ಚಾಲಕರು ಮಲಗಿದ್ದಾಗಲೇ ಲಾರಿ ಚಕ್ರ ಕಳವು!
Team Udayavani, Apr 16, 2018, 10:49 AM IST
ಗಂಗೊಳ್ಳಿ: ಲಾರಿ ನಿಲ್ಲಿಸಿ ಚಾಲಕರು ಅದರೊಳಗೆ ಮಲಗಿದ್ದಾಗಲೇ ಚಕ್ರಗಳನ್ನು ಕಳಚಿ ಕಳವು ಮಾಡಿದ ಘಟನೆ ತ್ರಾಸಿ ಬಳಿ ಶನಿವಾರ ರಾತ್ರಿ ನಡೆದಿದೆ.
ಸೈಜಾದ್, ರಘುವೀರ್ ಸಿಂಗ್ ರಾಜಾವತ್ ಹಾಗೂ ಅಲಿ ಹುಸೇನ್ ಅವರು ಎ.11ರಂದು ಮಧ್ಯಪ್ರದೇಶ ರಾಜ್ಯದ ಇಂದೋರ್ನ ಪಿತಮ್ಪುರದ ಪಿ.ಎಲ್. ಟ್ರಾನ್ಸ್ಪೊàರ್ಟ್ ಯಾರ್ಡ್ನಿಂದ ಮಂಗಳೂರು ಯಾರ್ಡ್ಗೆ ಈಚರ್ ಕಂಪೆನಿಯ ಲಾರಿಗಳನ್ನು ಚಲಾಯಿಸಿಕೊಂಡು ಬಂದಿದ್ದರು. ಎ. 14ರಂದು ರಾತ್ರಿ 9 ಗಂಟೆಗೆ ತ್ರಾಸಿ ಬೀಚ್ ಸಮೀಪ ರಾಷ್ಟ್ರೀಯ ಹೆದ್ದಾರಿ ಬಳಿ ಲಾರಿ ನಿಲ್ಲಿಸಿದ್ದು, ಅಲ್ಲಿಯೇ ಸಮೀಪದ ಹೊಟೇಲ್ನಲ್ಲಿ ಊಟ ಮಾಡಿ ರಾತ್ರಿ 10 ಗಂಟೆಗೆ ತಮ್ಮ ಲಾರಿಗಳಲ್ಲಿ ಮಲಗಿದ್ದರು. ಎ. 15ರಂದು ಬೆಳಗ್ಗೆ 6 ಗಂಟೆಗೆ ಎದ್ದು ನೋಡಿದಾಗ 1 ಲಾರಿಯ 6 ಚಕ್ರಗಳು ಹಾಗೂ ಇತರ ಎರಡು ಲಾರಿಗಳ ತಲಾ 2 ಚಕ್ರಗಳನ್ನು ಕದಿಯಲಾಗಿತ್ತು. ಕಳವಾದ ಚಕ್ರಗಳ ಮೌಲ್ಯ 2.40 ಲಕ್ಷ ರೂ. ಆಗಿದೆ.
ಲಾರಿ ಚಾಲಕ ಮಧ್ಯಪ್ರದೇಶದ ಇಂದೋರ್ನ ಸೈಜಾದ್ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ
MUST WATCH
ಹೊಸ ಸೇರ್ಪಡೆ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ