ಕೃಷಿಹೊಂಡ ಸಹಾಯಧನಕ್ಕಾಗಿ ಕಚೇರಿಗೆ ಅಲೆದಾಟ


Team Udayavani, Mar 18, 2019, 10:58 AM IST

18-march-115.jpg

ಕುಷ್ಟಗಿ: ರೈತರು ಆಸಕ್ತಿಯಿಂದ ಕೃಷಿ ಹೊಂಡ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಸಹಾಯಧನಕ್ಕಾಗಿ ಕೃಷಿ ಇಲಾಖೆಗೆ ಎಡತಾಕುವಂತಾಗಿದೆ. ಸರ್ಕಾರ ಮಹಾತ್ವಾಕಾಂಕ್ಷಿ ಯೋಜನೆಯಾದ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳನ್ನು ರೈತರ ಬೇಡಿಕೆಗೆ ಅನುಗುಣವಾಗಿ ಮಂಜೂರು ಮಾಡಿದೆ. ಕೃಷಿ ಹೊಂಡದಿಂದ ಹಲವು ಪ್ರಯೋಜನೆಗಳ ಅರಿವಾಗಿ ರೈತರು ತಮ್ಮ ಜಮೀನಿನಲ್ಲೂ ನಿರ್ಮಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ.

ಮಳೆಯಾದಾಗ ಕೃಷಿ ಹೊಂಡ ತುಂಬಿದರೆ, ಮಳೆ ಕೈಕೊಟ್ಟ ಸಂದರ್ಭದಲ್ಲಿ ಕೃಷಿ ಹೊಂಡದ ನೀರನ್ನು ತುಂತುರು ನೀರಾವರಿ ಆಧಾರಿತವಾಗಿ ಬಳಸಿಕೊಂಡು ಬೆಳೆ ರಕ್ಷಿಸಿಕೊಳ್ಳಲು ಸಾಧ್ಯ. ಈ ಹಿನ್ನೆಲೆಯಲ್ಲಿ ಇಂದಿನ ದಿನಮಾನದಲ್ಲಿ ಕೃಷಿ ಹೊಂಡಗಳು ಪ್ರಸ್ತುತವೆನಿಸಿವೆ. 21 ಮೀಟರ್‌ ಕೃಷಿ ಹೊಂಡಕ್ಕೆ ಮಸಾರಿ (ಕೆಂಪು) ಜಮೀನಿಲ್ಲಿ ಕೃಷಿ ಹೊಂಡಗಳಾದರೆ, 61,962 ರೂ. ಕಪ್ಪು (ಎರೆ) ಜಮೀನಾದರೆ 55,138 ರೂ. ಹಾಗೂ 27 ಮೀಟರ್‌ ಕೃಷಿ ಹೊಂಡಗಳಿಗೆ ಮಸಾರಿ, ಎರೆ ಜಮೀಗೆ 87,416 ರೂ. ಸಹಾಯಧನ ನಿಗದಿಯಾಗಿದೆ.

ಆಯ್ಕೆಯಾದ ಫಲಾನುಭವಿಗಳ ಜಮೀನಿನಲ್ಲಿ ಇಲಾಖೆ ಕೃಷಿ ಹೊಂಡಕ್ಕೆ ಸೂಕ್ತ ಜಾಗೆ ಪರಿಶೀಲಿಸಿ, ಅನುಮೋದನೆ ನೀಡುವುದು, ಕೃಷಿ ಹೊಂಡ ನಿರ್ಮಿಸಿಕೊಳ್ಳುವ ಫಲಾನುಭವಿ ರೈತರಿಗೆ ಕೃಷಿ ಇಲಾಖೆ ತಾಂತ್ರಿಕ ಸಲಹೆ, ಕೃಷಿ ಹೊಂಡ ನಿರ್ಮಾಣದ ಮೇಲುಸ್ತವಾರಿವಹಿಸುವುದು, ಕೃಷಿ ಹೊಂಡ ನಿರ್ಮಾಣವಾದ ನಂತರ ಅವರ ಖಾತೆಗೆ ಸಹಾಯಧನ ವರ್ಗಾಯಿಸುವುದು ಕೃಷಿ ಇಲಾಖೆಯ ಕೆಲಸ.

ಆದರೆ ಇಲ್ಲಿನ ಕೃಷಿ ಇಲಾಖೆ ಆಯ್ಕೆಯಾದ ಫಲಾನುಭವಿಗಳ ಕೃಷಿ ಹೊಂಡಗಳನ್ನು ನಿರ್ಮಿಸಲು ಖಾಸಗಿ ಏಜೆನ್ಸಿ ಮಾಡಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ರೈತರು ನಿರ್ಮಿಸಿಕೊಂಡ ಕೃಷಿ ಹೊಂಡಗಳಿಗಿಂತ ಖಾಸಗಿ ಏಜೆನ್ಸಿ ನಿರ್ಮಿಸಿದವರಿಗೆ ಆದ್ಯತೆ ನೀಡಲಾಗುತ್ತಿದೆ. ರೈತರು ನಿರ್ಮಿಸಿದ ಕೃಷಿ ಹೊಂಡಗಳಿಗೆ ಸಹಾಯಧನ ಬಿಡುಗಡೆಯಾಗಿಲ್ಲ. ಅದೇ ಕೃಷಿ ಇಲಾಖೆಯವರ ಅಧಿನ ಕೃತ ಏಜೆನ್ಸಿಯವರಿಂದ ಕೃಷಿ ಹೊಂಡ ನಿರ್ಮಿಸಿದವರ ಖಾತೆಗೆ ಸಹಾಯಧನ ಬಿಡುಗಡೆಯಾಗಿರುವುದನ್ನು ರೈತರು ಪ್ರಶ್ನಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಗುಮಗೇರಾ ಗ್ರಾಮದ ಫಲಾನುಭವಿ ಶಿವರಾಜ್‌ ಮಾಲಿಪಾಟೀಲ, 2018-19ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಕಾರ್ಯಾದೇಶ ನೀಡಿದ್ದರಿಂದ ಸ್ವಂತ ಖರ್ಚಿನಲ್ಲಿ ಕೃಷಿ ಹೊಂಡ ನಿರ್ಮಿಸಲಾಗಿದೆ. ಆದರೆ ಇಲ್ಲಿಯವರೆಗೂ ಸಹಾಯಧನ ಬಿಡುಗಡೆ ಮಾಡಿಲ್ಲ. ಜೆಸಿಬಿ, ಟ್ರಾಕ್ಟರ್‌ನವರು ಮನೆಗೆ ಎಡತಾಕುತ್ತಿದ್ದು, ನಾವು ಕೃಷಿ ಇಲಾಖೆಗೆ ಎಡತಾಕುವಂತಾಗಿದೆ. ನಾವೇ ನಿರ್ಮಿಸಿಕೊಂಡಿದ್ದರಿಂದ ಸಹಾಯಧನ ಬಿಡಿಗಡೆಯಾಗಿಲ್ಲ. ಕೃಷಿ ಇಲಾಖೆಯವರು, ಸೂಚಿಸಿದ ವ್ಯಕ್ತಿಯಿಂದ ನಿರ್ಮಿಸಿಕೊಂಡವರಿಗೆ ಸಹಾಯಧನ ಬಿಡುಗಡೆಯಾಗಿದೆ. ಇದೀಗ ಸದರಿ ಇಲಾಖೆಯವರು, ರೈತರು ನಿರ್ಮಿಸಿಕೊಂಡ ಕೃಷಿ ಹೊಂಡಕ್ಕೆ ಯಾರನ್ನು ಕೇಳಿ ನಿರ್ಮಿಸಿಕೊಂಡಿರುವಿರಿ? ಪ್ರಶ್ನಿಸುತ್ತಿದ್ದಾರೆಂದು ಆರೋಪಿಸಿದರು. ಏಜೆನ್ಸಿ ನಿರ್ಮಿಸಿರುವುದಕ್ಕಿಂತ ರೈತರು ನಿರ್ಮಿಸಿಕೊಂಡಿರುವ ಕೃಷಿ ಹೊಂಡ ಅಚ್ಚುಕಟ್ಟಾಗಿವೆ. ಆಳವೂ ಹೆಚ್ಚಿದೆ. ಈ ಕೆಲಸಕ್ಕೆ ಆದ್ಯತೆ ನೀಡದೇ ಖಾಸಗಿ ಏಜೆನ್ಸಿಯವರು ಬೇಕಾಬಿಟ್ಟಿ ನಿರ್ಮಿಸಿದವರಿಗೆ ಆದ್ಯತೆ ನೀಡುತ್ತಿರುವುದು ಎಷ್ಟು ಸರಿ? ಎನ್ನುವುದು ರೈತರ ಆರೋಪ.

ಸರ್ಕಾರದಿಂದ ಬಾಕಿ ಅನುದಾನ ಬರುವುದು ವಿಳಂಬವಾಗಿದೆ. ಹೀಗಾಗಿ ಕೆಲವು ರೈತರ ಖಾತೆಗೆ ಜಮೆಯಾಗಿಲ್ಲ, ಅನುದಾನ ಬಿಡುಗಡೆ ಬಳಿಕ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ.
 ವೀರಣ್ಣ ಕಮತರ,
ಸಹಾಯಕ ಕೃಷಿ ನಿರ್ದೇಶಕ ಕುಷ್ಟಗಿ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ

Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ

Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು

Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು

Congress ಪ್ರಧಾನಿ ಅಭ್ಯರ್ಥಿ ಯಾರು ಹೇಳಿ ನೋಡೋಣ: ಯಡಿಯೂರಪ್ಪ

Congress ಪ್ರಧಾನಿ ಅಭ್ಯರ್ಥಿ ಯಾರು ಹೇಳಿ ನೋಡೋಣ: ಯಡಿಯೂರಪ್ಪ

Karadi Sanganna: ಬಿಜೆಪಿ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೊಂಡ ಸಂಗಣ್ಣ ಕರಡಿ

Karadi Sanganna: ಬಿಜೆಪಿ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೊಂಡ ಸಂಗಣ್ಣ ಕರಡಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.