ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕುಂದಾಪುರ ಸಾಮಾನ್ಯ ಸಭೆ
Team Udayavani, Jul 11, 2017, 1:40 AM IST
ಕುಂದಾಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ.) ತಾಲೂಕು ಶಾಖೆ ಕುಂದಾಪುರ ಇವರ ಸಾಮಾನ್ಯ ಸಭೆ ಇಲ್ಲಿನ ಚಿಕನ್ ಸಾಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು.
ಸಭೆಯಲ್ಲಿ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಕುಂದಾಪುರ ಪುರಸಭಾ ವ್ಯಾಪ್ತಿ ಯಲ್ಲಿರುವ ಮುದ್ದು ಗುಡ್ಡೆಯಲ್ಲಿರುವ ದಲಿತ ಕುಟುಂಬದ ಸಮಸ್ಯೆ, ಕಡ್ಗಿ ರಸ್ತೆ ಹೊಸಬೆಟ್ಟು ದಲಿತ ನಿವಾಸಿಗಳ ಸಮಸ್ಯೆ, ಪೆರಿ ರಸ್ತೆಯ ದಲಿತ ನಿವಾಸಿಗಳ ಸಮಸ್ಯೆಯನ್ನು ಬಗೆಹರಿಸಲು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು ಪರಿಹರಿಸಲು ನಿರ್ಣಯಿಸ ಲಾಯಿತು. ಕುಂದಾಪುರ ತಾಲೂಕಿನ ಅಕ್ರಮ ಮದ್ಯ ಮಾರುವವರ ವಿರುದ್ಧ ಮತ್ತು ಎಲ್ಲೆಂದರಲ್ಲಿ ಶಾಲಾ ಕಾಲೇಜುಗಳ ಸಮೀಪ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮನೆ ಸಮೀಪ ಈಗ ತೆರೆದಿರುವ ಮತ್ತು ಹೊಸದಾಗಿ ತೆರೆಯಲು ಉದ್ದೇಶವಿರುವ ಮದ್ಯ ದಂಗಡಿಗಳನ್ನು ತೆರೆಯದಂತೆ ಕಾನೂನಾತ್ಮಕ ಹೋರಾಟ ಮಾಡಲು ನಿರ್ಣಯಿಸಲಾಯಿತು.
ದಲಿತ ವಿರೋಧಿ ನೀತಿಗಳನ್ನು ಅನುಕರಿಸುವ ಸಂಸ್ಥೆಗಳ ವಿರುದ್ಧ ದಲಿತ ದೌರ್ಜನ್ಯ ಕಾಯಿದೆ ಅಡಿಯಲ್ಲಿ ದೂರು ದಾಖಲಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ದ.ಸಂ.ಸ. ಕುಂದಾಪುರ ತಾಲೂಕು ಸಂಚಾಲಕ ಕೆ.ಸಿ. ರಾಜು ಬೆಟ್ಟಿನ ಮನೆ, ದ.ಸಂ.ಸ. ಜಿಲ್ಲಾ ನಾಯಕ ಮಂಜುನಾಥ ಗಿಳಿಯಾರು, ಸುರೇಶ್ ಬಾಕೂìರು, ತಾಲೂಕು ಸಂಘಟನ ಸಂಚಾಲಕ ಪ್ರಭಾಕರ್ ವಿ., ಗಿರೀಶ್ ಕುಮಾರ್ ಜಿ., ಮಂಜುನಾಥ ಕೆ., ಗಂಗಾಧರ ಜಿ., ಮಂಜುನಾಥ ನಾಗೂರು, ತಾಲೂಕು ಮಹಿಳಾ ಒಕ್ಕೂಟದ ಸಂಘಟನಾ ಸಂಚಾಲಕಿ ನಯನಾ ಎ., ಸೀತಾ ಕೆ., ದ.ಸಂ.ಸ. ಗ್ರಾಮ ಶಾಖೆಯ ಸಂಚಾಲಕರಾದ ಹರೀಶ್ ಕೆರಾಡಿ, ಆನಂದ ಹಲೂ¤ರು,ರವಿ ಸುಣ್ಣಾರಿ, ಅಣ್ಣಪ್ಪ ಬಿ.ಎಂ. ಹರೀಶ್ ಅನಗಳ್ಳಿ, ವೀರಭದ್ರ ಕೆ., ತಿಮ್ಮ ಪಿ., ಉಮೇಶ್ ಎಚ್. ಮತ್ತಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ