ಆಟೋಗೆ ಲಾರಿ ಢಿಕ್ಕಿ:ಪ್ರಯಾಣಿಕ ಸಾವು,ಚಾಲಕ ಗಂಭೀರ
Team Udayavani, Dec 15, 2017, 11:14 AM IST
ಕುಂದಾಪುರ: ಇಲ್ಲಿನ ಹೆಮ್ಮಾಡಿ ಬಳಿ ಶುಕ್ರವಾರ ನಸುಕಿನ 2 ಗಂಟೆಯ ವೇಳಗೆ ಲಾರಿ ಯೊಂದು ಆಟೋ ರಿಕ್ಷಾಗೆ ಢಿಕ್ಕಿಯಾದ ಪರಿಣಾಮ ಪ್ರಯಾಣಿಕ ದಾರುಣವಾಗಿ ಸಾವನ್ನಪ್ಪಿದ್ದು, ಆಟೋ ಚಾಲಕ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ನಡೆದಿದೆ.
ಮೃತ ವ್ಯಕ್ತಿ ಸೊರಬ ನಿವಾಸಿ ಗಣೇಶ್ ಪೂಜಾರಿ ಎನ್ನುವವರಾಗಿದ್ದು, ಕುಂದಾಪುರದಿಂದ ಹೆಮ್ಮಾಡಿ ಬಳಿಯಿರುವ ಕನ್ನಡಕುದ್ರುವಿನ ಪತ್ನಿಯ ಮನೆಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.
ಗಣೇಶ್ ಅಪಘಾತವಾಗುವ ಮುನ್ನ ಪತ್ನಿಗೆ ಕರೆ ಮಾಡಿ ಇನ್ನೈದು ನಿಮಿಷದಲ್ಲಿ ಮನೆಯಲ್ಲಿ ಇರುತ್ತೇನೆ ಎಂದಿದ್ದರು. ಹೆಮ್ಮಾಡಿಯಲ್ಲಿ ನಡು ರಾತ್ರಿ ಆಟೋ ರಿಕ್ಷಾ ಸಿಗುವುದಿಲ್ಲವೆಂದು ಕುಂದಾಪುರದಲ್ಲಿ ಬಸ್ ಇಳಿದು ಆಟೋ ಹಿಡಿದಿದ್ದರು ಎಂದು ತಿಳಿದು ಬಂದಿದೆ.
ಅಪಘಾತವಾದೊಡನೆಯೇ ಗಂಗೊಳ್ಳಿಯ ಅಂಬುಲೆನ್ಸ್ ನಿರ್ವಹಿಸುತ್ತಿರುವ ಇಬ್ರಾಹಿಂ ಅವರು ಸ್ಥಳಕ್ಕಾಗಮಿಸಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.
ಕುಂದಾಪುರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapur: ಕುಸಿದು ಬಿದ್ದು ಸಾವು
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ