ಬಿರು ಬೇಸಿಗೆಯಲ್ಲಿ ಕಾಡುತಿದೆ ನೀರಿನ ಕೊರತೆ 


Team Udayavani, Mar 22, 2019, 7:35 AM IST

biru-brsi.jpg

ಮಾಲೂರು: ಬೇಸಿಗೆಯ ಬಿರು ಬಿಸಿಲು ಏರಿಕೆಯಾಗುತ್ತಿರುವಂತೆ ಕೊಳವೆ ಬಾವಿಗಳ ಬತ್ತಿಹೋಗುತ್ತಾ ಗ್ರಾಮೀಣ ಭಾಗವೂ ಸೇರಿದಂತೆ ಪಟ್ಟಣ ಪ್ರದೇಶದಲ್ಲಿ ಕುಡಿಯುವ ನೀರಿನ ಬವಣೆ ಅಧಿಕವಾಗುತ್ತಿದೆ.

ಕಳೆದ ವರ್ಷಗಳಿಗೆ ಹೋಲಿಸಿದರೆ ಬೇಸಿಗೆಯ ಬಿರು ಬಿಸಿಲು ಹೆಚ್ಚಾಗುತ್ತಿದ್ದು ಹಳ್ಳಿಗಾಡು ಪ್ರದೇಶವು ಸೇರಿದಂತೆ ಮಾಲೂರು ಪಟ್ಟಣದ ವ್ಯಾಪ್ತಿಯ ಅನೇಕ ಬಡಾವಣೆಗಳಲ್ಲಿ ಕುಡಿಯುವ ನೀರಿನ ಬವಣೆ ಹೆಚ್ಚಾಗುತ್ತಿದೆ. ತಾಲೂಕಿನ ಗ್ರಾಪಂ ಪಿಡಿಒಗಳು ತಾಪಂ ಅಡಳಿತಕ್ಕೆ ನೀಡಿರುವ ಪ್ರಸ್ಥಾವನೆಯಂತೆ ತಾಲೂಕಿನ 15ಕ್ಕೂ ಹೆಚ್ಚು ಹಳ್ಳಿಗಳಲ್ಲಿ ತೀವ್ರವಾದ ಕುಡಿಯುವ ನೀರಿನ ಬವಣೆ ಇದ್ದು, ಕೆಲ ಗ್ರಾಮಗಳಲ್ಲಿ ಕೊಳವೆ ಬಾವಿಯನ್ನು ಕೊರೆದರೂ ನೀರಿಲ್ಲದ ಕಾರಣ ಖಾಸಗಿ ಕಳವೆ ಬಾವಿಗಳಿಂದ ನೀರು ಖರೀದಿ ಮಾಡಲಾಗುತ್ತಿದ್ದು, ಕೆಲವು ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆಯಾಗುತ್ತಿದೆ.

ಕಳೆದ ಸಾಲಿನಲ್ಲಿ ಮುಂಗಾರು ಮತ್ತು ಹಿಂಗಾರು ಮಳೆಗಳು ಕೈಕೊಟ್ಟಕಾರಣದಿಂದಾಗಿ ತಾಲೂಕಿನ ಬಹುತೇಕ ಕೆರೆಗಳ ಬತ್ತಿಹೋಗಿದ್ದು, ಜಾನುವಾರುಗಳ ಕುಡಿಯುವ ನೀರಿನ ಜೊತೆಗೆ ಮೇವಿನ ಕೊರತೆಯೂ ಕಾಡುತ್ತಿದೆ. ತಾಲೂಕಿನ 35 ಗ್ರಾಮಗಳಲ್ಲಿ ನೀರಿಗಾಗಿ ಹಾಹಾಕಾರ ಆರಂಭಗೊಂಡಿದ್ದು, ಅ ಪೈಕಿ 15 ಗ್ರಾಮಗಳಲ್ಲಿ ಗಂಬೀರ ಸಮಸ್ಯೆ ಇದೆ. ತಾಲೂಕಿನ 3 ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ, 6 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ಮತ್ತು 17ಗ್ರಾಮಗಳಲ್ಲಿ ಸಮಸ್ಯೆಯನ್ನು ಗುರುತಿಸಲಾಗಿದ್ದು, ಪರ್ಯಾಯ ಮಾರ್ಗ ಹುಡುಕಲಾಗುತ್ತಿದೆ. ಇದರ ಜತೆಗೆ  10-15 ಹಳ್ಳಿಗಳಲ್ಲಿ ಕುಡಿಯುವ ಕೊರತೆ ತಲೆದೋರುವ ಸಾಧ್ಯತೆಗಳಿವೆ.

ಆವರಿಸಿದ ನೀರಿನಬರ: ಮಾಲೂರು ಪಟ್ಟಣದಲ್ಲಿ ಸಮೃದ್ಧವಾದ ನೀರಿದ್ದು ವಿತರಣೆಯಲ್ಲಿನ ದೋಶಗಳಲ್ಲಿ ಅರ್ದಶನಗರ, ಮಾರುತಿ ಬಡಾವಣೆ ಮತ್ತಿತರ ಕಡೆಗಳಲ್ಲಿ ನೀರಿನ ಸಮಸ್ಯೆ ಅಧಿಕವಾಗಿದೆ. ಕಳೆದ ಸಾಲಿನ ಎಸ್‌ಎಪ್‌ಸಿ ಅನುದಾನವಾಗಿ ಕುಡಿಯುವ ನೀರಿಗಾಗಿ ಬಿಡುಗಡೆಯಾಗಿದ್ದ 6.25 ಕೋಟಿ ರೂ.ಗಳ ಅನುದಾನದ ಪೈಕಿ 1.25 ಕೋಟಿ ರೂ. ಗಳನ್ನು ಅರಳೇರಿ ರಸ್ತೆ ಅಭಿವೃದ್ಧಿಗೆ ಬಳಕೆ ಮಾಡಿಕೊಂಡಿರುವ ಪುರಸಭೆಯು ಉಳಿದ ಅನುದಾನದಲ್ಲಿ ಪಟ್ಟಣದ ಹೊರವಲಯದಲ್ಲಿನ

-ಅರೋಹಳ್ಳಿ ಕೆರೆಯಲ್ಲಿ 19 ಕೊಳವೆ ಬಾವಿಗಳನ್ನು ಕೊರೆಯಲಾಗಿದ್ದು ಇದುವರೆಗೂ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಇಲ್ಲಿನ ಬಹುಪಾಲು ಜನರು ವಾರದಲ್ಲಿ ಕನಿಷ್ಟ ಎರಡು ಮೂರು ಟ್ಯಾಂಕರ್‌ ನೀರು ಖರೀದಿ ಮಾಡಿ ಜೀವನ ಸಾಗಿಸುವಂತಾಗಿದೆ. ಪಟ್ಟಣದಲ್ಲಿ ನೀರಿನ ಸಮಸ್ಯೆ ತಲೆ ದೂರಿರುವ ಕಾರಣ ಅನೇಕ ಬಾಡಿಗೆದಾರರು ಮನೆಗಳನ್ನು ಖಾಲಿ ಮಾಡಿರುವ ಕಾರಣ ಪಟ್ಟಣದಲ್ಲಿ ಸರಿಸುಮಾರು 1000 ಅಧಿಕ ಬಾಡಿಗೆ ಮನೆಗಳು ಖಾಲಿ ಬಿದ್ದಿರುವುದರಿಂದ ಅಭಿವೃದ್ಧಿಯ ಪ್ರಮಾಣ ಕುಂಟಿತವಾಗುತ್ತಿದೆ.

ಕಾಡುತಿದೆ ವಿದ್ಯುತ್‌ಸಮಸ್ಯೆ: ತಾಲೂಕಿನ ಕೆಲ ಗ್ರಾಮಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರಿದ್ದರೂ ವಿದ್ಯುತ್‌ ಸಮಸ್ಯೆಯಿಂದ ನೀರು ಹರಿಸುವುದು ಕಷ್ಟಕರವಾಗುತ್ತಿದೆ ಕೆಲವು ಹಳ್ಳಿಗಳಿಗೆ ದಿನದಲ್ಲಿ ಐದಾರು ತಾಸುಗಳು ಮಾತ್ರ ವಿದ್ಯುತ್‌ ನೀಡುವುದರಿಂದ ಕುಡಿಯುವ ನೀರಿನ ಪಂಪ್‌ಸೆಟ್‌ಗಳ ಚಾಲನೆಗೆ ಅಡಚಣೆಯಾಗುತ್ತಿದೆ. ಮಾಲೂರು ತಾಲೂಕಿನ ಬಹುತೇಕ ಹಳ್ಳಿಗಳು ನಿರಂತರ ಜ್ಯೋತಿಯ ಕಾರ್ಯಕ್ರಮದ ಅಡಿಯಲ್ಲಿ ದಿನದ 24ತಾಸುಗಳ ವಿದ್ಯುತ್‌ ಪೂರೈಕೆಯ ಕಾರ್ಯಕ್ರಮ ಅಡಿಯಲ್ಲಿದ್ದರೂ ಕೊಳವೆ ಬಾವಿಗಳಿಗೆ ಈ ಸೌಲಭ್ಯ ಕಲ್ಪಿಸಿಲ್ಲ.

ನೀರಿಲ್ಲದೆ ರೈತರು ಕಂಗಾಲು: ತಾಲೂಕಿನಲ್ಲಿ ಬಹುತೇಕ ರೈತರು ನದಿನಾಲೆಗಳ ನೀರಿಲ್ಲದ ಪರಿಸ್ಥಿತಿಯಲ್ಲಿ ಹಾಳದ ಕೊಳವೆ ಬಾವಿಗಳಿಂದ ನೀರು ತೆಗೆದು ಹನಿ ನೀರಾವರಿ ಪದ್ಧತಿಗಳ ಮೂಲಕ ಇರುವ ನೀರಿನಲ್ಲಿಯೇ ಉತ್ತಮ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಬೇಸಿಗೆಯಲ್ಲಿ ರೈತರ ಕೊಳವೆ ಬಾವಿಯಲಿ ರಾತ್ರಿ ಬಂದ ನೀರು ಬೆಳಗಾಗುವ ವೇಳೆಗೆ ಬತ್ತಿ ಹೋಗುತ್ತಿರುವ ಕಾರಣ ತೋಟಗಳಲ್ಲಿ ಬೆಳೆಗೆ ನೀರು ಒದಗಿಸಲು ಸಾಧ್ಯವಾಗದ ಪರಿಸ್ಥಿತಿಯಲಿ ರೈತರು ಕಂಗಾಲಾಗಿದ್ದಾರೆ.

ಮೊದಲೇ 1600-1900ಅಡಿಗಳ ವರೆಗೂ ಕಳವೆ ಬಾವಿಗಳನ್ನು ಕೊರೆದು ಕೈಸುಟ್ಟುಕೊಂಡಿರುವ ರೈತರು ಏಕಾಏಕಿ ಕೊಳವೆ ಬಾವಿಯಲ್ಲಿ ನೀರು ಬತ್ತಿಹೋಗುತ್ತಿರುವ ಕಾರಣ ಸಂಕಷ್ಟಕ್ಕೆ ಸಲುಕಿದ್ದಾರೆ. ಹೊಸಕೊಳವೆ ಬಾವಿಯನ್ನು ಕೊರೆಯಲು ಕನಿಷ್ಠ 6- 7 ಲಕ್ಷಗಳ ಅಗತ್ಯವಿದ್ದು, ನೀರು ಸಿಗುವ ವಿಶ್ವಾಸವಿಲ್ಲ. ಇಂತಹ ಪರಿಸ್ಥಿತಿಯಲ್ಲಿನ ರೈತರ ಕೈಗೆ ಬಂದ ಬೆಳೆಯನ್ನು ಉಳಿಸಿಕೊಳ್ಳಲು ಸಾದ್ಯವಾಗದ ಪರಿಸ್ಥಿತಿಯಲ್ಲಿದ್ದಾನೆ.

ಬರಪರಿಹಾರ ನಿರೀಕ್ಷೆ: ಪ್ರಸ್ತುತ ವರ್ಷದಲ್ಲಿ ರಾಜ್ಯವಾಪ್ತಿ ಬರಪರಿಸ್ಥಿತಿ ನಿರ್ಮಾಣವಾಗಿರುವ ಕಾರಣಗಳಿಂದ ತಾಲೂಕನ್ನು ಸಹ ಪರಪೀಡಿತ ತಾಲೂಕಿನ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಅದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬರಪರಿಹಾರ ನಿಧಿ ಇದುವರೆಗೂ ಬಂದಿಲ್ಲ. ಉನ್ನತ ಅಧಿಕಾರಿಗಳ ಮಾಹಿತಿಯಂತೆ ತಾಲೂಕಿನಲ್ಲಿ ಹೈನುಗಾರಿಕೆಯ ರಾಸುಗಳು ಹೆಚ್ಚಾಗಿದ್ದು, ಪಶು ಅಹಾರ ಮತ್ತು ಹಸಿರು ಹುಲ್ಲಿನ ಕೊರತೆಯಾಗುವ ಸಾಧ್ಯತೆಗಳಿದ್ದು ಪ್ರಸ್ತುತ ರೈತನ ಬಳಿಯಲ್ಲಿ ಮುಂದಿನ 22ದಿನಗಳಿಗೆ ಮಾತ್ರ ಸಾಕಾಗುವಷ್ಟು ಹಸಿರು ಮೇವು ದಾಸ್ತುನು ಇದೆ ಮುಂದಿನ ದಿನಗಳಲ್ಲಿ ರಾಸುಗಳ ಮೇಲಿನ ಕೊರತೆಯಾಗುವ ಸಾದ್ಯತೆಗಳಿವೆ.

ತಾಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ಕಂಡಕೂಡಲೇ ಅಧಿಕಾರಿಗಳು ಮತ್ತು ಗ್ರಾಪಂ ಪಿಡಿಒಗಳಿಂದ ಮಾಹಿತಿ ಸಂಗ್ರಹಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ತಾಲೂಕಿನಾದ್ಯಂತ ವಿವಿದ ಮೂಲಕಗಳಿಂದ 154 ನೀರು ಶುದ್ಧಿಕರಿಸುವ ಅರ್‌.ಒ. ಪ್ಲಾಂಟ್‌ಗಳನ್ನು ನಿರ್ಮಿಸಿದ್ದು ಅ ಪೈಕಿ 6 ಘಟಕಗಳು ದುರಸ್ತಿಯಾಗಬೇಕಾಗಿದೆ ಇನ್ನೂ 183 ಹಳ್ಳಿಗಳಿಗೆ ಶುದ್ಧೀಕರಣ ಘಟಕಗಳ ಅಗತ್ಯವಿದೆ.
-ಆನಂದ್‌, ತಾಪಂ ಕಾರ್ಯನಿರ್ವಹಣಾಕಾರಿ 

* ಎಂ.ರವಿಕುಮಾರ್‌

ಟಾಪ್ ನ್ಯೂಸ್

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

jameer

H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.