ಹಳ್ಳ ಸೇರುತ್ತಿದೆ ಗಂಗಾವತಿ ಕಸ


Team Udayavani, Feb 7, 2019, 10:09 AM IST

february-19.jpg

ಗಂಗಾವತಿ: ನಗರದ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಆದರೆ ಜನಸಂಖ್ಯೆಗೆ ಪೂರಕವಾಗಿ ನಗರಸಭೆ ಆಡಳಿತ ಮಂಡಳಿ ಮೂಲ ಸೌಕರ್ಯ ಒದಗಿಸುವಲ್ಲಿ ಹಾಗೂ ನೈರ್ಮಲ್ಯ ಕಾಪಾಡುವಲ್ಲಿ ವಿಫಲವಾಗಿದೆ. ನಗರದಲ್ಲಿ ಪ್ರತಿನಿತ್ಯ ಉತ್ಪನ್ನವಾಗುವ ಘನತ್ಯಾಜ್ಯವನ್ನು ನಗರದ ಮಧ್ಯೆದಲ್ಲಿರುವ ದುರುಗಮ್ಮನ ಹಳ್ಳಕ್ಕೆ ಸುರಿಯಲಾಗುತ್ತಿದೆ. ಹಳ್ಳದಲ್ಲಿ ಸಂಗ್ರಹವಾಗುವ ಕಸವನ್ನು ಸುಡಲಾಗುತ್ತಿದ್ದು, ಇದರಿಂದ ಕೆಟ್ಟ ವಾಸನೆ ಮತ್ತು ದಿನವಿಡಿ ಹೊಗೆ ಬರುವುದರಿಂದ ಗುಂಡಮ್ಮನಕ್ಯಾಂಪ್‌ ಅಂಬೇಡ್ಕರ್‌ ನಗರ, ಇಂದಿರಾ ನಗರ, ಜುಲೈ ನಗರ ಹಾಗೂ ಅಮರ ಭಗತ್‌ಸಿಂಗ್‌ ನಗರ ಸೇರಿ ಸುತ್ತಮುತ್ತ ವಾಸ ಮಾಡುವವರಿಗೆ ಅಸ್ತಮಾ ಸೇರಿ ಇತರೆ ಆರೋಗ್ಯ ಸಮಸ್ಯೆ ಕಾಡುತ್ತಿವೆ.

ದುರುಗಮ್ಮನ ಹಳ್ಳಕ್ಕೆ ಕಸ ಸುರಿಯುತ್ತಿರುವ ಬಗ್ಗೆ ಈಗಾಗಲೇ ಹಲವು ಭಾರಿ ಪರಿಸರವಾದಿಗಳು ಆಕ್ಷೇಪವ್ಯಕ್ತಪಡಿಸಿ, ನಗರಸಭೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಸದಿಂದ ಇಡೀ ದುರುಗಮ್ಮನಹಳ್ಳ ಕೆಟ್ಟವಾಸನೆಯಿಂದ ಕೂಡಿದೆ. ನಗರದಲ್ಲಿ ಮೃತಪಡುವ ಹಂದಿ, ನಾಯಿ ಹಾಗೂ ಸತ್ತ ಪ್ರಾಣಿಗಳ ಕಳೆಬರವನ್ನು ನಗರಸಭೆಯವರು ಹಳ್ಳಕ್ಕೆ ತಂದು ಎಸೆಯುತ್ತಿದ್ದಾರೆ. ಕೆಲ ಖಾಸಗಿ ಆಸ್ಪತೆಗಳ ತ್ಯಾಜ್ಯ ನೀರು, ಮಾರುಕಟ್ಟೆಯಲ್ಲಿ ಉಳಿಯುವ ತರಕಾರಿ, ಹೋಟೆಲ್‌, ಖಾನಾವಳಿಗಳ ತ್ಯಾಜ್ಯವನ್ನು ಹಳ್ಳಕ್ಕೆ ಹಾಕಲಾಗುತ್ತಿದೆ. ಈ ಬಗ್ಗೆ ನಗರಸಭೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ.

ಯಾರ್ಡ್‌ ನಿರುಪಯುಕ್ತ: ಘನತ್ಯಾಜ್ಯ ವಸ್ತುಗಳನ್ನು ಪುನರ್‌ ಸಂಸ್ಕರಣೆ ಮಾಡಿ, ಪರಸರ ಸ್ನೇಹಿಯಾಗಿಸಲು 15 ವರ್ಷಗಳ ಹಿಂದೆಯೇ ತಾಲೂಕಿನ ಮಲಕನಮರಡಿ ಗ್ರಾಮದ ಹತ್ತಿರ ನೂರು ಎಕರೆ ಪ್ರದೇಶದಲ್ಲಿ ಕಸ ವಿಲೇವಾರಿ ಯಾರ್ಡ್‌ ನಿರ್ಮಿಸಲಾಗಿದೆ. ಗಂಗಾವತಿ ನಗರದ ಪೂರ್ಣ ಕಸ ಹಾಗೂ ಘನತ್ಯಾಜ್ಯವನ್ನು ಇಲ್ಲಿಗೆ ತಂದು ಸಂಸ್ಕರಣೆ ಮಾಡಬೇಕೆಂಬ ನಿಯಮವಿದ್ದರೂ ಕೆಲ ವರ್ಷಗಳ ಕಾಲ ಮಾತ್ರ ಮಲಕನಮರಡಿ ಯಾರ್ಡ್‌ನಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಯಿತು. ಆದರೆ ನಂತರದ ದಿನಗಳಲ್ಲಿ ತ್ಯಾಜ್ಯವನ್ನು ದುರುಗಮ್ಮನ ಹಳ್ಳಕ್ಕೆ ಸುರಿಯುವ ಮೂಲಕ ನಗರಸಭೆ ನೈರ್ಮಲ್ಯ ಕಾಪಾಡದೇ ನಿರ್ಲಕ್ಷ್ಯವಹಿಸಿದೆ. ಪ್ರತಿದಿನ ಸ್ವಚ್ಛತೆಯ ಕುರಿತು ಮಾತನಾಡುವ ನೈರ್ಮಲ್ಯ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂಬ ಆರೋಪವಿದೆ. ಪೌರಕಾರ್ಮಿಕರು ಬೆಳಗಿನ ಜಾವ ಕಸ ಗೂಡಿಸಿ ಎಲ್ಲೆಂದರಲ್ಲಿ ಕಸಕ್ಕೆ ಬೆಂಕಿ ಹಚ್ಚಿ ಸುಡುತ್ತಾರೆ. ಇದರಿಂದ ಬೆಳಗಿನ ಜಾವದಲ್ಲಿ ಇಡೀ ನಗರ ಹೊಗೆಯಿಂದ ಕೂಡಿರುತ್ತದೆ. ಇದನ್ನು ತಡೆಯುವಲ್ಲಿ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

ನಗರದ ಜನಸಂಖ್ಯೆ 1 ಲಕ್ಷಕ್ಕೂ ಅಧಿಕವಿದ್ದು, ನಗರದ 35 ವಾರ್ಡ್‌ಗಳಲ್ಲಿ ತ್ಯಾಜ್ಯ ಸಂಗ್ರಹಕ್ಕೆ ವಾಹನ ನಿಯೋಜಿಸಲಾಗಿದೆ. ಪ್ರತಿ ದಿನ ನಗರದಲ್ಲಿ 40 ಟನ್‌ಗೂ ಅಧಿಕ ತ್ಯಾಜ್ಯ ಸಂಗ್ರಹವಾಗುತ್ತಿದೆ.

ಸೋಮಾರಿತನ
ತಾಲೂಕಿನ ಮಲಕನಮರಡಿ ಗ್ರಾಮದ ಹತ್ತಿರ ತ್ಯಾಜ್ಯ ವಿಲೇವಾರಿ ಘಟಕ ನಗರದಿಂದ ಸುಮಾರು 10 ಕಿ.ಮೀ ದೂರದಲ್ಲಿದೆ. ಪೌರಕಾರ್ಮಿಕರು ತ್ಯಾಜ್ಯ ವಿಲೇವಾರಿಗಾಗಿ ಅಷ್ಟು ದೂರ ಹೋಗಿ ಬರಲು ಆಗದೇ, ಕೆಲಸದಲ್ಲಿ ಸೋಮಾರಿತ ತೋರಿ ದುರುಗಮ್ಮನ ಹಳ್ಳದಲ್ಲೇ ಕಸ ಸುರಿಯುತ್ತಿದ್ದಾರೆ. ಹಳ್ಳದಲ್ಲಿ ಕಸ ಹೆಚ್ಚಾಗಿದ್ದು, ನಿತ್ಯ ಸುಡುತ್ತಿದ್ದಾರೆ.

ನಗರದಲ್ಲಿ ಪ್ರತಿದಿನ ಉತ್ಪನ್ನವಾಗುವ ತ್ಯಾಜ್ಯವನ್ನು ನಿಗದಿ ಮಾಡಿದ ಸ್ಥಳದಲ್ಲಿ ವಿಲೇವಾರಿ ಮಾಡಬೇಕು. ಇದನ್ನು ಸಂಸ್ಕರಣೆಗೊಳಿಸಿ ಪರಿಸರಕ್ಕೆ ಹಾನಿಯಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕೆಂಬ ನಿಯಮವಿದೆ. ದುರುಗಮ್ಮನಹಳ್ಳಕ್ಕೆ ಕಸ ಇತರೆ ತ್ಯಾಜ್ಯ ಹಾಕುವುದು ನಿಷೇಧಿಸಲಾಗಿದೆ. ಖುದ್ದು ಸ್ಥಳ ಪರಿಶೀಲಿಸಿ, ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುತ್ತದೆ. ಖಾಸಗಿಯವರು ಹಳ್ಳಕ್ಕೆ ತ್ಯಾಜ್ಯ ಹಾಕುವಂತಿಲ್ಲ. ನಗರದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಮಲಕನಮರಡಿ ಗ್ರಾಮದಲ್ಲಿರುವ ಯಾರ್ಡ್‌ನಲ್ಲಿ ವಿಲೇವಾರಿ ಮಾಡಬೇಕು.
•ಡಾ| ದೇವಾನಂದ ದೊಡ್ಮನಿ, ಪೌರಾಯುಕ್ತರು

ದುರುಗಮ್ಮನಹಳ್ಳಕ್ಕೆ ನಗರಸಭೆಯವರು ಕಸ ತಂದು ಹಾಕುತ್ತಾರೆ. ಅಧಿಕಾರಿಗಳು ಬರುವ ಸೂಚನೆ ಇದ್ದಾಗ ಮಾತ್ರ ಮಲಕನಮರಡಿ ಯಾರ್ಡ್‌ಗೆ ಸಾಗಿಸಿ, ನಂತರದ ದಿನಗಳಲ್ಲಿ ಕಸವನ್ನು ಹಳ್ಳಕ್ಕೆ ಸುರಿದು ಹೋಗುತ್ತಾರೆ. ಸತ್ತ ನಾಯಿ, ಹಂದಿ ಕೋಳಿಗಳನ್ನು ಹಳ್ಳಕ್ಕೆ ಹಾಕುವುದರಿಂದ ಸುತ್ತಲಿನ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿದೆ. ಹಳ್ಳಕ್ಕೆ ಕಸ ಹಾಕುವುದನ್ನು ತಡೆಯಬೇಕು.
•ರಾಜು,ಸ್ಥಳೀಯರು

ನಗರದ ಮಧ್ಯೆ ಹರಿಯುವ ದುರುಗಮ್ಮನ ಹಳ್ಳದ ನೀರನ್ನು ದಶಕದ ಹಿಂದೆ ಜನರು ಸ್ನಾನ ಹಾಗೂ ಇತರೆ ಕೆಲಸಗಳಿಗೆ ಬಳಸುತ್ತಿದ್ದರು. ನಗರಸಭೆ ಹಾಗೂ ಜನತೆ ಕಸ ಹಾಕುವುದರಿಂದ ಹಳ್ಳ ಸಂಪೂರ್ಣವಾಗಿ ಮಲೀನವಾಗಿದೆ. ಇದರಿಂದ ಹಳ್ಳದ ಪಕ್ಕದ ನಿವಾಸಿಗಳ ಬದುಕು ದುಸ್ತಾರವಾಗಿದೆ. ನಗರಸಭೆ ಕಸ ಹಾಗೂ ಘನತ್ಯಾಜ್ಯ ಹಾಕುವುದನ್ನು ನಿಲ್ಲಿಸಬೇಕು. ಚರಂಡಿ ನೀರು ಹೊಟೇಲ್‌ ಇತರೆ ವಾಣಿಜ್ಯ ತ್ಯಾಜ್ಯ ಹಳ್ಳಕ್ಕೆ ಸೇರುವುದನ್ನು ನಿಲ್ಲಿಸಲು ಕ್ರಮಕೈಗೊಳ್ಳಬೇಕು. ಸ್ವಯಂಸೇವಾ ಸಂಸ್ಥೆಗಳು ಶ್ರಮದಾನ ನಡೆಸಿ ಹಳ್ಳವನ್ನು ಸ್ವಚ್ಛಗೊಳಿಸಬೇಕು.
•ಡಾ| ಶಿವಕುಮಾರ ಮಾಲೀಪಾಟೀಲ,
 ಪರಿಸರ ಪ್ರೇಮಿ ಹಾಗೂ ವೈದ್ಯ

•ಕೆ. ನಿಂಗಜ್ಜ

ಟಾಪ್ ನ್ಯೂಸ್

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

Parameshwar

Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್

Minchu

Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.