ಗ್ರೀನ್‌ ಸಿಗ್ನಲ್‌


Team Udayavani, Mar 14, 2019, 12:30 AM IST

lead-2.jpg

ರಸ್ತೆಗಳ ಮೇಲೆ ಟ್ರಾಫಿಕ್‌ನಲ್ಲಿ  ಹಸಿರನ್ನು ಸೃಷ್ಟಿಸುವಂಥ ಸ್ಪರ್ಧೆ ಜಪಾನ್‌ನಲ್ಲಿ ನಡೆಯುತ್ತದೆ. ಇದು ಟ್ರಾಫಿಕ್‌ ಸಿಗ್ನಲ್‌ಗ‌ಳಲ್ಲಿನ ಹಸಿರು ಸಂಕೇತವಲ್ಲ. ಲಾರಿಗಳ ಮೇಲಿನ ಹೂದೋಟದ ಹಸಿರು!

ಸಸ್ಯಗಳ ಅಭಿವೃದ್ಧಿಯ ಕ್ಷೇತ್ರದಲ್ಲಿ ಜಪಾನ್‌ ದೇಶ ಸಾಕಷ್ಟು ಕೆಲಸ ಮಾಡಿದೆ. ಕುಬj ತಳಿಯ ಮರಗಳ ಸೃಷ್ಟಿ ಅಲ್ಲಿಂದಲೇ ಇತರ ದೇಶಗಳಿಗೆ ಪರಿಚಯವಾಯಿತು. ಇಂತಹ ಹಸಿರು ಸಾಧನೆಯ ಹೊಸ ರೂಪವೇ ಮಿನಿ ಲಾರಿ ಮೇಲಿನ ಹಸಿರು ಉದ್ಯಾನವನ. ಟ್ರಕ್‌ ನಡೆಸುವ ಚಾಲಕರಿಗೆ ವರ್ಷಕ್ಕೊಂದು ಸಲ ಇಂಥ ಅದ್ಧೂರಿ ಸ್ಪರ್ಧೆ ನಡೆಯುತ್ತದೆ. ಈ ಮಿನಿ ಲಾರಿಗಳು ಆ ದೇಶದಲ್ಲಿ ಸಾಕಷ್ಟಿವೆ, ಅವನ್ನು ಕೇಯಿ ಟ್ರಕ್‌ ಎಂದು ಕರೆಯಲಾಗುತ್ತದೆ. ತೋಟಗಾರಿಕೆ ಮತ್ತು ಮೀನುಗಾರಿಕೆ ಉತ್ಪನ್ನಗಳ ಸಾಗಾಣಿಕೆಗೆ ಅನುಕೂಲವಾಗಿರುವ ಕೇಯೀ ಟ್ರಕ್ಕುಗಳ ಒಳಗೆ ಹೇಗೆ ಉದ್ಯಾನವನ್ನು ಸೃಷ್ಟಿಸಬಹುದು ಎಂಬ ಕುತೂಹಲಕ್ಕೆ ಉತ್ತರವಾಗಿ ಒಂದು ಅದ್ಭುತ ಮಾಯಾಲೋಕವೇ ಸೃಷ್ಟಿಯಾಗುತ್ತಿದೆ.

ಕೃತಕತೆ ಇಲ್ಲ
ಒಂದು ಮಿನಿ ಲಾರಿಯನ್ನು ಅಂದ ಚಂದದ ಹೂತೋಟವಾಗಿ ಪರಿವರ್ತಿಸುವುದು ಅರೆಕ್ಷಣದ ಪವಾಡವಲ್ಲ. ಪರಿಶ್ರಮ ಮತ್ತು ತಾಳ್ಮೆ ಬೇಕು. ಹಿನ್ನೆಲೆಯಲ್ಲಿ ಬೆಟ್ಟ ಗುಡ್ಡಗಳು, ಹಸಿರು ಹುಲ್ಲುಗಾವಲು, ವೈವಿಧ್ಯಮಯ ಹೂಗಳು ಅರಳಿ, ತಲೆದೂಗುತ್ತಿರುವ ಗಿಡಗಳು ಅಲ್ಲಿರಬೇಕು. ಕೃತಕ ವಸ್ತುಗಳ ಬಳಕೆಗೆ ಆದ್ಯತೆಯಿಲ್ಲ. ಬೇಕಿದ್ದರೆ ನೀರು ಧುಮ್ಮಿಕ್ಕುವ ಜಲಪಾತವನ್ನೂ ಪೈಪುಗಳ ಬಳಕೆಯಿಂದ ಸೃಜಿಸಬಹುದು. ಬಿದಿರನ್ನು ಧಾರಾಳವಾಗಿ ಉಪಯೋಗಿಸಬಹುದು. ಯೋಜನೆ, ಅಭಿವ್ಯಕ್ತಿ, ವಿನ್ಯಾಸಗಳೇ ಅಂತಿಮವಾಗಿ ಅಭ್ಯರ್ಥಿಯ ಗೆಲುವನ್ನು ನಿರ್ಣಯಿಸುತ್ತದೆ.

ಹಸಿರು ಸ್ಫೂರ್ತಿ
ಇದರಿಂದ ಏನು ಲಾಭ ಎಂದು ಕೇಳಿದರೆ ನೂರಾರು ಜನ ಬಂದು ನೋಡುತ್ತಾರೆ. ತಮ್ಮ ಮನೆಯ ಅಂಗಳದಲ್ಲೋ, ತಾರಸಿಯಲ್ಲೋ ಒಂದು ಉದ್ಯಾನ ಮಾಡಲು ಪ್ರೇರಣೆಯಾಗುತ್ತದೆ. ಇದರಿಂದ ದೇಶದ ಯಾವ ಮೂಲೆಗೆ ಹೋದರೂ ನಿಸರ್ಗದ ಚೆಲುವು ಪರಿಶೋಭಿಸುತ್ತದೆ. ಹೊಗೆಯುಗುಳುವ ವಾಹನಗಳಿಂದ ಪರಿಸರಕ್ಕೆ ಹಾನಿ ಮಾಡುವ ವಾಹನಗಳ ಒಡೆಯರು ಹಸಿರು ಬೆಳೆಸಿದರೆ ವಾತಾವರಣಕ್ಕೂ ಉಪಕಾರವಿದೆ ಎನ್ನುತ್ತಾರೆ ಸ್ಪರ್ಧೆಯ ಆಯೋಜಕರು. ಸ್ಪರ್ಧೆ ನಡೆಯುವ ದಿನ ಸಾವಿರಾರು ಲಾರಿಗಳು ನಡೆಸುವ ಪ್ರದರ್ಶನ ಕಣ್ಣುಗಳಿಗಂತೂ ಹಬ್ಬ.

ಲಾರಿಯೇ ಬಹುಮಾನ
ಜಪಾನಿನ ಫೆಡರೇಷನ್‌ ಆಫ್ ಲ್ಯಾಂಡ್‌ಸ್ಕೇಪ್‌ ಸಂಸ್ಥೆ ಇಂತಹ ಸ್ಪರ್ಧೆಯನ್ನು ಆಯೋಜಿಸುತ್ತದೆ. ಸಸ್ಯ ವಿನ್ಯಾಸದಲ್ಲಿ ಪರಿಣತರಾದ ಮೂವರು ಖ್ಯಾತನಾಮರು ಮನ ಸೆಳೆಯುವ ವಿನ್ಯಾಸವನ್ನು ರೂಪಿಸಿದ ಟ್ರಕ್‌ ಚಾಲಕರನ್ನು ಗುರುತಿಸಿ ತೀರ್ಪು ನೀಡುತ್ತಾರೆ. ಬಹುಮಾನವಾಗಿ ಒಂದು ಹೊಸ ಟ್ರಕ್‌ ಹಾಗೂ ನಗದು ಹಣವೂ ಇರುತ್ತದೆ. ಹಲವರಿಗೆ ಪ್ರೋತ್ಸಾಹಕ ಬಹುಮಾನಗಳೂ ಸಿಗುತ್ತವೆ.

– ಪ.ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.