ಕನ್ನಡ ಚಿತ್ರರಂಗದಲ್ಲಿ ಹೊಸ ಭಾಷ್ಯ ಬರೆದ “ಕುಂದಾಪುರ’ದ ಕಾಶೀನಾಥ್‌


Team Udayavani, Jan 19, 2018, 11:03 AM IST

19-29.jpg

ಕುಂದಾಪುರ: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ, ಸಂಗೀತ ಸಂಯೋಜಕರಾಗಿದ್ದ ಕಾಶೀನಾಥ್‌ ಅವರು ಮೂಲತಃ ಕುಂದಾಪುರದ ಕೋಣಿ ಯಲ್ಲಿ ಹುಟ್ಟಿದ್ದು, ಕೋಟೇಶ್ವರದ ಗೋಪಾಡಿಯ ಬೆಳ್ತಕ್ಕಿ ಮನೆಯಲ್ಲಿ ಅವರ ಮೂಲ ಮನೆಯಿದೆ. ಕ್ಯಾನ್ಸರ್‌ ಕಾಯಿಲೆ ಯಿಂದ ಬಳಲುತ್ತಿದ್ದ ಕಾಶೀನಾಥ್‌ (63) ಅವರು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಇಹಲೋಕ ತ್ಯಜಿಸಿದ್ದಾರೆ.
ಕೋಟೇಶ್ವರದ ಮಾಧ್ವ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಕಾಶೀನಾಥ್‌, ಬಾಲ್ಯದ ಕೆಲಕಾಲ ಮಾತ್ರ ಕೋಣಿಯಲ್ಲಿ ವಾಸವಿದ್ದು, ಬಳಿಕ ಇಲ್ಲಿರುವ ಮನೆ, ಜಾಗವನ್ನು ಬೇರೆಯ ವರಿಗೆ ಮಾರಿ ಬೆಂಗಳೂರಿನಲ್ಲಿ ನೆಲೆಸಿದ್ದರು. 

ಕುಟುಂಬದ ವಿವರ: ತಂದೆ ಜಿ. ವಾಸುದೇವ ರಾವ್‌ ಪ್ರಾರಂಭದಲ್ಲಿ ಕುಂದಾಪುರದಲ್ಲಿ ಹೊಟೇಲ್‌ ಉದ್ಯಮ, ಹಿಟ್ಟಿನ ಗಿರಣಿ ನಡೆಸುತ್ತಿದ್ದರು. ಆಬಳಿಕ ಬೆಂಗಳೂರಿನಲ್ಲಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ತಾಯಿ ಸರಸ್ವತಿ. ಅಣ್ಣ ಸತ್ಯನಾರಾಯಣ, ತಮ್ಮಂದಿರು ದತ್ತಾತ್ರೇಯ, ರವಿ, ಉಮಾಪತಿ, ತಂಗಿ ಗಾಯತ್ರಿ, ಪತ್ನಿ ಚಂದ್ರಪ್ರಭಾ, ಪುತ್ರ, ನಟ ಅಲೋಕ್‌ (ಅಭಿಮನ್ಯು), ಪುತ್ರಿ ಅಮೃತವರ್ಷಿಣಿ ದುಬಾೖಯಲ್ಲಿದ್ದಾರೆ.

ಬಾವಿ ನೀರು ಕೊಂಡು ಹೋಗಿದ್ದರು:  ಕೆಲ ವರ್ಷಗಳ ಹಿಂದೆ ಬಸ್ರೂರಿನಲ್ಲಿ ಸಮ್ಮಾನ ಸ್ವೀಕರಿಸಲು ಬಂದಿದ್ದಾಗ ಕಾಶೀನಾಥ್‌ ತಮ್ಮ ಮೂಲ ಮನೆಗೆ ಬಂದಿದ್ದು, ಮನೆಯವ ರೊಂದಿಗೆ ಮಾತನಾಡಿ, ಅವರಿದ್ದಾಗ ಇದ್ದ ಬಾವಿಯ ನೀರು ಸೇದಿ 2 ಬಾಟಲಿ ನೀರು ತೆಗೆದುಕೊಂಡು ಹೋಗಿದ್ದರು. ಆಗಿದ್ದ ತುಳಸಿ ಕಟ್ಟೆ, ಹತ್ತಿ ಮರ ಈಗಲೂ ಹಾಗೆಯೇ ಇದೆ.

80-90ರ ದಶಕದಲ್ಲಿ ಕನ್ನಡ ಚಿತ್ರರಂಗದ ದಿಸೆಯನ್ನು ಬದಲಿಸಿದ ಕಾಶೀನಾಥ್‌, ಕಡಿಮೆ ವೆಚ್ಚದಲ್ಲಿ ಪ್ರೇಕ್ಷಕರನ್ನು ಮೆಚ್ಚುವ ಚಿತ್ರಗಳನ್ನು ಕೊಟ್ಟ ಹೆಗ್ಗಳಿಕೆಯಿದೆ. ಹಾಸ್ಯ, ಸಿಂಪಲ್‌ ಡೈಲಾಗ್‌, ಡಬಲ್‌ ಮೀನಿಂಗ್‌ ಚತುರ, ಹದಿಹರೆಯದ ಮನಸ್ಸುಗಳ ಜೀವನಾನುಭವನ್ನು ಅಷ್ಟೇ ಚೆನ್ನಾಗಿ ಕಟ್ಟಿ ಕೊಡುವ ಮೂಲಕ ಹೊಸ ಟ್ರೆಂಡ್‌ ಹುಟ್ಟುಹಾಕಿದ ಕಾಶೀ 43 ಸಿನೆಮಾಗಳಲ್ಲಿ ನಟಿಸಿದ್ದು, 11 ಕನ್ನಡ, 1 ಹಿಂದಿ ಹಾಗೂ 1 ತೆಲುಗು ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.

ಕರಾವಳಿಗರಿಗೆ ಪ್ರಾಶಸ್ತ್ಯ: ಕಾಶೀನಾಥ್‌ ಅನೇಕ ಪ್ರತಿಭಾನ್ವಿತರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ ಕರಾವಳಿಗರಿಗೆ ಹೆಚ್ಚಿನ ಮಣೆ ಹಾಕುತ್ತಿದುದ್ದು ವಿಶೇಷ. ನಟ, ನಿರ್ದೇಶಕರಾಗಿ ಹೆಸರು ಗಳಿಸಿದ ಕುಂದಾಪುರ ಸಮೀಪದ ತೆಕ್ಕಟ್ಟೆಯ ಉಪೇಂದ್ರ, ಸಂಗೀತ ನಿರ್ದೇಶನದಲ್ಲಿ ತಮ್ಮದೇ ಛಾಪು ಮೂಡಿಸಿರುವ ವಿಟ್ಲ ಮೂಲದ ವಿ. ಮನೋಹರ್‌, 7 ಸಿನೆಮಾಗಳಲ್ಲಿ ಅವರೊಂದಿಗೆ ನಟಿಸಿ, 3 ಚಿತ್ರಗಳಲ್ಲಿ ಸಹಕರಿಸಿದ ಉಪ್ಪುಂದದ ಓಂ ಗಣೇಶ್‌, ನಟಿ ಭವ್ಯಾ ಹೀಗೆ ಅನೇಕ ಕರಾವಳಿಗರನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಕುಂದಗನ್ನಡದ ಮೇಲೆ ಒಲವು: ಚಿಕ್ಕಂದಿನಲ್ಲೇ ಬೆಂಗಳೂರಿಗೆ ಹೋದರೂ ತಾಯಿ ಕುಂದಗನ್ನಡದಲ್ಲೇ ಮಾತನಾಡುತ್ತಿದ್ದರಿಂದ ಕಾಶೀನಾಥ್‌ಗೂ ಕುಂದಗನ್ನಡದ ಬಗ್ಗೆ ವಿಶೇಷ ಒಲವು, ಅಭಿಮಾನವಿತ್ತು. ಹೊಸ ದಾಖಲೆ ಸೃಷ್ಟಿಸಿದ “ಅನುಭವ’, “ಅನಂತನ ಆವಾಂತರ’ (ಚಿತ್ರದ ಹೆಚ್ಚಿನ ಭಾಗ ಕುಂದಾಪುರ ಭಾಗದಲ್ಲೇ ಚಿತ್ರೀಕರಣವಾ ಗಿತ್ತು.) ಇನ್ನೂ ಹಲವು ಚಿತ್ರಗಳಲ್ಲಿ ಕುಂದಾಪುರ ಕನ್ನಡ
ಬಳಸಿಕೊಂಡಿದ್ದಾರೆ. ಇಲ್ಲಿನ ಖಾದ್ಯಗಳಿಗೂ ಮನಸೋತಿ ದ್ದರು. ಅವರಿಗೆ ಕಡುಬು, ಕೇಸುವಿನ ಎಲೆ ಪಲ್ಯ ಇಷ್ಟವಂತೆ.

ವಾರದ ಹಿಂದೆ ಬಂದಿದ್ದ ಪುತ್ರ, ಸೊಸೆ: ಕಾಶೀನಾಥ್‌ ಅವರು ಹುಟ್ಟಿದ್ದು ಕೋಣಿಯಲ್ಲಾದರೂ ಕೋಟೇಶ್ವರ ಸಮೀಪದ ಗೋಪಾಡಿಯ ಬೆಳ್ತಕ್ಕಿ ಮನೆಯಲ್ಲಿ ಅವರ ತಂದೆ, ಕುಟುಂಬದ ಮೂಲ ಮನೆ ಇದೆ. ಇಲ್ಲಿ ಅವರ ಅಜ್ಜ, ಅಪ್ಪ, ಕಾಶೀನಾಥ್‌ ಅವರೆಲ್ಲ ಬಾಲ್ಯ ಕಳೆದ ಹಳೆ ಮನೆಯ ಗೋಡೆ ಮಾತ್ರ ಈಗ ಇದೆ. ಇಲ್ಲಿ ಅವರ ಕುಟುಂಬದ ನಾಗಬನವಿದ್ದು, ಕಳೆದ ಗುರುವಾರ ಕಾಶೀನಾಥ್‌ ಪುತ್ರ ಅಭಿಮನ್ಯು ಹಾಗೂ ಸೊಸೆ ಬಂದು ನಾಗಬನಕ್ಕೆ ಪೂಜೆ ಸಲ್ಲಿಸಿ ತೆರಳಿದ್ದರು.

ಟಾಪ್ ನ್ಯೂಸ್

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.