ಕುಂದೇಶ್ವರದಲ್ಲಿ ಚರಂಡಿ ನೀರು ಒಳಬರುವ ಆತಂಕ!


Team Udayavani, Jun 20, 2018, 2:30 AM IST

hospital-ward-19-6.jpg

ಕುಂದಾಪುರ: ನಗರದ ಮುಖ್ಯರಸ್ತೆಯ ಬದಿ ಸರಕಾರಿ ಸಮುದಾಯ ಆರೋಗ್ಯ ಕೇಂದ್ರವಿದ್ದು, ಅದೇ ಹೆಸರು ವಾರ್ಡ್‌ಗೆ ಇದೆ. ಆದರೆ ಮಳೆಗಾಲದ ಸಿದ್ಧತೆಗಳು ಇಲ್ಲಿ ನಡೆದಿಲ್ಲ.

ವಾರ್ಡ್‌ ವ್ಯಾಪ್ತಿ 
ಫಿಶ್‌ ಮಾರ್ಕೆಟ್‌ ರಸ್ತೆ, ಕನ್ವರ್‌ ಸಿಂಗ್‌ ರಸ್ತೆ ಹಾಗೂ ಕುಂದೇಶ್ವರ ದ್ವಾರದ ಎದುರಿನ ರಸ್ತೆಯ ಒಳಾವರಣದ ಮನೆಗಳು, ಅಂಗಡಿಗಳು, ಆಸ್ಪತ್ರೆಗಳು ಸರಕಾರಿ ಆಸ್ಪತ್ರೆ ವಾರ್ಡ್‌ ವ್ಯಾಪ್ತಿಗೆ ಬರುತ್ತವೆ.

ಮರದ ಗೆಲ್ಲು ಕಡಿದಿಲ್ಲ
ಸರಿ ಸುಮಾರು 350ರಷ್ಟು ಮನೆಗಳು, 990ರಷ್ಟು ಮತದಾರರು ಇರುವ ಈ ವಾರ್ಡ್‌ನಲ್ಲಿ ರಸ್ತೆಗಳಿಗೆ ಕಾಂಕ್ರೀಟ್‌ ಕಾಮಗಾರಿಯಾಗಿದೆ. ಕೆಲವೆಡೆ ಇಂಟರ್‌ ಲಾಕ್‌ ಹಾಕಲಾಗಿದೆ. ಕೆಲವೆಡೆ ಒಳಚರಂಡಿ ವ್ಯವಸ್ಥೆ ಆಗಿಲ್ಲ. ಫಿಶ್‌ ಮಾರ್ಕೆಟ್‌ ರಸ್ತೆ ಮೂಲಕ ಸಾಗಿದಾಗ ನಾಗಬಬ್ಬರ್ಯ ದೇವಸ್ಥಾನಕ್ಕಿಂತ ಸ್ವಲ್ಪ ಮೊದಲು ದೊಡ್ಡ ಮರವಿದ್ದು, ಇದರ ಬಗ್ಗೆ ಜನರಿಗೆ ಆತಂಕವಿದೆ. ಪಕ್ಕದಲ್ಲೇ ಎಚ್‌ಟಿ ಲೈನ್‌ ಹಾದುಹೋಗುತ್ತಿದ್ದು, ಇದರಿಂದ ಮರದ ಗೆಲ್ಲಾದರೂ ಕಡಿಯಲಿ ಎಂಬುದು ನಿವಾಸಿಗಳ ಆಗ್ರಹವಾಗಿದೆ.

ಚರಂಡಿ ನೀರು ಮನೆಗೆ
ಕುಂದೇಶ್ವರ ದ್ವಾರದ ಎದುರು  ಮುಖ್ಯರಸ್ತೆಯ ಸರ್ವಿಸ್‌ ರಸ್ತೆಗೆ ಸಮೀಪ ಇರುವ ಮನೆಗಳಿಗೆ ಚರಂಡಿ ನೀರಿನ ಆತಂಕ  ಇದೆ. ಇಲ್ಲಿ ಸರ್ವಿಸ್‌ ರಸ್ತೆಯ ಕಾಮಗಾರಿ ಇನ್ನೂ ಪರಿಪೂರ್ಣವಾಗದ ಕಾರಣ ಈ ಭಾಗದಲ್ಲಿ ಚರಂಡಿ ಮಾಡಿದರೂ ಅದರ ನೀರು ಎಲ್ಲಿಗೆ ಬಿಡುವುದು ಎಂಬ ತಾಂತ್ರಿಕ ಸಮಸ್ಯೆಯಿದೆ. ಈ ಭಾಗದ ನಿವಾಸಿಗಳಿಗೆ ರಾ.ಹೆ. ಕಾಮಗಾರಿಯಿಂದ ಸಮಸ್ಯೆಯಾಗಿದ್ದು ಮಳೆಗಾಲವನ್ನು ಆತಂಕದಿಂದಲೇ ದೂಡಬೇಕಾಗಿದೆ. ಇಲ್ಲಿನ ವಾರ್ಡ್‌ ಸದಸ್ಯ ಸತೀಶ್‌ ಶೆಟ್ಟಿ ಅವರು ಈ ಬಾರಿ ಅನುದಾನ ಕಡಿಮೆ ಇದ್ದ ಕಾರಣ ಜನರ ಎಲ್ಲ ಬೇಡಿಕೆ ಈಡೇರಿಸಲು ಸಾಧ್ಯವಾಗಿಲ್ಲ ಎನ್ನುತ್ತಾರೆ. ಈ ಹಿಂದೆ ಒಳಚರಂಡಿ ಯೋಜನೆಗೆ ಅನುದಾನ ಬಂದಾಗ ವಾರ್ಡ್‌ನ ಎಲ್ಲ ಕಡೆ ಒಳಚರಂಡಿ ಕಾಮಗಾರಿ ನಡೆಸಲಾಗಿದೆ.

ಮನೆಯೊಳಗೆ ನೀರು
ಚರಂಡಿಯಲ್ಲಿ ನೀರು ಸರಾಗವಾಗಿ ಹೋಗುವುದಿಲ್ಲ. ಮಳೆ ಬಂದರೆ ನೀರೆಲ್ಲ ಅಂಗಳದಲ್ಲಿ ಇರುತ್ತದೆ. ಮನೆಗೂ ಬರುತ್ತದೆ. 
– ಸಂಜೀವಿನಿ, ಮಕ್ಕಿಮನೆ

ಚರಂಡಿ ಹೂಳೆತ್ತಿಲ್ಲ
ಮನೆಗಳ ಪಕ್ಕ ಇರುವ ದೊಡ್ಡ ಗಾತ್ರದ ಮರದ ಕುರಿತು ಸದಾ ಆತಂಕ ಇದೆ. ಇದಕ್ಕೊಂದು ಪರಿಹಾರ ಬೇಕಿತ್ತು. ಚರಂಡಿ ಹೂಳೆತ್ತುವ ಕಾರ್ಯ ಸರಿಯಾಗಿ ನಡೆದಿಲ್ಲ. ಆಳವಾಗಿ ಹೂಳೆತ್ತದಿದ್ದರೆ ನೀರೆಲ್ಲ ರಸ್ತೆಯಲ್ಲಿರುತ್ತದೆ. 
– ನರಸಿಂಹ, ಮಾಣಿಮನೆ 

ಚರಂಡಿಗೆ ಜಾಗ ಇಲ್ಲ
ಕನ್ವರ್‌ಸಿಂಗ್‌ ರಸ್ತೆಯಲ್ಲಿ ಚರಂಡಿಯೇ ಇಲ್ಲ. ಚರಂಡಿ ಮಾಡಲು ಜಾಗವೂ ಇಲ್ಲ. ಸದಸ್ಯರಿಂದ ಉತ್ತಮ ಸ್ಪಂದನೆ ಇದೆ. ಆದರೆ ಕೆಲವು ಸಮಸ್ಯೆಗೆ ಪರಿಹಾರವೇ ಇಲ್ಲ.
– ನಾಗೇಶ್‌ ಕೆ., ಕನ್ವರ್‌ಸಿಂಗ್‌ ರಸ್ತೆ 

ಸಮಸ್ಯೆ ಇಲ್ಲ
ಅಂತಹ ದೊಡ್ಡ ಸಮಸ್ಯೆ ಇಲ್ಲ. ವಾರ್ಡ್‌ ಸದಸ್ಯರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ತತ್‌ಕ್ಷಣ ಸ್ಪಂದಿಸುತ್ತಾರೆ.
– ನರಸಿಂಹ ಶೇರೆಗಾರ್‌, ನಿವೃತ್ತ PWD ಅಧಿಕಾರಿ

ಸಾಧ್ಯವಾದಷ್ಟು ಮಾಡಿದ್ದೇನೆ
ನನ್ನಿಂದ ಸಾಧ್ಯವಾದಷ್ಟು ಮಾಡಿದ್ದೇನೆ. ಈ ಬಾರಿ ಅನುದಾನ ಕಡಿಮೆ ಇದ್ದ ಕಾರಣ ಹೆಚ್ಚಿನ ಪ್ರಗತಿ ಸಾಧ್ಯವಾಗಿಲ್ಲ. ಹಾಗಿದ್ದರೂ ಜನರ ಶೇ.80ರಷ್ಟು ಬೇಡಿಕೆ ಈಡೇರಿಸಿದ ಸಮಾಧಾನ ಇದೆ. 
– ಸತೀಶ್‌ ಶೆಟ್ಟಿ, ಸದಸ್ಯರು, ಪುರಸಭೆ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.