ಅರಮನೆಗೆ ಟೆಲಿಫೋನ್‌ ಬಂದಾಗ ಏನಾಯ್ತು?


Team Udayavani, Sep 27, 2018, 6:00 AM IST

2.jpg

ಚೀನಾದ ರಾಜ ಮನೆತನದ ಕಟ್ಟ ಕಡೆಯ ಕುಡಿಯ ಹೆಸರು ಪುಯಿ. ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ಆತ ಬದುಕಿದ್ದ. ಅವನು ಅರಮನೆ ಬಿಟ್ಟು ಆಚೆ ಜಗತ್ತನ್ನು ಕಂಡವನೇ ಅಲ್ಲ. ರಾಜರ ಸಲಹೆಗಾರರು ಭದ್ರತೆಯ ದೃಷ್ಟಿಯಿಂದ ಅವನನ್ನು ಅರಮನೆಯಿಂದ ಆಚೆಗೆ ಹೋಗದಂತೆ ತಡೆಹಿಡಿದಿದ್ದರು. ಅವನಿಗೆ ಯಂತ್ರಗಳು, ಉಪಕರಣಗಳು ಇವ್ಯಾವುದರ ಬಗ್ಗೆಯೂ ಮಾಹಿತಿಯಿರಲಿಲ್ಲ. ಚಿಕ್ಕಂದಿನಿಂದಲೂ ಅವನ ಒಡನಾಟ ಕೆಲವೇ ಕೆಲವು ವ್ಯಕ್ತಿಗಳೊಂದಿಗೆ ಮಾತ್ರ ಆಗುತ್ತಿದ್ದಿತು. ಅದೂ ವಿಶೇಷ ಅನುಮತಿಯ ಮೇರೆಗೆ. ಅವನಿಗೊಬ್ಬ ಗುರುವನ್ನು ಗೊತ್ತು ಮಾಡಿದ್ದರು. ಆತ ಪ್ರತಿದಿನ ಪುಯಿಗೆ ಶಿಕ್ಷಣ ನೀಡುತ್ತಿದ್ದ. ಏನನ್ನು ಕಲಿಸಬೇಕೆಬುದನ್ನೂ ಆಸ್ಥಾನ ಸಲಹೆಗಾರರು ಮೊದಲೇ ತಿಳಿಸಿಬಿಟ್ಟಿದ್ದರು. ಒಂದು ದಿನ ಅದು ಹೇಗೋ ದೂರವಾಣಿಯ ಬಗ್ಗೆ ಪುಯಿಗೆ ತಿಳಿದುಹೋಯಿತು. ಪುಯಿಗೆ ಕುತೂಹಲ ತಡೆಯಲಾಗಲಿಲ್ಲ. ತನಗೂ ದೂರವಾಣಿ ಬೇಕು ಎಂದು ಹಟ ಹಿಡಿದ. ಆದರೆ ಸಲಹೆಗಾರರು ದೂರವಾಣಿ ಕೊಡಿಸಲು ಹಿಂಜರಿದರು. ಅದರಿಂದಾಗಿ ಪುಯಿ ಹೊರಜಗತ್ತಿನೊಂದಿಗೆ ಸಂಪರ್ಕ ಸಾಧಿಸುವನೆಂಬುದು ಅವರ ಆತಂಕವಾಗಿತ್ತು. ಅಲ್ಲದೆ ಚೀನಾದ ರಾಜಮನೆತನದ ಶಿಷ್ಟಾಚಾರಕ್ಕೆ ವಿರುದ್ಧವಾದ ಸಂಗತಿಗಳನ್ನು ತಿಳಿದುಕೊಳ್ಳುತ್ತಾನೆ ಎಂಬ ಭಯವೂ ಅವರಿಗಿತ್ತು. ಕಡೆಗೂ ಪುಯಿಯೇ ಗೆದ್ದುಬಿಟ್ಟ. ಅವನಿಗೊಂದು ದೂರವಾಣಿಯಿಂದ ಕೊಡಿಸಲಾಯಿತು. ಎಲ್ಲರಿಗೂ ಅಚ್ಚರಿಯಾಗುವಂತೆ ಸಲಹೆಗಾರರು ಭಯಪಟ್ಟಂತೆ ಏನೂ ನಡೆಯಲಿಲ್ಲ. ದೂರವಾಣಿಯನ್ನು ಪುಯಿ ಒಂದೇ ಕಾರಣಕ್ಕೆ ಬಳಸುತ್ತಿದ್ದ. ಸಿಕ್ಕ ಸಿಕ್ಕವರಿಗೆಲ್ಲಾ ಹುಸಿ ಕರೆಗಳನ್ನು ಮಾಡಲು. ಅದಕ್ಕಾಗಿ ಬೀಜಿಂಗ್‌ನ ಟೆಲಿಫೋನ್‌ ಡೈರೆಕ್ಟರಿಯೊಂದನ್ನು ತರಿಸಿಟ್ಟುಕೊಂಡಿದ್ದ. ಬೋರಾದಾಗ ಯಾವುದಾದರೂ ನಂಬರ್‌ ಒತ್ತಿ ಕೇಕೆ ಹಾಕಿ ನಕ್ಕು ಇಟ್ಟು ಬಿಡುತ್ತಿದ್ದ. ಕೆಲವೊಮ್ಮೆ ರೆಸ್ಟೋರೆಂಟುಗಳಿಗೆ ಫೋನ್‌ ಮಾಡಿ ಯಾರದೋ ಮನೆಗಳಿಗೆ ಖಾದ್ಯಗಳನ್ನು ಪಾರ್ಸೆಲ್‌ ಮಾಡಿಸುತ್ತಿದ್ದ!
 

ಟಾಪ್ ನ್ಯೂಸ್

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.