ಬೀದಿ ಗುಡಿಸಿದ ಐಷಾರಾಮಿ ಕಾರು


Team Udayavani, Feb 14, 2019, 12:30 AM IST

f-2.jpg

ಸ್ವಾತಂತ್ರ್ಯಕ್ಕೂ ಹಿಂದೆ ನಡೆಯಿತು ಎನ್ನಲಾದ ಘಟನೆಯಿದು. ಭಾರತದ ಮಹಾರಾಜನೊಬ್ಬ ಕಾರ್ಯನಿಮಿತ್ತ ಲಂಡನ್‌ಗೆ ಭೇಟಿದ. ಅವರಿಗೆ ಲಂಡನ್‌ನ ಬೀದಿಗಳನ್ನು ಸುತ್ತುವ ಮನಸ್ಸಾಯಿತು. ಅಧಿಕಾರಿಗಳನ್ನು ಬಿಟ್ಟು ತಾವೊಬ್ಬರೇ ನಗರ ಸಂಚಾರಕ್ಕೆ ಹೊರಟರು. ದಾರಿಯಲ್ಲಿ ಕಾರು ಶೋರೂಮ್‌ ಒಂದು ಅವರ ಗಮನ ಸಳೆಯಿತು. ಮೊದಲೇ ಮಹಾರಾಜರಿಗೆ ಐಷಾರಾಮಿ ಕಾರುಗಳ ಶೋಕಿ ಇತ್ತು. ಅವರು ಕಾತರರಾಗಿ ಕಾರಿನ ಬಗ್ಗೆ ವಿಚಾರಿಸಲು ಒಳಕ್ಕೆ ತೆರಳಿದರು. ಅದು ಪ್ರಸಿದ್ಧ ರೋಲ್‌ರಾಯ್ಸ ಮಳಿಗೆಯಾಗಿತ್ತು. ಭಾರತೀಯನೊಬ್ಬ ಒಳಪ್ರವೇಶಿಸಿದ್ದನ್ನು ಕಂಡ ಸೇಲ್ಸ್‌ಮನ್‌ಗೆ ಅವರು ಮಹಾರಾಜರೆಂದು ತಿಳಿಯಲಿಲ್ಲ. ಇವರೂ ಹೇಳಲಿಲ್ಲ. ಭಾರತೀಯರೆಂದರೆ ಅಸಡ್ಡೆ ತೋರುತ್ತಿದ್ದ ಸೇಲ್ಸ್‌ಮನ್‌ಗೆ ಭಾರತೀಯನೊಬ್ಬ ಒಳಪ್ರವೇಶಿಸಿದ್ದು ಸರಿಕಾಣಲಿಲ್ಲ. ಜಗತ್ತಿನ ಉತ್ಕೃಷ್ಟವಾದ ಕಾರನ್ನು ಭಾರತೀಯ ಕೊಳ್ಳಲಾರ ಎನ್ನುವುದು ಅವನ ಖಚಿತ ಅಭಿಪ್ರಾಯವಾಗಿತ್ತು. ಆತ ಮಹಾರಾಜರನ್ನು ಕೀಳಾಗಿ ಕಂಡ. ಕುಪಿತರಾದ ಮಹಾರಾಜರು ತಾವು ಉಳಿದುಕೊಂಡಿದ್ದ ಹೋಟೆಲ್‌ಗೆ ವಾಪಸ್ಸಾದರು. ಅಧಿಕಾರಿಗಳನ್ನು ಕರೆದು ಮಹಾರಾಜರು ಬರುತ್ತಿರುವುದಾಗಿ ಶೋರೂಮಿನವರಿಗೆ ಸುದ್ದಿ ಮುಟ್ಟಿಸಲು ತಿಳಿಸಿದರು. ಈ ಬಾರಿ ಮಹಾರಾಜರನ್ನು ವೈಭವಯುತವಾಗಿ ಸ್ವಾಗತಿಸಲಾಯಿತು. ಮಳಿಗೆಯ ಮಾಲೀಕ  ಖುದ್ದು ಮಹಾರಾಜರನ್ನು ಬರಮಾಡಿಕೊಂಡ. ಆತಿಥ್ಯ ಸ್ವೀಕರಿಸಿದ ಮಹಾರಾಜರು ತಮಗಾದ ಅವಮಾನದ ಕುರಿತು ಬಾಯಿಬಿಡಲಿಲ್ಲ. ಆ ದಿನ ಒಂದಲ್ಲ, ಎರಡಲ್ಲ, ಆರು ಕಾರುಗಳನ್ನು ಭಾರತಕ್ಕೆ ಕೊಂಡು ತಂದರು. ಭಾರತಕ್ಕೆ ವಾಪಸ್ಸಾದವರೇ ಮಹಾರಾಜರು ಕಾರುಗಳನ್ನು ನಗರ ಸ್ವಚ್ಛಗೊಳಿಸುವ ಕೆಲಸಕ್ಕೆ ಹಚ್ಚಿದರು. ಅಷ್ಟೇ ಸಾಕಾಯಿತು. ಜಗತ್ಪ್ರಸಿದ್ಧ ಐಷಾರಾಮಿ ಕಾರು ಭಾರತದ ಬೀದಿಗಳಲ್ಲಿ ಕಸ ಗುಡಿಸಲು ಬಳಕೆಯಾಗುತ್ತಿದೆ ಎನ್ನುವ ಸುದ್ದಿ ಜಗತ್ತಿನಾದ್ಯಂತ ಹರಡಿತು. ಕಂಪನಿಯ ಹೆಸರಿಗೆ ಇದರಿಂದ ಕುಂದುಂಟಾಯಿತು. ಪರಿಣಾಮವಾಗಿ ಆ ಕಂಪನಿಯ ಕಾರನ್ನು ಕೊಳ್ಳುವವರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿತು. ಕೂಡಲೆ ಎಚ್ಚೆತ್ತ ಸಂಸ್ಥೆಯ ಸಿಬ್ಬಂದಿ ವರ್ಗ ನಡೆದ ಘಟನೆಯೆಲ್ಲವನ್ನೂ ತಿಳಿದುಕೊಂಡು ಮಹಾರಾಜರಿಗೆ ಕ್ಷಮಾಪಣಾ ಪತ್ರ ಬರೆದರು. ತಮ್ಮ ಸಂಸ್ಥೆಯ ಕಾರನ್ನು ಮುನಿಸಿಪಾಲಿಟಿ ವಾಹನವನ್ನಾಗಿ ಬಳಸದಂತೆ ಮನವಿ ಮಾಡಿದರು. ಅಲ್ಲದೆ ರೋಲ್ಸ್‌ರಾಯ್ಸ ಸಂಸ್ಥೆ , ತಮ್ಮಿಂದಾದ ಪ್ರಮಾದಕ್ಕೆ ಪ್ರಾಯಶ್ಚಿತವಾಗಿ ಮಹಾರಾಜರಿಗೆ ಆರು ಕಾರುಗಳನ್ನು ಉಡುಗೊರೆಯಾಗಿ ಕಳಿಸಿಕೊಟ್ಟಿತು. ಈ ಮಹಾರಾಜ ಯಾರೆಂಬುದರ ಬಗ್ಗೆ ಇನ್ನೂ ಗೊಂದಲ ಬಗೆಹರಿದಿಲ್ಲ. ಈ ಘಟನೆಯ ಕುರಿತು ಚರ್ಚೆಗಳು ಇನ್ನೂ ನಡೆದೇ ಇದೆ.

ಹವನ

ಟಾಪ್ ನ್ಯೂಸ್

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

1-adsad

Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ

14-fusion

Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.