ನೆಪೋಲಿಯನ್‌ನನ್ನು ಕಾಡಿದ ಮೊಲಗಳು


Team Udayavani, Mar 14, 2019, 12:30 AM IST

history.jpg

ಜಗತ್ತನ್ನೇ ಗೆಲ್ಲಬೇಕೆಂಬ ಹಂಬಲ ಹೊಂದಿದ್ದ ರಾಜ ನೆಪೋಲಿಯನ್‌ನನ್ನು ಬಗ್ಗು ಬಡಿದಿದ್ದು ವಾಟರ್‌ಲೂ ಕದನ ಎನ್ನುವ ಸಂಗತಿ ಇತಿಹಾಸದಲ್ಲಿ ದಾಖಲಾಗಿದೆ. ಆದರೆ ಅನೇಕರಿಗೆ ಗೊತ್ತಿಲ್ಲದ ಸಂಗತಿ ಎಂದರೆ ಅವನನ್ನು ಬಗ್ಗುಬಡಿದಿದ್ದು ಶತ್ರುಸೈನ್ಯವಲ್ಲ, ಮೊಲಗಳ ಸೈನ್ಯ ಎಂಬ ಸಂಗತಿ. ಇದಾಗಿದ್ದು ಹೀಗೆ… 

ಹಿಂದಿನ ಕಾಲದಲ್ಲಿ ಮನುಷ್ಯ ಮನರಂಜನೆಗಾಗಿ ಅಳವಡಿಸಿಕೊಂಡಿದ್ದ ಅನೇಕ ಅಭ್ಯಾಸಗಳಲ್ಲಿ ಬೇಟೆಯೂ ಒಂದು. ನೆಪೋಲಿಯನ್‌ನ ಸೈನ್ಯಕ್ಕೂ ಬೇಟೆಯಾಡಬೇಕೆಂಬ ಉಮೇದು ಬಂದಿತು. ಅದಕ್ಕಾಗಿ ಏನು ಮಾಡುವುದೆಂದು ನೆಪೋಲಿಯನ್‌ ಸಲಹೆ ಕೇಳಿದಾಗ ಆಪ್ತರು ಒಂದು ಉಪಾಯ ಹೇಳಿದರು. ಮೊಲಗಳನ್ನು ಹಿಂಡಿನಲ್ಲಿ ಕರೆತಂದು ಬಯಲಿನಲ್ಲಿ ಬಿಟ್ಟು ಸಾಮೂಹಿಕವಾಗಿ ಬೇಟೆಯಾಡುವುದು ಆ ಉಪಾಯವಾಗಿತ್ತು. ಇದು ನೆಪೋಲಿಯನ್‌ಗೆ ಹಿಡಿಸಿತು. ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಮೊಲಗಳನ್ನು ಹಿಡಿದು ಬೋನುಗಳಲ್ಲಿ ಹಾಕಿ ವಿಶಾಲ ಬಯಲಿಗೆ ತರಲಾಯಿತು. ಇತ್ತ ಇನ್ನೊಂದೆಡೆ ನೆಪೋಲಿಯನ್‌ ಮತ್ತು ಆತನ ಸೈನಿಕ ತುಕಡಿ ಬಂದೂಕುಗಳನ್ನು ಹಿಡಿದು ಸುಡಲು ಸಿದ್ಧವಾಯಿತು. 

ಮೊಲಗಳನ್ನು ಬೋನುಗಳಿಂದ ಬಿಡುತ್ತಲೇ ನೆಪೋಲಿಯನ್‌ ಇದ್ದ ಕಡೆಗೆ ಮೊಲಗಳು ಓಟ ಕಿತ್ತವು. ಬಂದೂಕು ಒಂದೇ ಸಮನೆ ಮದ್ದುಗುಂಡುಗಳ ಸುರಿಮಳೆಗೈದಿತು. ಸದ್ದಿಗೆ ಬೆದರಿಂದ ಮೊಲಗಳು ಇನ್ನಷ್ಟು ವೇಗದಿಂದ ಸೈನಿಕರ ಮೇಲೆರಗಿದವು. ನೆಪೋಲಿಯನ್ನನ ಕಾಲಿನ ಮೇಲೆಲ್ಲಾ ಹತ್ತಿದವು. ಸಮುದ್ರೋಪಾದಿಯಲ್ಲಿ ದಾಳಿಯಿತ್ತ ಮೊಲಗಳನ್ನು ಕಂಡು ಸೈನಿಕರಿಗೆ ಏನು ಮಾಡುವುದೆಂದೇ ತೋಚಲಿಲ್ಲ. ಮನರಂಜನೆ ಹೋಗಿ ದಿಗಿಲಾಯಿತು. ಬೇರೆ ದಾರಿ ಕಾಣದೆ ಅಲ್ಲಿಂದ ಹಿಮ್ಮೆಟ್ಟಬೇಕಾಯಿತು. ಅಂದು ಕಾಡುಮೊಲಗಳಿಗೆ ಬದಲಾಗಿ ಸಾಕಿದ ಮೊಲಗಳನ್ನು ತರಿಸಿದ್ದೇ ಎಡವಟ್ಟಾಗಿತ್ತು. ಕಾಡು ಮೊಲಗಳಾಗಿದ್ದರೆ ಮನುಷ್ಯರನ್ನು ಕಂಡ ತಕ, ಓಡುತ್ತಿದ್ದವು. ಆದರೆ ಸಾಕಿದ ಮೊಲಗಳಾಗಿದ್ದರಿಂದ ಅವು ಸೈನಿಕರನ್ನು ಕಂಡು ಆಹಾರದ ಆಸೆಯಿಂದ ಮುಗಿಬಿದ್ದಿದ್ದವು.

– ಹವನ

ಟಾಪ್ ನ್ಯೂಸ್

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.