ಹೆತ್ತವರೇ ನಿಜವಾದ ಹೀರೋಗಳು
Team Udayavani, Jan 21, 2019, 10:24 AM IST
ಕನಕಗಿರಿ: ಸಿನಿಮಾ ರಂಗದ ಹೀರೋಗಳನ್ನು ನಾವು ಮಾದರಿಯಾಗಿ ಇಟ್ಟುಕೊಳ್ಳಬಾರದು. ನಮಗೆ ಜನ್ಮ ನೀಡಿ, ಜೀವನ ರೂಪಿಸಿದ ನಮ್ಮ ತಂದೆ-ತಾಯಿಗಳೇ ನಮ್ಮಗೆ ನಿಜವಾದ ಹೀರೋಗಳು ಮತ್ತು ಆದರ್ಶ ವ್ಯಕ್ತಿಗಳು ಎಂದು ಹಿರೇಹಡಗಲಿ ಹಾಲಸ್ವಾಮೀಜಿ ಸಂಸ್ಥಾನಮಠ ಪೀಠಾಧಿಪತಿ ಅಭಿವನ ಹಾಲವೀರಾಪ್ಪಜ್ಜ ಸ್ವಾಮಿ ಹೇಳಿದರು.
ಪಟ್ಟಣದ ಕಲ್ಮಠದ ಹತ್ತಿರ ಯುವಕರು ರವಿವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು. ಸ್ವಾಮಿ ವಿವೇಕಾನಂದರು ಬರೀ ಭಾಷಣವನ್ನು ಮತ್ತು ಉಪದೇಶವನ್ನು ಮಾಡಲಿಲ್ಲ. ಅದರ ಜೊತೆ ರಾಷ್ಟ್ರದ ಸೇವೆಯನ್ನು ಮಾಡಿದರು. ರಾಷ್ಟ್ರದ ಸೇವೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ಸ್ವಾಮಿ ವಿವೇಕಾನಂದರ ಒಳಗೆ ಸಂತ ಜೊತೆಗೆ ಅವರೊಳಗೆ ಒಬ್ಬ ವಿಜ್ಞಾನಿ ಇದ್ದನು. ಯುವ ಮನಸ್ಸುಗಳಿಗೆ ಇಡೀ ಜಗತ್ತನೇ ಗೆಲ್ಲುವ ಸಾಮರ್ಥ್ಯವಿದೆ. ದೇಶ ಕಾಯುವ ಸೈನಿಕರು ದೇಶ ಅಭಿಮಾನವಿದೆ. ಅವರನ್ನು ನಾವು ಮಾದರಿಯಾಗಿ ನೋಡಬೇಕು. ದೇಶಕ್ಕಾಗಿ ಪ್ರಾಣವನ್ನೇ ಬಿಟ್ಟ ಹನುಮಂತಪ್ಪ ಕೊಪ್ಪದ್ ಉತ್ತರ ಕರ್ನಾಟಕದವರು ಎಂಬುವುದು ನಮ್ಮ ಹೆಮ್ಮೆ. ವಿವೇಕಾನಂದ ತತ್ವ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕೆಂದರು.
ಶಾಸಕ ಬಸವರಾಜ ದಢೇಸುಗೂರು ಮಾತನಾಡಿ, ಸ್ವಾಮಿ ವಿವೇಕಾನಂದರ ಜಯಂತಿಯನ್ನು ಒಂದು ವೇದಿಕೆಗೆ ಸೀಮಿತಗೊಳಿಸುವುದು ಸರಿಯಲ್ಲ. ಪ್ರತಿ ಮನೆಯಲ್ಲಿ ಅವರ ಜಯಂತಿಯನ್ನು ಆಚರಿಸಬೇಕು. ಯುವಕರಿಗೆ ಸೇವಾ ಮನೋಭಾವನೆ ಇರಬೇಕು. ನಾವು ಇರುವಷ್ಟು ದಿನ ಸಮಾಜಕ್ಕೆ ಏನಾದರೂ ಒಳ್ಳೆಯ ಕೆಲಸವನ್ನು ಮಾಡಬೇಕು. ಇದರಿಂದ ಜೀವನ ಸಾರ್ಥಕವಾಗುವುದು ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಅರಳಹಳ್ಳಿ ಬೃಹನ್ಮಠದ ಗವಿಸಿದ್ದಯ್ಯಸ್ವಾಮಿ ವಹಿಸಿಕೊಂಡಿದ್ದರು. ಕಾರ್ಯಕ್ರಮವನ್ನು ಶಾಸಕ ಬಸವರಾಜ ದಢೇಸುಗೂರು ಉದ್ಘಾಟಿಸಿದ್ದರು. ಪ್ರಾಸ್ತಾವಿಕವಾಗಿ ಸೋಮನಾಥಸ್ವಾಮಿ ಹಣವಾಣ ಮಾತನಾಡಿದರು. ಪಟ್ಟಣದ ಕಲ್ಮಠದಿಂದ ಪ್ರಾರಂಭವಾದ ಶೋಭಾಯಾತ್ರೆ ರಾಜಬೀದಿಯ ಮೂಲಕ ವಾಲ್ಮೀಕಿ ವೃತ್ತ ತಲುಪಿತು.
ಈ ಸಂದರ್ಭದಲ್ಲಿ ಪಪಂ ಸದಸ್ಯರಾದ ರವಿ ಸಜ್ಜನ್, ರವಿ ಭಜಂತ್ರಿ, ಪ್ರಮುಖರಾದ ಡಾ| ದೊಡ್ಡಯ್ಯ ಅರವಟಗಿಮಠ, ಮಹಾಂತೇಶ ಸಜ್ಜನ್, ವಾಗೇಶ ಹಿರೇಮಠ, ಸಣ್ಣ ಕನಕಪ್ಪ, ಅಶ್ವಿನಿ ದೇಸಾಯಿ, ಬಿ.ವಿ. ಜೋಶಿ, ರಂಗಪ್ಪ ಕೊರಗಟಗಿ, ಮಂಜುನಾಥರೆಡ್ಡಿ ಸಿಂಧುವಾಳ, ರುದ್ರಪ್ಪ ದೇವರೆಡ್ಡಿ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raids: ಕೊಪ್ಪಳ ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವ ಯರಗುಪ್ಪಾ ಮನೆ ಮೇಲೆ ಲೋಕಾಯುಕ್ತ ದಾಳಿ
Koppala; ಶಿವರಾಜ ತಂಗಡಗಿ ಹೇಳಿಕೆಯನ್ನು ಬಿಜೆಪಿ ತಿರುಚಿದೆ: ಕೃಷ್ಣಾ ಇಟ್ಟಂಗಿ
Koppal Lok Sabha constituency; ಲಿಂಗಾಯತ, ಅಹಿಂದ ಮತಗಳೇ ಇಲ್ಲಿ ನಿರ್ಣಾಯಕ
Koppala: ಮೋದಿ ಮೋದಿ ಎಂದರೆ ಕಪಾಳಕ್ಕೆ ಹೊಡಿಯಿರಿ ಎಂದ ಸಚಿವ ತಂಗಡಗಿ ವಿರುದ್ಧ ಪ್ರಕರಣ ದಾಖಲು
“Modi ಜಪಿಸುವ ವಿದ್ಯಾರ್ಥಿಗಳ ಕಪಾಳಕ್ಕೆ ಹೊಡೆಯಿರಿ’: ಶಿವರಾಜ ತಂಗಡಗಿ
MUST WATCH
ಹೊಸ ಸೇರ್ಪಡೆ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ