ಪಾರಂಪಳ್ಳಿಯಲ್ಲಿ ಮಾರಿ ಓಡಿಸುವಂತಿಲ್ಲ


Team Udayavani, Apr 20, 2018, 7:35 AM IST

Maripooja-19-4.jpg

ಕುಂದಾಪುರ: ತುಳುನಾಡಿನಲ್ಲಿ ಗೋಂದೋಲು (ಗೋಂದಲ) ಪೂಜೆ ನಡೆಯುತ್ತದೆ. ಅದರಲ್ಲಿ ಮಾರಿ ಓಡಿಸುವ ಆಚರಣೆಯೂ ಇದೆ. ಆದರೆ ಸಾಲಿಗ್ರಾಮ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಪಾರಂಪಳ್ಳಿ ಗ್ರಾಮದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಗೋಂದೋಲು ಪೂಜೆ ವಿಶಿಷ್ಟವಾದದ್ದು.

ಗೋಂದೋಲು ಪೂಜೆ
ಮರಾಠಿ ನಾಯ್ಕ ಜನಾಂಗದ ಸಂಸ್ಕೃತಿ ಪರಂಪರೆಯ ಮುಖ್ಯ ಧಾರ್ಮಿಕ ವಿಧಿ. ಶಕ್ತಿ ಸ್ವರೂಪಿಣಿ ದೇವಿಗೆ ಗೀತ ನೃತ್ಯಗಳ ಪೂಜೆಯೇ ಗೋಂದೋಲು. ತುಳುನಾಡಿನಲ್ಲಿ ಇದನ್ನು ವರ್ಷಾನುಗಟ್ಟಲೆಯಿಂದ ಆಚರಿಸಲಾಗುತ್ತಿದೆ. ಕಾಲಭೈರವನ ಪೂಜೆಗಾಗಿಯೂ ಈ ಆರಾಧನಾ ವಿಧಾನವನ್ನು ಅನುಸರಿಸಲಾಗುತ್ತದೆ. ಮಲೆನಾಡು ಮತ್ತು ಮಹಾರಾಷ್ಟ್ರ ಭಾಗದಲ್ಲಿ ಈ ಆಚರಣೆಯನ್ನು ಧಾರ್ಮಿಕ ಕೇಂದ್ರಗಳಲ್ಲಿ ನಡೆಸುವುದು ವಾಡಿಕೆ. ಆದರೆ ತುಳುನಾಡಿನಲ್ಲಿ ಮನೆಗಳಲ್ಲೇ ಶುಭ ಕಾರ್ಯದ ಹರಕೆ ರೂಪದಲ್ಲಿ ನಡೆಸುತ್ತಾರೆ. ಪೂಜಾ ವಿಧಾನಗಳನ್ನು ನಡೆಸಲು ಮರಾಠಿ ಜನಾಂಗದವರೇ ಆಗಬೇಕೆಂಬ ನಂಬಿಕೆ ಇದೆ.

ಹೀಗಿದೆ ಆಚರಣೆ
ಗುಂಪುಗೂಡಿದ ಭಕ್ತರು ಗೀತ ನೃತ್ಯಗಳ ಮೂಲಕ ಪಂಚ ದೀವಟಿಗೆ ಹಿಡಿದು ಭಜನೆಗಳನ್ನು ಜಪಿಸಿಕೊಂಡು ದೇವಿಯ ಸ್ಮರಣೆ ಮಾಡುತ್ತಾರೆ. ದೇವಿ ಪಾತ್ರಿಗೆ ದೇವಿಯ ಆವಾಹನೆಯಾಗಿ ಭಕ್ತರಿಗೆ ಪ್ರಸಾದ ವಿತರಿಸುವ ಮೂಲಕ ಪೂಜೆ ಕೊನೆಗೊಳುತ್ತದೆ. ಹರಕೆಯ ರೂಪದಲ್ಲಿ ಕುರಿ, ಕೋಳಿ ಒಪ್ಪಿಸುತ್ತಾರೆ.

ಪಾರಂಪಳ್ಳಿಯ ಗೋಂದೋಲು
ಬ್ರಹ್ಮಾವರದ ಪೇತ್ರಿವರೆಗೆ ತುಳುನಾಡಿನ ಗೋಂದೋಲು ನಡೆಯುತ್ತಿದೆ. ಆದರೆ ಅನಂತರ ಕುಂದಾಪುರ, ಬೈಂದೂರುವರೆಗೂ ಗೋಂದೋಲು ಪೂಜೆ ಇಲ್ಲ ಪಾರಂಪಳ್ಳಿಯಲ್ಲಿ ಮಾತ್ರ ನೂರಾರು ವರ್ಷಗಳಿಂದ ಹರಕೆ ರೂಪದಲ್ಲಿ ನಡೆಯುತ್ತಿದೆ ಎನ್ನುತ್ತಾರೆ ಗುಂಡು ಪೂಜಾರಿ ಮೇಸ್ತ್ರಿ. ಈ ಭಾಗದಲ್ಲಿ ಹೆಚ್ಚಾಗಿರುವ ದೇವಾಡಿಗ, ಮೊಗವೀರ, ಪೂಜಾರಿ ಹಾಗೂ ಇತರ ಸಮುದಾಯದವರು ಜತೆಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಈ ಗ್ರಾಮದ ಸುಮಾರು 600 ಮನೆಯವರು ಸಭೆ ಸೇರಿ ಮಾರ್ಚ್‌-ಎಪ್ರಿಲ್‌ನ ಮಂಗಳವಾರ/ ಶುಕ್ರವಾರದ ದಿನ ಪೂಜೆ ನಡೆಸುತ್ತೇವೆ ಎನ್ನುತ್ತಾರೆ ಅಧ್ಯಾಪಕ ಕೃಷ್ಣಪ್ಪ ಪೂಜಾರಿ. 

ನೀಲಾವರದವರು
ಈ ಪ್ರಾಂತ್ಯದಲ್ಲಿ ಗೋಂದೋಲು ಪೂಜೆ ನಡೆಸುವುದು ನೀಲಾವರದ ತಂಡದವರು ಮಾತ್ರ. ಊರವರು ಪೂಜೆ ನಡೆಸಿಕೊಡಬೇಕೆಂದು ನೀಲಾವರ ಮಟಪಾಡಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ತಂಡದ ಬಳಿ ವೀಳ್ಯ ಕೊಡುತ್ತಾರೆ. ಅಂತೆಯೇ ತಂಡದ ಎಂಟತ್ತು ಮಂದಿ ಬಂದು ಪೂಜೆ ನಡೆಸುತ್ತಾರೆ. ಕೊನೆಗೆ ದರ್ಶನ ಪಾತ್ರಿಯಿಂದ ದರ್ಶನ, ಭಕ್ತರ ಪ್ರಶ್ನೆಗಳಿಗೆ ಪರಿಹಾರ ದೊರೆಯುತ್ತದೆ. ದೊಂದಿ ಸೇವೆ, ಕುರಿ, ಕೋಳಿ ನೈವೇದ್ಯ ಮೂಲಕ ಪೂಜೆ ಮುಕ್ತಾಯವಾಗುತ್ತದೆ.

ಪಾರಂಪಳ್ಳಿಯಲ್ಲಿ ಯಾಕೆ ವಿಶೇಷ?
ಈ ಪ್ರಾಂತ್ಯದಲ್ಲಿ ಮಾರಿ ಓಡಿಸುವ ಆಚರಣೆ ಇಲ್ಲ. ಇದಕ್ಕೆ ಕಾರಣ ಸಾಲಿಗ್ರಾಮದಲ್ಲಿ ಶ್ರೀ ಗುರುನರಸಿಂಹ ಹಾಗೂ ಶ್ರೀ ಆಂಜನೇಯ ದೇವಾಲಯ ಮುಖಾಮುಖೀಯಾಗಿದೆ. ಆಂಜನೇಯ ಹಾಗೂ ಗುರುನರಸಿಂಹ ದೇವಾಲಯಗಳ ಮಧ್ಯೆ ಹಾದು ಹೋದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೂಡ ಮಾರಿ ಓಡಿಸುವಂತಿಲ್ಲ. ಆದ್ದರಿಂದ ಇಲ್ಲಿ ಗೋಂದೋಲು ಆಚರಣೆ ಮಾತ್ರ ಇದೆ. 

ನೂರಾರು ವರ್ಷಗಳಿಂದ ಇದೆ
ಪಾರಂಪಳ್ಳಿಯ ಚಿತ್ರಪಾಡಿಯಿಂದ ಕಾರ್ಕಡವರೆಗೆ ಮಾರಿ ಓಡಿಸಬಾರದು ಎಂಬ ನಿಯಮ ಇರುವ ಕಾರಣ ಎರಡು ವರ್ಷಕ್ಕೊಮ್ಮೆ ಆಚರಿಸುವ ಈ ಗೋಂದೋಲು ಪೂಜೆ ಭಕ್ತಿ ಭಾವದ ಆಚರಣೆಯಾಗಿದೆ. ಆರೋಗ್ಯ, ಮಳೆ, ಬೆಳೆ, ಸಮೃದ್ಧಿ, ನೆಮ್ಮದಿಗಾಗಿ ನಾವು ಸಾಮೂಹಿಕವಾಗಿ ಇಲ್ಲಿ ಪ್ರಾರ್ಥಿಸುತ್ತೇವೆ.
– ಶೇಖರ್‌ ಪೂಜಾರಿ, ಗಿಳಿಯಾರು ಶಾಲಾ ಶಿಕ್ಷಕರು

— ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.