ಓಟಿಗೆ ಸ್ಪರ್ಧಿಸಲು ಮನೆ ಬಿಟ್ಟಿದ್ದೆ !


Team Udayavani, Apr 17, 2018, 6:00 AM IST

Bg-Mohandas.jpg

ಬೈಂದೂರು ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಪ್ರಥಮ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಘಟಾನುಘಟಿ ಮುತ್ಸದ್ದಿಗಳ ನಡುವೆ ರಾಜಕೀಯ ಅಖಾಡದಲ್ಲಿ ಹೋರಾಟ ನಡೆಸಿ ಪ್ರಥಮ ಬಾರಿಗೆ ಕಾಂಗ್ರೆಸ್‌ ಗೆಲುವಿಗೆ ಅಂಕುಶ ಹಾಕಿ ಕೇವಲ 23 ಮತಗಳಿಂದ ಜನತಾದಳ ವಿಜಯ ಸಾಧಿಸಲು ಕಾರಣರಾದವರು ಬಿ.ಜಿ. ಮೋಹನ್‌ದಾಸ್‌. ವೈದ್ಯಕೀಯ, ಔಷಧಾಲಯ ಶಾಸ್ತ್ರ ವಿಭಾಗದಲ್ಲಿ ಉನ್ನತ ಶಿಕ್ಷಣ ಪಡೆದಿರುವ ಇವರ ರಾಜಕೀಯ ಎಂಟ್ರಿ ಬಹಳ ರೋಚಕವಾಗಿದೆ.

ರಾಜಕೀಯ ಪ್ರವೇಶಿಸಲು ಕಾರಣ ?
     ನನ್ನ ತಂದೆ ವೃತ್ತಿಯಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿದ್ದವರು.ಅವರ ವರ್ಗಾವಣೆಯಾದಂತೆ ಬೇರೆ ಬೇರೆ ಕಡೆ ಶಾಲೆಗೆ ಹೋಗಬೇಕಾದ ಅನಿವಾರ್ಯತೆ. ಕಾಲೇಜು ದಿನಗಳಲ್ಲೇ ನಾಯಕತ್ವ ಮೈಗೂಡಿಸಿಕೊಂಡಿದ್ದ ನನಗೆ ಊರಿನ ಪರಿಸ್ಥಿತಿ ಬಗ್ಗೆ ಬೇಸರವಿದ್ದಿತ್ತು. ಸೌದಿ ಆರೇಬಿಯಾದಲ್ಲಿ ಒಂದೂವರೆ ವರ್ಷ ಉದ್ಯೋಗ ಮಾಡಿ ಭಾರತಕ್ಕೆ ವಾಪಸಾದೆ. ಅದೇ ಸಮಯದಲ್ಲಿ ಊರಿನಲ್ಲಿ ಚುನಾವಣೆ ಪ್ರಾರಂಭವಾಗಿತ್ತು. ಕೈಯಲ್ಲಿ ದುಡಿದ ಹಣವಿತ್ತು. ಊರಿನ ಅಭಿವೃದ್ಧಿ ಮಾಡಲು ಅವಕಾಶ ಉಪಯೋಗಿಸಿಕೊಳ್ಳಬೇಕು ಎಂದು ಪಕ್ಷೇತರವಾಗಿ ರಾಜಕೀಯ ಪ್ರವೇಶಿಸಿದೆ.

ಕುಟುಂಬದವರ ರಾಜಕೀಯ ಹಿನ್ನೆಲೆ ಬಗ್ಗೆ
          ಕುಟುಂಬದಲ್ಲಿ ರಾಜಕೀಯ ಹಿನ್ನೆಲೆಯಿಲ್ಲ. ನನ್ನ ತಂದೆ ತುಂಬಾ ಕಟ್ಟುನಿಟ್ಟು. ಉತ್ತಮ ಕೃಷಿಕ. ರಾಜಕೀಯ ಅವರಿಗೆ ಇಷ್ಟ ಇರಲಿಲ್ಲ. ನಾನು ಚುನಾವಣೆಗೆ ಸ್ಪರ್ಧಿಸುವುದಾದರೆ ಮನೆ ಬಿಡಬೇಕು ಎಂದರು. ರಾಜಕೀಯಕ್ಕೋಸ್ಕರ ಮನೆಬಿಟ್ಟು ಅಜ್ಜಿ ಮನೆಯಲ್ಲಿ ವಾಸ ಮಾಡಿದೆ.

ನಿಮ್ಮ ರಾಜಕೀಯ ಪ್ರಚಾರ ಹೇಗಿತ್ತು?
      ಆ ಸಮಯದಲ್ಲಿ ಜನರಿಗೆ ಕಾಂಗ್ರೆಸ್‌ ಬಿಟ್ಟರೆ ಇನ್ನೊಂದು ಪಕ್ಷ ಗೊತ್ತಿರಲಿಲ್ಲ. ನಾನು ಪಕ್ಷೇತರನಾಗಿದ್ದೆ. ಆದರೂ ನನ್ನ ಉದಯ ಸೂರ್ಯ ಚಿಹ್ನೆ ಹೆಸರುವಾಸಿಯಾಯಿತು.

ಅಂದು ರಾಜಕೀಯ ಪೈಪೋಟಿ ಹೇಗಿತ್ತು?
      ಬೈಂದೂರಿನಲ್ಲಿ ಜಿ.ಎಸ್‌. ಆಚಾರ್‌, ಯಡ್ತರೆ ಮಂಜಯ್ಯ ಶೆಟ್ಟಿಯಂತಹ ನಾಯಕರ ಜತೆಗೆ ಅಪ್ಪಣ್ಣ ಹೆಗ್ಡೆ ಪ್ರತಿ ಸ್ಪರ್ಧಿ ಯಾಗಿದ್ದರು. ನಾನು ಬೈಂದೂರು ಜಂಕ್ಷನ್‌ ಬಳಿ ಪ್ರಚಾರದ ಚಪ್ಪರ ನಿರ್ಮಿಸುವಾಗ ವೀರಪ್ಪ ಮೊಲಿ ನನ್ನನ್ನು ನೋಡಿ ಆಸ್ಕರ್‌ ಫೆರ್ನಾಂಡಿಸ್‌ ಅವರಿಗೆ ನನ್ನ ಬಗ್ಗೆ ಹೇಳಿದ್ದರು. “ಯಾರೋ ಮಣಿಪಾಲದ ಹುಡುಗ. ಬೈಂದೂರಲ್ಲಿ ಪಕ್ಷೇ ತರನಾಗಿ ಸ್ಪರ್ಧಿಸಿದ್ದಾನೆ; ಅವನಿಗೆ ಸ್ವಲ್ಪ ಹೇಳಿ’ ಎಂದಿದ್ದರು.

ಫಲಿತಾಂಶದ  ಬಳಿಕ ಅನುಭವ ಹೇಗಿತ್ತು?
         ಆವತ್ತು ಬಿಸಿ ರಕ್ತದ ಯುವಕರ ಪಡೆ, ಸೌದಿ ಅರೇಬಿಯಾ ದಲ್ಲಿ ದುಡಿದ ಸ್ವಲ್ಪ ಹಣ ಇತ್ತು. ಚುನಾವಣೆಯಲ್ಲಿ ಜಯ ಗಳಿಸದಿದ್ದರೂ ಸಮರ್ಥ ಸ್ಪರ್ಧೆ ನೀಡಿರುವ ಸಮಾಧಾನ ಇದೆ. ನನ್ನ ಸ್ಪರ್ಧೆಯಿಂದಾಗಿ ಕಾಂಗ್ರೆಸ್‌ ಕೇವಲ 23 ಮತಗಳ ಅಂತರದಲ್ಲಿ ಸೋಲುವಂತಾಯಿತು. ಸ್ವಲ್ಪ ದಿನದಲ್ಲೇ ರಾಜಕೀಯಕ್ಕೆ ಗುಡ್‌ಬೈ ಹೇಳಿ ಮತ್ತೆ ವಿದೇಶಕ್ಕೆ ಹೋದೆ.ಈಗಿನ ರಾಜಕೀಯ ಅನ್ನೋದು ವ್ಯವಹಾರ ಆಗಿದೆ. ಅಂದು ನಾನು ಸ್ಪರ್ಧೆ ಮಾಡಿದ್ದು ಕ್ಷೇತ್ರದಲ್ಲಿ   ಮೂಲಸೌಲಭ್ಯಗಳನ್ನು ಕಲ್ಪಿಸಬೇಕು ಎಂಬ ಕಾರಣಕ್ಕೆ.

– ಅರುಣ ಶಿರೂರು

ಟಾಪ್ ನ್ಯೂಸ್

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Gangolli: ರಿಕ್ಷಾ-ಕಾರು ಢಿಕ್ಕಿ

8-shirva

Shirva: ವಾಕಿಂಗ್‌ ವೇಳೆ ಕುಸಿದು ಬಿದ್ದು ಸಾವು

5-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇವಸ್ಥಾನ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

2-

ಸಂಸದರ ವಿರುದ್ಧ ಸುದ್ದಿ ಹರಿಬಿಟ್ಟು,ಪೊಲೀಸ್ ಪ್ರಕರಣ ಎದುರಿಸಿದ್ದವರಿಂದ ಪಾಠ ಕಲಿಯಬೇಕಾಗಿಲ್ಲ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.