ಕಣ್‌ ತೆರೆದು ನೋಡಿ


Team Udayavani, Mar 7, 2019, 12:30 AM IST

s-3.jpg

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ… ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು…

ಭಗ್ನಪ್ರೇಮಿ ಸೀಗಡಿ ತಲೆ ಕೆರೆದುಕೊಳ್ಳುವುದೇಕೆ?
ಹೃದಯ ಮತ್ತು ತಲೆ ಎರಡಕ್ಕೂ ನಾವು ಬಹಳ ಪ್ರಾಮುಖ್ಯತೆಯನ್ನು ಕೊಟ್ಟಿದ್ದೇವೆ. ಇದು ಇಂದು ನೆನ್ನೆಯಿಂದಲ್ಲ, ಪುರಾಣ ಕಾಲದಿಂದಲೂ ಇದು ಮುಂದುವರಿದಿದೆ. ಹೃದಯಕ್ಕೆ ಅಂತಃಕರಣದ ಲೇಬಲ್‌ಅನ್ನು ಹಚ್ಚಿಬಿಟ್ಟಿದ್ದೇವೆ. ತಲೆಗೆ ಬುದ್ಧಿವಂತಿಕೆಯ ಲೇಬಲ್‌ ಹಚ್ಚಿಬಿಟ್ಟಿದ್ದೇವೆ. ಇದೇ ಕಾರಣಕ್ಕೆ ಶಾಲೆಗಳಲ್ಲಿ ಟೀಚರ್‌ ಬೈಯುವಾಗ “ಲೆಕ್ಕ ಮಾಡೋವಾಗ ತಲೆ ಎಲ್ಲಿ ಬಿಟ್ಟಿದ್ದೆ?’ ಅನ್ನೋದು. ಮನುಷ್ಯನ ಸಮಸ್ಯೆಗಳ ಮೂಲ ಇರೋದೇ ಅಲ್ಲಿ. ತಲೆ ಓಡಿಸುವ ಸಮಯದಲ್ಲಿ ಹೃದಯದಿಂದ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದೇ ನಮ್ಮ ಬಹುತೇಕ ಸಮಸ್ಯೆಗಳಿಗೆ ಕಾರಣ. ಇದನ್ನು ಪದಗಳಲ್ಲಿ ವಿವರಿಸುವುದು ಸ್ವಲ್ಪ ಕಷ್ಟವೆ. ಅನುಭವ ಮಾತ್ರದಿಂದ ತಿಳಿದುಕೊಳ್ಳಬಹುದಷ್ಟೆ. ಅಂದಹಾಗೆ ತಲೆ ಮತ್ತು ಹೃದಯಗಳ ವಿಚಾರ ಬಂದಿದ್ದರ ಹಿಂದೆ ಒಂದು ಕಾರಣವಿದೆ. ಸಮುದ್ರದಲ್ಲಿ ವಾಸಿಸುವ ಸೀಗಡಿ ಗೊತ್ತಲ್ಲ. ಒಂದು ವೇಳೆ ಅವು ಭಗ್ನಪ್ರೇಮಿಗಳಾದರೆ ಹೃದಯವನ್ನು ಪರ ಪರ ಕೆರೆದುಕೊಳ್ಳುವುದಿಲ್ಲ, ತಲೆಯನ್ನು ಪರ ಪರ ಕೆರೆದುಕೊಳ್ಳುತ್ತದೆ. ಏಕೆಂದರೆ ಸೀಗಡಿಗಳ ಹೃದಯ ಅದರ ತಲೆಯಲ್ಲಿದೆ. ಹೀಗಾಗಿ ಸೀಗಡಿ ಯಾವತ್ತಾದರೂ ಪ್ರೀತಿಯಲ್ಲಿ ಬಿದ್ದರೆ, ತನ್ನ ಪ್ರೀತಿಯ ಆಳವನ್ನು ತೋರಿಸಲು ಹೃದಯ ಬಿಚ್ಚಿ ತೋರಿಸಬೇಕಿಲ್ಲ. ತಲೆ ತೋರಿಸಿದರೆ ಸಾಕಾಗುತ್ತದೆ. ಅಲ್ಲದೆ ತಲೆ ಮತ್ತು ಹೃದಯ ಎರಡೂ ಅಕ್ಕಪಕ್ಕದಲ್ಲೇ ಇರುವುದರಿಂದ ಅವೆರಡರ ನಡುವಿನ ಸಂವಹನವೂ ಸುಲಭವಾಗುವುದೇನೋ, ಆಗ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಬಹುದೇನೋ ಎಂಬುದು ನಮ್ಮ ಊಹೆಯಷ್ಟೆ. 

ಹಸು ಎಷ್ಟು ಗ್ಲಾಸ್‌ ಹಾಲು ಕೊಡುತ್ತೆ?
ದಿನಕ್ಕೆ ನೀವೆಷ್ಟು ಗ್ಲಾಸು ಹಾಲು ಕುಡಿಯುತ್ತೀರಿ? ಒಂದೆರಡು ಗ್ಲಾಸುಗಳಷ್ಟೆ ಅಲ್ಲವೇ? ಹಾಲು ಹಸುವಿನಿಂದ ಸಿಗುತ್ತದೆ ಎನ್ನುವ ಸಂಗತಿ ನಿಮಗೆಲ್ಲರಿಗೂ ಗೊತ್ತೇ ಇರುತ್ತದೆ. ನಗರ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಾದರೆ  ಹಾಲು ಪ್ಯಾಕೆಟ್‌ನಿಂದ ಸಿಗುತ್ತದೆ ಎಂದು ಉತ್ತರಿಸಬಹುದೇನೋ. ಅದರಲ್ಲಿ ಅವರದೇನೂ ತಪ್ಪಿಲ್ಲ ಬಿಡಿ. ದಿನಬೆಳಗಾದರೆ ಮನೆ ಮುಂದೆಯೇ ಹಾಲು ಕರೆಯುವುದನ್ನು ನೋಡುವ ಗ್ರಾಮೀಣ ಮಕ್ಕಳ ಸೌಭಾಗ್ಯ ಅವರಿಗಿರುವುದಿಲ್ಲವಲ್ಲ. ಇರಲಿ, ಹೋಟೆಲ್‌ ಅಥವಾ ಮನೆಯಲ್ಲಾದರೆ ನೀವೆಷ್ಟು ಗ್ಲಾಸ್‌ ಹಾಲು ಕೇಳುತ್ತೀರೋ ಅಷ್ಟು ಗ್ಲಾಸ್‌ ಹಾಲನ್ನು ತಂದು ನಿಮ್ಮ ಮುಂದಿಡುತ್ತಾರೆ. ಹಸು ತನ್ನ ಜೀವಮಾನದಲ್ಲಿ ಎಷ್ಟು ಗ್ಲಾಸ್‌ ಹಾಲನ್ನು ನೀಡುತ್ತದೆ ಎಂದು ಯೋಚಿಸಿದ್ದೀರಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ. ಸುಮಾರು 2 ಲಕ್ಷ ಗ್ಲಾಸ್‌ಗಳು!

ಹರ್ಷವರ್ಧನ್‌ ಸುಳ್ಯ

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.