ಒಳ್ಳೆ ಅಪ್ಪ!


Team Udayavani, Feb 28, 2019, 12:30 AM IST

5.jpg

ರಾಮಪುರ ಎಂಬ ಗ್ರಾಮದಲ್ಲಿ ರಾಮದಾಸ ಎಂಬ ಹೂವಿನ ವ್ಯಾಪಾರಿ ವಾಸಿಸುತ್ತಿದ್ದ.ಅವನಿಗೆ ಒಂದು ಎಕರೆ ಹೂವಿನ ತೋಟವಿತ್ತು. ಮಲ್ಲಿಗೆ, ಗುಲಾಬಿ ಗಿಡಗಳನ್ನು ಬೆಳೆಸಿ, ಪಟ್ಟಣದಲ್ಲಿ ಮಾರಿ ಜೀವನ ಸಾಗಿಸುತ್ತಿದ್ದನು. ಅವನಿಗೆ ಮೂರು ಮಂದಿ ಮಕ್ಕಳು. ಅವನು ಯಾವಾಗಲೂ ಮಕ್ಕಳನ್ನು ಗದರುತ್ತಾ, ಅವರ ಮೇಲೆ ಕೋಪಗೊಳ್ಳುತ್ತಾ ಆಗಾಗ ಹೊಡೆಯುತ್ತಿರುತ್ತಿದ್ದನು. ಇದರಿಂದಾಗಿ ಮಕ್ಕಳಿಗೆ ಅಪ್ಪನನ್ನು ಕಂಡರೆ ಭಯದಿಂದ ನಡುಗುತ್ತಿದ್ದರು. ಇದರಿಂದ ಪತ್ನಿ ಬೇಸರಗೊಂಡಿದ್ದಳು. ಅವಳು ಪತಿಯ ನಡವಳಿಕೆಯನ್ನು ತಿದ್ದಲು ಎಷ್ಟೋ ಬಾರಿ ಪ್ರಯತ್ನಿಸಿದ್ದಳು. ಆದರೆ ಫ‌ಲ ನೀಡಿರಲಿಲ್ಲ. 

ಒಂದು ದಿನ ತೋಟದ ಕೆಲಸಗಾರರು ಯಾರೂ ಬರಲಿಲ್ಲ. ಆ ದಿನವೇ ಹೂಗಳನ್ನು ಮಾರುಕಟ್ಟೆಗೆ ಕೊಂಡೊಯ್ಯಬೇಕಾಗಿತ್ತು. ಹೀಗಾಗಿ ರಾಮದಾಸ ಮತ್ತು ಅವನ ಪತ್ನಿ ಇಬ್ಬರೇ ಹೂಗಳನ್ನು ಕೊಯ್ಯುವ ಕೆಲಸ ಮಾಡಬೇಕಾಗಿತ್ತು. ರಾಮದಾಸನ ಪತ್ನಿ ಹೂವುಗಳನ್ನು ತನಗೆ ಇಷ್ಟ ಬಂದ ಹಾಗೆ ಕೊಯ್ಯುತ್ತಿದ್ದಳು. ಇದರಿಂದ ಕೆಲವು ಹೂಗಳ ದಳಗಳು ಉದುರಿ ಹೋದವು. ಅದನ್ನು ಕಂಡ ರಾಮದಾಸ ಬಹಳ ಕೋಪದಿಂದ “ಹೂವುಗಳನ್ನು ಏಕೆ ಹಾಗೆ ಕೊಯ್ಯುತ್ತಿರುವೆ? ಹೂವುಗಳು ತುಂಬಾ ನಾಜೂಕಾಗಿರುತ್ತವೆ. ಅವುಗಳನ್ನು ತುಂಬಾ ಜಾಗರೂಕತೆಯಿಂದ ಕೊಯ್ಯಬೇಕು. ನಮಗೆ ಇಷ್ಟ ಬಂದ ಹಾಗೆ ಕೊಯ್ಯುತ್ತಿದ್ದರೆ ಅವು ಹಾಳಾಗುತ್ತವೆ’ ಎಂದು ಗದರಿಸಿದನು. 
ಆಗ ಅವನ ಪತ್ನಿ “ಹೂಗಳಿಗೆ ಈ ರೀತಿಯಾಗಿ ಹೇಳುತ್ತಿದ್ದೀರಲ್ಲ, ಅದೇ ರೀತಿ ಮಕ್ಕಳು ಕೂಡಾ ಹೂವಿನಂತೆಯೇ ತುಂಬಾ ನಾಜೂಕಾಗಿರುತ್ತಾರಲ್ಲವೆ? ಅವರೊಂದಿಗೆ ನೀವು ಮೃದುವಾಗಿ ವರ್ತಿಸುತ್ತಿದ್ದೀರಾ? ಎಂದಾದರೂ ಮಕ್ಕಳೊಂದಿಗೆ ಪ್ರೀತಿಯಿಂದ ಮಾತನಾಡಿದ್ದೀರ?’ ಎಂದು ರಾಮದಾಸನನ್ನೇ ಪ್ರಶ್ನಿಸಿದಳು. ಪತ್ನಿಯ ಮಾತು ಕೇಳಿ ರಾಮದಾಸನಿಗೆ ಏನು ಹೇಳಬೇಕೆಂದು ತೋಚಲಿಲ್ಲ. ಅವನು “ಮಕ್ಕಳೊಂದಿಗೆ ಆ ರೀತಿಯಾಗಿ ನಡೆದುಕೊಂಡಿದ್ದಕ್ಕೆ ನಾನು ಕ್ಷಮೆ ಕೋರುತ್ತೇನೆ, ಇನ್ನು ಮುಂದೆ ಕೆಟ್ಟದಾಗಿ ನಡೆದುಕೊಳ್ಳುವುದಿಲ್ಲ’ ಎಂದು ಪತ್ನಿಗೆ ಮಾತುಕೊಟ್ಟನು. ಪತಿಯ ವರ್ತನೆಯಲ್ಲಿ ಬದಲಾವಣೆ ಬಂದಿದ್ದಕ್ಕೆ ಪತ್ನಿ ತುಂಬಾ ಸಂತೋಷಪಟ್ಟಳು. ತಂದೆಯಲ್ಲಿ ಬದಲಾವಣೆಯನ್ನು ಕಂಡು ಮಕ್ಕಳಿಗೂ ಖುಷಿಯಾಯಿತು.

ಕೆ.ಎನ್‌.ಅಕ್ರಂ ಪಾಷ

ಟಾಪ್ ನ್ಯೂಸ್

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

5-uv-fusion

Yugadi: ವರುಷದ ಆದಿ ಯುಗಾದಿ

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

4-uv-fusion

Yugadi: ಯುಗದ ಆರಂಭದ ಮುನ್ನುಡಿ ಈ ಯುಗಾದಿ

1-wqeqwewq

Congress ನಿಂದ ಬದುಕು; ಬಿಜೆಪಿಯದ್ದು ಭಾವನೆಗಳ ಚೆಲ್ಲಾಟ: ಡಾ| ಭಂಡಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.