಿರು ಬಾಳೆಯ ಎಲೆಯ ಮೇಲಿನ ಪುಡಿಯನ್ನು ಸಂಗ್ರಹಿಸುತ್ತಿದ್ದಾಗ, ನೀನು ಏನು ಮಾಡಿದೆ?’ ಎಂದು ಕೇಳಿದನು. ಅವಳು, “ಅಪ್ಪಾ ನಾನು ಬಾಳೆಗೊನೆಗಳನ್ನೆಲ್ಲಾ ಮಾರಿ ಹಣವನ್ನು ಸಂಪಾದಿಸಿದೆ.’ ಎಂದು ಚೀಲದಿಂದ ಚಿನ್ನದ ನಾಣ್ಯಗಳನ್ನು ತೋರಿಸಿದಳು. ತೆಂ ಗೆ ತನ್ನ ಮೂರ್ಖತನದ ಅರಿವಾಯಿತು. ಇಬ್ಬರ ಬಳಿಯೂ ಅವನು ಕ್ಷಮಾಪಣೆ ಕೇಳಿದ. ತೆಂ  ಮತ್ತು ತುಝಾ ಆವತ್ತಿನಿಂದ ಸುಖವಾಗಿ ಬಾಳಿದರು.

ಅನುವಾದ: ಸುಮನ್‌ ದುಬೈ

ಟಾಪ್ ನ್ಯೂಸ್

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.