20 ವರ್ಷದಿಂದ ಡಾಮರೇ ಕಂಡಿಲ್ಲ ಈ ರಸ್ತೆ!
Team Udayavani, Jun 21, 2018, 6:00 AM IST
ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ವಂಡ್ಸೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ನಾಡಾ ಗುಡ್ಡೆಯಂಗಡಿಯಿಂದ ಬಡಾಕೆರೆಗೆ ಸಂಚರಿಸುವ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಈ ಭಾಗದ ಜನರು ಸಂಚಾರ ದುಸ್ತರದಿಂದಾಗಿ ಹೈರಾಣಾಗಿದ್ದಾರೆ.
ಸುಮಾರು 4 ಕಿ.ಮೀ. ಉದ್ದದ ರಸ್ತೆಗೆ ಹಾಕಲಾದ ಡಾಂಬರು ಕಿತ್ತು ಹೋಗಿ ಅಲ್ಲಲ್ಲಿ ಬೃಹತ್ ಹೊಂಡ- ಗುಂಡಿಗಳು ಸೃಷ್ಟಿಯಾಗಿವೆ. ಮಳೆಗಾದಲ್ಲಿ ನೀರು ನಿಂತು ವಾಹನ ಸವಾರರು, ಪಾದಚಾರಿಗಳೂ ಸಂಚರಿಸುವುದು ಕಷ್ಟಕರವಾಗಿದೆ.
20 ವರ್ಷದಿಂದ ಡಾಮರೇ ಹಾಕಿಲ್ಲ
ನಾಡಾಗುಡ್ಡೆಯಂಗಡಿ ಪೇಟೆಯ ಪ್ರಾರಂಭದಲ್ಲಿ ಸ್ವಲ್ಪ ದೂರದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದ್ದು, ಅದು ಬಿಟ್ಟರೆ ಈ ಬಡಾಕೆರೆ- ನಾಡಾ ರಸ್ತೆಗೆ ಕಳೆದ 20 ವರ್ಷದಿಂದ ಡಾಂಬರೇ ಹಾಕಿಲ್ಲ. ಆಳುವ ವರ್ಗದಿಂದ ಈ ರಸ್ತೆ ಸಂಪೂರ್ಣ ನಿರ್ಲಕ್ಷಿಸಲ್ಪಟ್ಟಿದೆ ಎನ್ನುವುದು ಸ್ಥಳೀಯರ ಆರೋಪ.
ಈ ರಸ್ತೆ ಸಂಪೂರ್ಣ ಹದಗೆಡಲು ಕಾರಣ ಈ ರಸ್ತೆಯ ಎರಡೂ ಬದಿಗಳಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿಯ ವ್ಯವಸ್ಥೆಯೇ ಇಲ್ಲ. ಈಗ ನೀರೆಲ್ಲ ಈ ರಸ್ತೆಯಲ್ಲಿಯೇ ಹರಿದು ಹೋಗುತ್ತಿರುವುದರಿಂದ ರಸ್ತೆಯೇ ಇಲ್ಲವಾಗಿದೆ.
ಘನ ವಾಹನಗಳಿಂದ ಹಾನಿ
ನಾಡಾದಿಂದ ಬಡಾಕೆರೆ ಮಾರ್ಗವಾಗಿ ಹೆದ್ದಾರಿಗೆ ಕಲ್ಲು, ಜಲ್ಲಿ, ಮರಳು ತುಂಬಿದ ಘನ ಲಾರಿಗಳು, ಟಿಪ್ಪರ್ಗಳು ಹೆಚ್ಚಾಗಿ ಸಂಚರಿಸುತ್ತಿದ್ದು, ಇದರಿಂದ ಈ ರಸ್ತೆ ಮತ್ತಷ್ಟು ಹದಗೆಟ್ಟು ಹೋಗಿದೆ. ಅದರಲ್ಲೂ ರಾತ್ರಿ ವೇಳೆಯೇ ಹೆಚ್ಚಾಗಿ ಈ ರಸ್ತೆಯ ಮೂಲಕ ಘನ ವಾಹನಗಳು ಸಂಚರಿಸುತ್ತಿದ್ದು, ಇದಕ್ಕೆ ಸಂಬಂಧಪಟ್ಟವರು ಕಡಿವಾಣ ಹಾಕಬೇಕಿದೆ ಎನ್ನುವುದಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.
ರಸ್ತೆ ದುರಸ್ತಿ ಮಾಡಿ
ಈ ಹೊಂಡ- ಗುಂಡಿಗಳ ರಸ್ತೆ ಯಿಂದಾಗಿ ದಿನಾಲೂ ಸಾಕಷ್ಟು ಮಂದಿ ತೊಂದರೆ ಅನುಭವಿಸುತ್ತಿದ್ದಾರೆ. ಅನೇಕ ಬಾರಿ ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಸ್ಪಂದಿಸಿಲ್ಲ. ಇನ್ನಾದರೂ ಈ ಬಗ್ಗೆ ಎಚ್ಚೆತ್ತುಕೊಂಡು ಈ ರಸ್ತೆಯನ್ನು ದುರಸ್ತಿಪಡಿಸಲು ಪ್ರಯತ್ನಿಸಲಿ.
– ಸುಚಿತಾ ಎಂ. ಕಾಮತ್,
ನಾಡಾ ನಿವಾಸಿ
ಅನುದಾನ ಬೇಕಿದೆ
ಕಳೆದ ವರ್ಷ ಜಿ.ಪಂ.ನಿಂದ ಬಿಡುಗಡೆಯಾದ 3.50 ಲಕ್ಷ ರೂ. ಅನುದಾನದಲ್ಲಿ ಈ ರಸ್ತೆ ಸುಮಾರು 2 ಲಕ್ಷ ರೂ. ಬಳಕೆ ಮಾಡಲಾಗಿದೆ. ಇದು ದೊಡ್ಡ ರಸ್ತೆಯಾಗಿರುವುದರಿಂದ ಜಿ.ಪಂ. ಅನುದಾನದಲ್ಲಿ ಡಾಂಬರೀಕರಣ ಮಾಡಲು ಆಗಲ್ಲ. ಕೇವಲ ಪ್ಯಾಚ್ವರ್ಕ್ ಅಷ್ಟೇ ಮಾಡಬಹುದು. ಇದಕ್ಕೆ ರಾಜ್ಯ ಸರಕಾರದ ಅನುದಾನದ ಅಗತ್ಯವಿದೆ.
– ಬಾಬು ಶೆಟ್ಟಿ ತಗ್ಗರ್ಸೆ,
ಸ್ಥಳೀಯ ಜಿ.ಪಂ. ಸದಸ್ಯರು
– ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ