ಶಿರೂರಿನ ಗ್ರೀನ್ವ್ಯಾಲಿ ಸಂಸ್ಥಾಪಕ ಅಬ್ದುಲ್ ಖಾದರ್ ಭಾಶು ನಿಧನ
Team Udayavani, Jul 25, 2017, 3:16 PM IST
ಮಂಗಳೂರು: ಉಡುಪಿ ಜಿಲ್ಲೆಯ ಶಿರೂರಿನ ಗ್ರೀನ್ ವ್ಯಾಲಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ, ಎನ್ಆರ್ಐ ಅಬ್ದುಲ್ ಖಾದರ್ ಭಾಶು ಅವರು ಮಂಗಳವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅವರಿಗೆ 54 ವರ್ಷ ಪ್ರಾಯವಾಗಿತ್ತು.
ಇತ್ತೀಚೆಗೆ ಮಗಳ ವಿವಾಹ ಸಮಾರಂಭ ನಡೆಸಿದ್ದ ಅವರು ಖಾಸಗಿ ಹೊಟೇಲ್ನಲ್ಲಿ ತಂಗಿದ್ದರು. ಈ ವೇಳೆ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಮಾಜ ಸೇವಕರಾಗಿದ್ದ ಅವರು ಕ್ರೀಡಾ ಪ್ರೇಮಿಯೂ ಆಗಿದ್ದರು. ಅವರು ಗ್ರೀನ್ ವ್ಯಾಲಿ ಶಿಕ್ಷಣ ಸಂಸ್ಥೆಗೆ ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವು ಕ್ರಿಕೆಟಿಗರನ್ನು ಕರೆಸಿದ್ದರು.