ಮಡಿಕೇರಿಯಲ್ಲಿ KSRTCಗಳ ಮುಖಾಮುಖಿ: ಚಾಲಕರಿಬ್ಬರ ದುರ್ಮರಣ
Team Udayavani, Feb 8, 2018, 3:54 PM IST
ಮಡಿಕೇರಿ: ಎರಡು ಕೆಎಸ್ಆರ್ಟಿಸಿ ಬಸ್ಸುಗಳು ಮುಖಾಮುಖೀ ಢಿಕ್ಕಿRಯಾದ ಪರಿಣಾಮ ಚಾಲಕ ರಿಬ್ಬರು ಸಾವನ್ನಪ್ಪಿ, ಪ್ರಯಾಣಿಕರು ಗಾಯಗೊಂಡ ಘಟನೆ ಗುರುವಾರ ಪೂರ್ವಾಹ್ನ 11.30ರ ಸುಮಾರಿಗೆ ಸುಂಟಿಕೊಪ್ಪ ಸಮೀಪದ ಶಾಂತಗಿರಿ ತಿರುವಿನಲ್ಲಿ ಸಂಭವಿಸಿದೆ.
ಮಡಿಕೇರಿಯಿಂದ ಹಾಸನಕ್ಕೆ ತೆರಳುತ್ತಿದ್ದ ಮಡಿಕೇರಿ ಡಿಪೋದ (ಕೆ.ಎ.19ಎಫ್ 3240) ಬಸ್ಸನ್ನು ಚಾಲಕ ಶನಿವಾರಸಂತೆ ನಿವಾಸಿ ಪಾಲಾಕ್ಷ (42) ಹಾಗೂ ಮೈಸೂ ರಿನಿಂದ ಮಡಿಕೇರಿಗೆ ಹುಣಸೂರು ಡಿಪೋದ (ಕೆ.ಎ.09ಎಫ್ 4989) ಬಸ್ಸನ್ನು ಹುಣಸೂರಿನ ಮೊದಿನ್ ಶರೀಫ್ (50) ಚಲಾಯಿಸುತ್ತಿದ್ದರು. ಸುಂಟಿಕೊಪ್ಪದಿಂದ 1 ಕಿ.ಮೀ. ದೂರದ ಶಾಂತಗಿರಿ ತಿರುವಿನಲ್ಲಿ ಈ ಬಸ್ಸುಗಳು ಮುಖಾಮುಖೀ ಢಿಕ್ಕಿಯಾಗಿ ಚಾಲಕರಿಬ್ಬರು ಗಂಭೀರ ವಾಗಿ ಗಾಯಗೊಂಡರು. ಕೈಕಾಲು ಹೊಟ್ಟೆ, ಎದೆ ಭಾಗಕ್ಕೆ ತೀವ್ರ ಗಾಯವಾಗಿದ್ದ ಪಾಲಾಕ್ಷ ಅವರು ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ತರುವಾಗ ಕೊನೆಯುಸಿರೆಳೆದರು. ಮೊದಿನ್ ಶರೀಫ್ ಅವರು ಮಡಿಕೇರಿ ಜಿಲ್ಲಾಸ್ಪತ್ರೆ ದಾರಿ ಮಧ್ಯೆ ಸಾವಿಗೀಡಾದರು.
ಬಸ್ಸಿನ ನಿರ್ವಾಹಕರಾದ ಮಲ್ಲಪ್ಪ, ಪ್ರಯಾಣಿಕರಾದ ನಂದಿನಾಥಪುರದ ಅಣ್ಣಯ್ಯ, ಮಹದೇವಮ್ಮ, ಮೈಸೂ ರಿನ ರಮೇಶ, ನಾಗೇಶ, ಕೂಡಿಗೆಯ ಶಿವಾನಂದ, ನಾರಾಯಣ ಸ್ವಾಮಿ, ಕುಶಾಲನಗರದ ಜುಹಾರಾ, ರವಿ, ಕವಿತಾ ಹರೀಶ, ಧೀಮಂತ್ರಾಜ್, ಕಾವೇರಿ, ಪೊನ್ನಮ್ಮ ಗಾಯಗಳೊಂದಿಗೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲಾಧಿಕಾರಿ ಶ್ರೀವಿದ್ಯಾ ಆಸ್ಪತ್ರೆಗೆ ಭೇಟಿದರು. ಅವರು ಅಪಘಾತದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election ಫಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.
Ponnampet; ಹುಲಿ ದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ
Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ
Madikeri ಕಾಡಾನೆ ದಾಳಿ: ಬೆಳೆಗಾರ ಸಾವು: ಆನೆಗಳನ್ನು ಕಾಡಿಗಟ್ಟಲು ಗ್ರಾಮಸ್ಥರ ಆಗ್ರಹ
ಅತ್ತಿಮಂಗಲ: ಬೈಕ್ನಲ್ಲಿ ಹೋಗುತ್ತಿದ್ದಾಗ ಕಾಡಾನೆ ದಾಳಿ : ಸಹೋದರರು ಪ್ರಾಣಾಪಾಯದಿಂದ ಪಾರು
MUST WATCH
ಹೊಸ ಸೇರ್ಪಡೆ
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್