ಗಂಗೊಳ್ಳಿ: ಮೀನುಗಾರರಿಗೆ ಗಾಯದ ಮೇಲೆ ಬರೆ


Team Udayavani, Apr 24, 2018, 9:33 AM IST

Fish-23-4.jpg

ಗಂಗೊಳ್ಳಿ: ವಾತಾವರಣದ ಉಷ್ಣಾಂಶದಲ್ಲಿನ ಭಾರೀ ಏರಿಕೆಯಿಂದಾಗಿ ಈ ಮೀನುಗಾರಿಕೆ ಋತುವಿನಲ್ಲಿ ಆರು ತಿಂಗಳು ಮೀನುಗಾರಿಕೆ ನಿಷೇಧಕ್ಕೆ ಒಳಗಾದಂತಾಗಿದೆ. ಮೀನುಗಳ ಕೊರತೆ ಉದ್ಭವಿಸಿದ ಹಿನ್ನೆಲೆಯಲ್ಲಿ ಗಂಗೊಳ್ಳಿ ಸಹಿತ ಹಲವೆಡೆ ಮಾರ್ಚ್‌ ಮೊದಲ ವಾರದಿಂದಲೇ ಮೀನುಗಾರಿಕೆ ಸ್ಥಗಿತಗೊಂಡಿದೆ. ವರ್ಷದಲ್ಲಿ ಮಳೆಗಾಲದಲ್ಲಿ ಮಾತ್ರ (ಮೂರು ತಿಂಗಳು) ಮೀನುಗಾರಿಕೆ ನಿಷೇಧವಿರುತ್ತಿತ್ತು. ಅದೀಗ ಉಷ್ಣಾಂಶ ಏರಿಕೆಯಿಂದ ಆರು ತಿಂಗಳಿಗೆ ಏರಿದಂತಾಗಿದೆ. ಈ ಹಿಂದೆ ಜೂನ್‌ ಅಂತ್ಯಕ್ಕೆ ಸ್ಥಗಿತಗೊಳಿಸಲಾಗುತ್ತಿತ್ತು. ಸಣ್ಣ ಬೋಟುಗಳು, ದೋಣಿಗಳು ಆಗೊಮ್ಮೆ – ಈಗೊಮ್ಮೆ ತೆರಳುತ್ತಿದ್ದರೂ, ಮೀನುಗಳು ಸಿಗದೇ ಬರಿಗೈಯಲ್ಲಿ ವಾಪಸಾಗುತ್ತಿವೆ. ಮತ್ಸ್ಯಕ್ಷಾಮ, ಒಖೀ ಚಂಡಮಾರುತದಿಂದ ತತ್ತರಿಸಿದ್ದ ಕರಾವಳಿಯ ಮೀನುಗಾರರಿಗೆ ಈಗ ಮತ್ತೂಂದು ಹೊಡೆತ ಬಿದ್ದಂತಾಗಿದೆ.

ವಾತಾವರಣದಲ್ಲಿ ಸುಮಾರು 26ರಿಂದ 27 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿದ್ದರೆ ಮಾತ್ರ ಮೀನುಗಳು ಸಮುದ್ರದ ಮೇಲ್ಭಾಗಕ್ಕೆ ಬರುತ್ತವೆ. ಆದರೆ ಮಾರ್ಚ್‌ನಲ್ಲಿಯೇ ಸಮುದ್ರದ ಮೇಲ್ಭಾಗದ ಉಷ್ಣಾಂಶ ಸುಮಾರು 30 ಡಿಗ್ರಿ ಸೆಲ್ಸಿಯಸ್‌ಗೆ ಏರಿತ್ತು, ಇಂಥ ಸಂದರ್ಭದಲ್ಲಿ ಸಮುದ್ರದ ಆಳ ಹಾಗೂ ಮಧ್ಯ ಭಾಗದಲ್ಲೇ ಮೀನುಗಳು ಉಳಿಯುತ್ತವೆ. ಹೀಗಾಗಿ ಮೀನುಗಾರಿಕೆಗೆ ತೆರಳಿದವರಿಗೆ ಮೀನುಗಳು ಸಿಗುತ್ತಿಲ್ಲ. ಉಡುಪಿ ಜಿಲ್ಲೆಯ 2ನೇ ಅತೀ ದೊಡ್ಡ ಮೀನುಗಾರಿಕಾ ನೆಲೆ ಗಂಗೊಳ್ಳಿಯಲ್ಲಿ ಫೆ. 28ರವರೆಗೆ ಮೀನುಗಾರರು ಮೀನುಗಾರಿಕೆ ನಡೆಸಿದ್ದರು. ಬಳಿಕ ಬೋಟುಗಳನ್ನು ಗಂಗೊಳ್ಳಿ ಬಂದರು, ಮ್ಯಾಂಗನೀಸ್‌ ವಾರ್ಫ್‌ನಲ್ಲಿ ಲಂಗರು ಹಾಕಲಾಗಿದೆ.

ಶುಭ ತರಲಿಲ್ಲ ಈ ಋತು: ಈ ಮೀನುಗಾರಿಕಾ ಋತು ಲಾಭಕ್ಕಿಂತ ನಷ್ಟವನ್ನೇ ಉಂಟು ಮಾಡಿದೆ ಎನ್ನುತ್ತಾರೆ ಮೀನುಗಾರರು. ಮುಂಗಾರು ಮುಗಿದು ಮೀನುಗಾರಿಕಾ ನಿಷೇಧ ಅವಧಿ ಮುಗಿದು ಮೀನುಗಾರಿಕೆ ಆರಂಭಗೊಂಡ ಮೊದಲ 3 ತಿಂಗಳು ಹೆಚ್ಚಿನ ಪ್ರಮಾಣದಲ್ಲಿ ಮೀನುಗಳು ಸಿಗದೇ ನಷ್ಟ ಅನುಭವಿಸಿದ್ದೆವು. ಆ ಬಳಿಕ ಒಖೀ ಚಂಡಮಾರುತದಿಂದ ಕೆಲವು ಕಾಲ ಮೀನುಗಾರಿಕೆ ಸ್ಥಗಿತಗೊಂಡಿತ್ತು. ಅದಲ್ಲದೆ ಪರ್ಸಿನ್‌ ಬೋಟುಗಳಿಗೆ ಸಬ್ಸಿಡಿ ಡೀಸೆಲ್‌ ಹಾಗೂ ನಾಡದೋಣಿಗಳಿಗೆ ಸಬ್ಸಿಡಿ ಸೀಮೆಎಣ್ಣೆ ಅನೇಕ ತಿಂಗಳಿಂದ ಸಿಗದೇ ಸಮಸ್ಯೆಯಾಗಿದೆ.


ತೇವಾಂಶ ವಾಪಸು ಹೋಗುತ್ತಿಲ್ಲ

ವಾತಾವರಣದಲ್ಲಿ ಉಷ್ಣಾಂಶ ವಿಪರೀತ ಏರಿಕೆಯಾಗಿ ಸಮುದ್ರದ ನೀರು ಆವಿಯಾಗಿ ಮೋಡಗಳಾಗುತ್ತವೆ. ಇದರಿಂದ ಭೂಮಿಗೆ ಬಿದ್ದ ಬಿಸಿಲಿನಿಂದ ಉಂಟಾಗುವ ತೇವಾಂಶವು ಮತ್ತೆ ಆಕಾಶಕ್ಕೆ ಹೋಗುವುದಿಲ್ಲ. ವಾತಾವರಣದ ಉಷ್ಣತೆ ಇಳಿಕೆಯಾಗುವುದಿಲ್ಲ. ಕರಾವಳಿ ಭಾಗದಲ್ಲಿ ಉಷ್ಣಾಂಶ ಹೆಚ್ಚಲು ಇದು ಪ್ರಮುಖ ಕಾರಣ. ಆದರೆ ಇದಕ್ಕೂ ಜಾಗತಿಕ ತಾಪಮಾನ ಏರಿಕೆಗೂ ಸಂಬಂಧ ಕಲ್ಪಿಸಲು ಸಾಧ್ಯವಿಲ್ಲ. ಈ ಪ್ರಕ್ರಿಯೆ ಕರಾವಳಿ ಭಾಗದಲ್ಲಿ ಮಾತ್ರ ನಡೆಯುತ್ತಿರುವುದರಿಂದ ಇಲ್ಲಿ ಮಾತ್ರ ಹೆಚ್ಚಿನ ಉಷ್ಣಾಂಶ ದಾಖಲಾಗುತ್ತಿದೆ. 
– ಡಾ| ಬಾಲಕೃಷ್ಣ , ಭೂವಿಜ್ಞಾನ ಪ್ರಾಧ್ಯಾಪಕರು, MIT ಮಣಿಪಾಲ

ಮೀನಿನ ದರವೂ ಏರಿಕೆ
ಮೀನಿನ ಬೇಡಿಕೆಯೂ ಹೆಚ್ಚಿಗೆ ಇದ್ದುದರಿಂದ ಎಲ್ಲ ಮೀನುಗಳ ದರ ಏರಿಕೆಯಾಗಿದೆ. ಇದರಿಂದ ಜನ ಮೀನು ಕೊಂಡುಕೊಳ್ಳುತ್ತಿಲ್ಲ. ಸೀಸನ್‌ನಲ್ಲಿ ಕೆಜಿಗೆ 70 ರೂ. ಇದ್ದ ಬಂಗುಡೆಗೆ ಈಗ 110 ರಿಂದ 130 ರೂ. ವರೆಗೂ ಬೇಡಿಕೆಯಿದೆ. ಬೈಗೆ (ಭೂತಾಯಿ) 40 ಕೆಜಿಯ 1 ಬುಟ್ಟಿಗೆ 1,800 ರೂ. ಇದೆ. ಅದೇ ಸೀಸನ್‌ನಲ್ಲಾದರೆ 1 ಸಾವಿರ ರೂ. ಇರುತ್ತಿತ್ತು. ಅಂಜಲ್‌ ಕೆಜಿಗೆ ಈಗ 600 ರೂ. ಇದ್ದರೆ, ಸೀಸನ್‌ನಲ್ಲಿ 400 ರೂ. ಗೆ ಸಿಗುತ್ತಿತ್ತು.
– ರಾಮಪ್ಪ ಗಂಗೊಳ್ಳಿ, ಮೀನು ವ್ಯಾಪಾರಿ

ಅರ್ಧದಷ್ಟು ವಹಿವಾಟು ಇಲ್ಲ
ಗಂಗೊಳ್ಳಿ ಬಂದರಿನಲ್ಲಿ ಹಿಂದೆ ಎಲ್ಲ ಸುಮಾರು 40 ರಿಂದ 50 ಟನ್‌ವರೆಗೂ ಮೀನುಗಳು ಸಿಗುತ್ತಿದ್ದರೆ, ಈಗ ಕೇವಲ 20 ರಿಂದ 30 ಟನ್‌ನಷ್ಟು ಸಿಗು ತ್ತಿವೆ. ಪರ್ಸಿನ್‌ ಬೋಟುಗಳು 40 ರಿಂದ 50 ಇದ್ದರೆ, ಟ್ರಾಲ್‌ ಬೋಟುಗಳು 100 ರಿಂದ 150 ರವರೆಗೆ ಇರಬಹುದು. 40 ರಿಂದ 50 ನಾಡದೋಣಿಗಳಿವೆ. ಈ ಬಾರಿ 1 ಕೋ.ರೂ. ಆದಾಯ ಬರುವವರಿಗೆ ಕೇವಲ 50 ಲಕ್ಷ ರೂ. ಮಾತ್ರ ಸಿಕ್ಕಿದೆ.  
– ರಮೇಶ್‌ ಕುಂದರ್‌, ಅಧ್ಯಕ್ಷರು, ಪರ್ಸಿನ್‌ ಮೀನುಗಾರರ ಸ್ವಸಹಾಯ ಸಂಘ

ಎಲ್ಲೆಡೆ ಮತ್ಸ್ಯಕ್ಷಾಮ ಇದೆ
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಸಿಕ್ಕಿರುವ ಮೀನುಗಳ ಪ್ರಮಾಣ ಕಡಿಮೆಯಿದೆ. ಗಂಗೊಳ್ಳಿ ಮಾತ್ರವಲ್ಲ, ಎಲ್ಲೆಡೆ ಸಮಸ್ಯೆಯಿದೆ. ಬೇಕಾದಷ್ಟು ಪ್ರಮಾಣದಲ್ಲಿ ಮೀನುಗಳು ಸಿಗುತ್ತಿಲ್ಲ. ಇದರಿಂದ ಮೀನುಗಾರರು ತೊಂದರೆ ಅನುಭವಿಸುತ್ತಿರುವುದರ ಅರಿವಿದೆ. ಆದರೆ ಸಂಪೂರ್ಣ ಮೀನುಗಾರಿಕೆ ಸ್ಥಗಿತಗೊಂಡಿಲ್ಲ. ಇನ್ನು ಒಂದು ತಿಂಗಳ ಅವಧಿಯಿದೆ. 
– ಅಂಜನಾದೇವಿ, ಮೀನುಗಾರಿಕಾ ಸಹಾಯಕ ನಿರ್ದೇಶಕಿ, ಗಂಗೊಳ್ಳಿ ಬಂದರು 

— ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.