ಕಲ್ಲು ಲಾರಿಗಳ ಬಗೆಗೆ ಸ್ವಲ್ಪ ಗಮನ ಕೊಡಿ
Team Udayavani, Mar 24, 2018, 7:45 AM IST
ಕುಂದಾಪುರ: ಗಂಗೊಳ್ಳಿಯ ಬಂದರಿನಲ್ಲಿ ನಡೆಯುತ್ತಿರುವ ಬಹು ಅಪೇಕ್ಷಿತ ಬ್ರೇಕ್ ವಾಟರ್ ಕಾಮಗಾರಿಗೆಂದು ಕಳೆದ ಹಲವಾರು ತಿಂಗಳುಗಳಿಂದ ಟನ್ ಗಟ್ಟಲೆ ತೂಕದ ಭಾರೀ ಗಾತ್ರದ ಶಿಲೆಕಲ್ಲುಗಳನ್ನು ಲಾರಿಗಳ ಮೂಲಕ ಸಾಗಣೆ ಮಾಡಲಾಗುತ್ತಿದೆ.
ಈ ಕಲ್ಲು ಗಳನ್ನು ಅಪಾಯಕರ ಸ್ಥಿತಿಯಲ್ಲಿ ಹೇರಿ ಕೊಂಡು ಲಾರಿಗಳು ಗಂಗೊಳ್ಳಿಯ ಜನಬಾಹುಳ್ಯದ ಕಿರಿದಾದ ಮುಖ್ಯ ರಸ್ತೆಯಲ್ಲಿ ನಿತ್ಯವೂ ಚಲಿಸುತ್ತಿರುತ್ತವೆ. ಈ ಕಲ್ಲುಗಳನ್ನು ತರುವ ಹಳೆಯ ಲಾರಿಗಳು ಅಷ್ಟೇನೂ ಉತ್ತಮ ಸ್ಥಿತಿಯಲ್ಲಿಲ್ಲ. ಈ ಕಲ್ಲುಗಳನ್ನು ಕೂಡ ಬೇಕಾಬಿಟ್ಟಿ ತುಂಬಿಕೊಂಡಂತೆ ಕಾಣಿಸುವುದರಿಂದ ಜನರಲ್ಲಿ ಆತಂಕ ಹುಟ್ಟಿಕೊಂಡಿದೆ.
ಇತ್ತೀಚೆಗೆ ಚರ್ಚ್ ರಸ್ತೆಯಲ್ಲಿನ ಶಾಲೆ ಸಮೀಪ ಲಾರಿಯಿಂದ ಕಲ್ಲುಗಳು ಉರುಳಿಬಿದ್ದಿರುವುದು ನಾಗರಿಕರಲ್ಲಿ ಹೆಚ್ಚಿನ ಆತಂಕಕ್ಕೆ ಕಾರಣ ವಾಗಿದೆ. ಈ ಕಲ್ಲುಗಳನ್ನು ಸಾಗಿಸುವ ಲಾರಿಗಳು ನಿಯಮ ಮೀರಿ ಭಾರವನ್ನು ತುಂಬಿಕೊಂಡು ಸಂಚ ರಿಸುತ್ತವೆಯೆ,ಈ ಲಾರಿಗಳು ಬಳಕೆಗೆ ಯೋಗ್ಯವಾಗಿವೆಯೆ ಎಂಬುದನ್ನು ಅಧಿಕಾರಿಗಳು ಆಗಾಗ್ಗೆ ಪರಿಶೀಲಿಸಬೇಕು ಅಪಾಯ ಸಂಭವಿಸಿದ ಮೇಲೆ ಎಚ್ಚೆತ್ತು ಕೊಳ್ಳುವುದ ಕ್ಕಿಂತ ಈಗಲೇ ಜಾಗರೂಕತೆ ವಹಿಸುವುದೊಳ್ಳೆ ಯದು. ಬ್ರೇಕ್ ವಾಟರ್ ಕಾಮಗಾರಿಯೂ ಆದಷ್ಟು ಬೇಗ ಪೂರ್ಣಗೊಳ್ಳಲಿ ಎನ್ನುವುದು ಜನಾಶಯ.
– ನರೇಂದ್ರ ಎಸ್. ಗಂಗೊಳ್ಳಿ, ಉಪನ್ಯಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್ಐ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ