ಒಳಚರಂಡಿ ಕಾಮಗಾರಿಗಳಿಂದ ರಸ್ತೆ ಹಾಳು


Team Udayavani, Jun 23, 2018, 6:00 AM IST

2206kdlm11ph1.jpg

ಕುಂದಾಪುರ: ವಾರ್ಡ್‌ಗಳ ಪೈಕಿ ಅತಿ ಹೆಚ್ಚು, ಅತಿ ದೊಡ್ಡ ತೋಡುಗಳಿರುವ ವಾರ್ಡು ಬಹುಶಃ ಚಿಕ್ಕನ್‌ಸಾಲ್‌ ಎಡಬದಿ ವಾರ್ಡ್‌ ಇರಬಹುದು ಎನಿಸುತ್ತಿದೆ. ಈ ವಾರ್ಡಿಗೆ ಭೇಟಿ ಕೊಟ್ಟಾಗ ಕಾಣಿಸುತ್ತಿದ್ದುದು ಹರಿಯುತ್ತಿದ್ದ ತೋಡುಗಳೇ. ಸದಸ್ಯರ ಮಾತು, ಈ ಭಾಗದ ಜನರ ಮಾತು ಕೂಡಾ ಇದಕ್ಕೆ ಪೂರಕವಾಗಿತ್ತು. ಸುಮಾರು 800 ಮತದಾರರು, 240ರಷ್ಟು  ಮನೆಗಳಿರುವ ವಾರ್ಡು ಇದು.

ಮಳೆಗಾಲದ ಸಿದ್ಧತೆ ಆಗಿದೆ
ಮಳೆಗಾಲಕ್ಕೆ  ಮುನ್ನ ಚರಂಡಿಗಳ ದುರಸ್ತಿಯಾಗಿದೆ. ಹೂಳೆತ್ತಲಾಗಿದೆ. ಆದರೆ ಅನೇಕ ಕಡೆ ಚರಂಡಿಯೇ ಇಲ್ಲದಿರುವುದು ಸಮಸ್ಯೆಯಾಗಿದೆ. ಈ ಭಾಗದ ಜನರ ಪ್ರಮುಖ ಬೇಡಿಕೆಯಾಗಿರುವುದು ದೊಡ್ಡ ತೋಡಿಗೆ ಸ್ಲಾಬ್‌ ಹಾಕಿ ರಸ್ತೆಯನ್ನಾಗಿ ಮಾಡಿಕೊಡಿ ಎನ್ನುವುದು. ಆದರೆ ಅದಕ್ಕೆ ಅನುದಾನದ ಕೊರತೆ ಇರುವ ಕಾರಣ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ಗದ್ದೆಬೈಲಿನ ಬದಿ ತೋಡುಗಳ ಕಾಮಗಾರಿಗೆ ಅಂದಿನಿಂದ ಇಂದಿನವರೆಗೂ ಜನರ ಬೇಡಿಕೆ ಇರುವುದು ಪೂರೈಕೆಯಾಗಲೇ ಇಲ್ಲ.

ಒಳಚರಂಡಿ ಅವಸ್ಥೆ
ಕಾಂಕ್ರಿಟ್‌ ರಸ್ತೆ ಆದ ಬಳಿಕ ಒಳಚರಂಡಿ ಕಾಮಗಾರಿ ಮಾಡಿದ ಕಾರಣ ರಸ್ತೆಯ ಅಂದವೆಲ್ಲ ಹಾಳಾಗಿದೆ. ಅಲ್ಲಲ್ಲಿ ಬಿರುಕು ಬಿಟ್ಟಂತೆ ಕಾಣುವ ತೇಪೆ ಕಾರ್ಯಗಳು ವಾಹನಗಳ ಸುಗಮ ಓಡಾಟಕ್ಕೆ ತಡೆಯೊಡ್ಡಿವೆ. ಕೆಲವೆಡೆ ಕಂದಕದಂತೆ ರಸ್ತೆ ಬಾಯಿಬಿಟ್ಟು ನಿಂತಿದೆ.

ಪರ್ಯಾಯ ರಸ್ತೆ
ಚಿಕ್ಕಮ್ಮನ ಸಾಲ್‌ ರಸ್ತೆಗೆ ಪರ್ಯಾಯ ವಾಗಿ ರಸ್ತೆ ಮಾಡಬೇಕೆಂದು ಬಂದ ಬೇಡಿಕೆಯನ್ವಯ ಇಲ್ಲಿ ಬಾದ್‌ಶಾ ರಸ್ತೆಮೂಲಕ ಸೇತುವೆ ನಿರ್ಮಾಣ ಮಾಡಿ ಗದ್ದೆಯಲ್ಲಿ ರಸ್ತೆ ಮಾಡಲಾಗಿದೆ. ಆದರೆ ಅದಕ್ಕೆ ಕಾಂಕ್ರೀಟ್‌ ಹಾಕುವ ಕಾರ್ಯವಾಗಲೀ, ಇಂಟರ್‌ಲಾಕ್‌ ಅಳವಡಿಸುವ ಕಾರ್ಯ ಆಗಲಿಲ್ಲ. ಕಾರಣ ಮತ್ತದೇ ಅನುದಾನದ ಕೊರತೆ. 

ಇಂಟರ್‌ಲಾಕ್‌ ಕಾಮಗಾರಿ
ಜೈನ್‌ಹೋಟೆಲ್‌ ಕೆಳಗಡೆಯಿಂದ ರಾಮಕೃಷ್ಣ ಅವರ ಮನೆವರೆಗೆ ಚರಂಡಿ ರಚಿಸಿ ಇಂಟರ್‌ಲಾಕ್‌ ಹಾಕಲಾಗಿದೆ. ಹೆಲೆನ್‌ ಡಿಸೋಜಾ ಅವರ ಮನೆಯಿಂದ ರಾಮಕೃಷ್ಣ ಅವರ ಮನೆವರೆಗೆ ಇಂಟರ್‌ಲಾಕ್‌ ಅಳವಡಿಸಲಾಗಿದ್ದು ನಾರಾಯಣ ನಾಯ್ಕ ಅವರ ಮನೆಯಿಂದ  ನಾಗಬನ ರಸ್ತೆಗೆ ಡಾಮರು ಹಾಕಲಾಗಿದೆ. ನಾರಾಯಣ ನಾಯ್ಕ ಅವರ ಮನೆಯ ನಂತರ ಚರಂಡಿಗೆ ಸ್ಲಾಬ್‌ ಹಾಕಬೇಕೆಂಬ ಬೇಡಿಕೆ ಇದೆ. ಹಳೆಕೋಟೆ ಅಂಗನವಾಡಿ ಯನ್ನು ದುರಸ್ತಿ ಮಾಡಲಾಗಿದೆ. ಗದ್ದೆಬೈಲಿ ನಲ್ಲಿ ಇಂಟರ್‌ಲಾಕ್‌ ಹಾಕಿ ರಸ್ತೆ ಮಾಡಲು ಸಿದ್ಧತೆ ನಡೆದಿದೆ. ಕಾಮಗಾರಿ ನಡೆದಿಲ್ಲ. 

ಬಾಕಿ ಇಲ್ಲ
ಮೊಗೇರಭವನ, ಮೈಲಾರೇಶ್ವರ ದೇವಸ್ಥಾನ, ರಾಯಲ್‌ ಸಭಾಭವನ ಬಳಿ ಚರಂಡಿ ಕಾಮಗಾರಿ ಮಾಡಲಾಗಿದೆ. ಹಾಗಾಗಿ ಯಾವುದೇ ಸಮಸ್ಯೆಗಳಿಲ್ಲ. ಆದರೆ ಗ್ಯಾರೇಜ್‌ ನಂತರ ಸ್ವಲ್ಪ ಸಮಸ್ಯೆ ಇದೆ.                              
– ರಾಧಾಕೃಷ್ಣ, ಸ್ಥಳೀಯರು

2 ಕೋ. ರೂ. ಅನುದಾನ ಬೇಕು
ನಮ್ಮ ವಾರ್ಡಿನಲ್ಲಿರುವ ತೋಡುಗಳಿಗೆ ಮುಚ್ಚಿಗೆ ಹಾಕಿ ರಸ್ತೆಯಾಗಿಸಬೇಕಿದೆ. ಗದ್ದೆಬೈಲಿನಲ್ಲಿ ರಸ್ತೆಗೆ ಇಂಟರ್‌ಲಾಕ್‌ ಹಾಕಬೇಕಿದೆ. ಬೇಡಿಕೆ ಇರುವ ಎಲ್ಲ ಕಾಮಗಾರಿ ಮಾಡಬೇಕಾದರೆ ಇನ್ನೂ 2 ಕೋ.ರೂ. ಅನುದಾನ ಬೇಕು. ಈ ಬಾರಿ 50ರಿಂದ 60 ಲಕ್ಷ ರೂ.ಗಳ ಕಾಮಗಾರಿ ಮಾಡಲಾಗಿದೆ. 
– ಶಕುಂತಲಾ ಗುಲ್ವಾಡಿ, ಸದಸ್ಯರು, ಪುರಸಭೆ 

ದೀಪದ ಬೆಳಕಿಲ್ಲ
ಬೀದಿ ದೀಪ ಸರಿ ಇರುವುದಿಲ್ಲ. ಚರಂಡಿಯನ್ನು ಮಳೆಗಾಲಕ್ಕೆ ಮೊದಲೇ ದುರಸ್ತಿ ಮಾಡಲಾಗಿದೆ. ಹಾಗಾಗಿ ನೀರು ಹರಿಯುವ ಸಮಸ್ಯೆ ಇಲ್ಲ.
– ಕೃಷ್ಣಮೂರ್ತಿ, ಸ್ಥಳೀಯರು

ಅನುದಾನ ಕೊರತೆ
ಹಳೆಯ ಆಡಳಿತ ಮಾಡಿದ ಕಾಮಗಾರಿಗಳಿವೆ. ಈ ಆಡಳಿತದ ಅವಧಿಯಲ್ಲಿ ಅಂತಹ ನಿರೀಕ್ಷಿತ ಕಾಮಗಾರಿ ನಡೆಯುವಷ್ಟು ಅನುದಾನ ಬಂದಂತಿಲ್ಲ. ಮೂಲಸೌಕರ್ಯ ಪರವಾಗಿಲ್ಲ. ಬಂದ ಅನುದಾನದ ಬಳಕೆಯಾಗಿದೆ. ಹೊಸ ಅನುದಾನ ಬಂದಿಲ್ಲ.
– ಅರುಣ್‌ ಕುಮಾರ್‌ ಬಾಣ, ಸ್ಥಳೀಯರು 

ಟಾಪ್ ನ್ಯೂಸ್

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಉಡುಪಿಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

13 ರಾಜ್ಯಗಳಿಗೆ ಬೇಕಾಗಿದ್ದ ಕಳ್ಳ ಕೋಟದಲ್ಲಿ ಪೊಲೀಸರ ಬಲೆಗೆ!

Theft; 13 ರಾಜ್ಯಗಳಿಗೆ ಬೇಕಾಗಿದ್ದ ಕಳ್ಳ ಕೋಟದಲ್ಲಿ ಪೊಲೀಸರ ಬಲೆಗೆ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.