ಮತಾಂತರವಾಗಿದ್ದ ಅತ್ತೆಯ ಮಗಳನ್ನು ವಿವಾಹವಾಗಿ ಮಾತೃಧರ್ಮಕ್ಕೆ ಸೇರಿಸಿದ


Team Udayavani, Jul 3, 2018, 4:10 AM IST

marriage-3-7.jpg

ಬೈಂದೂರು: ಎರಡೂವರೆ ದಶಕಗಳ ಹಿಂದೆ ಅಂತರ್ಮತೀಯನನ್ನು ವಿವಾಹವಾಗಿದ್ದ ಮಹಿಳೆಯ ಪುತ್ರಿಯನ್ನು ಆಕೆಯ ಮಾತೃಧರ್ಮದ ಯುವಕ ಮದುವೆಯಾದ ಘಟನೆ ನಡೆದಿದೆ. ಬೈಂದೂರಿನ ಯುವತಿ ರೇಷ್ಮಾ ಬಾನು ಅವರ ತಾಯಿ 26 ವರ್ಷಗಳ ಹಿಂದೆ ಅಂತರ್‌ ಮತೀಯ ವಿವಾಹವಾಗಿದ್ದರು. ಈಗ ಆಕೆಯ ಪುತ್ರಿ ಅಂತಧರ್ಮೀಯ ಯುವಕನನ್ನು ಮದುವೆಯಾಗುವ ಮೂಲಕ ಮರಳಿ ಮಾತೃಧರ್ಮಕ್ಕೆ ಬಂದಂತಾಗಿದೆ. ಭಟ್ಕಳದ ಆಸರಕೇರಿ ಶ್ರೀ ನಿಚ್ಚಳಮಕ್ಕಿ ದೇವಸ್ಥಾನದಲ್ಲಿ ರವಿವಾರ ನಡೆದ ವಿವಾಹ ಇಂತಹ ಕುತೂಹಲದ ಪ್ರಸಂಗಕ್ಕೆ ಸಾಕ್ಷಿಯಾಯಿತು. ರೇಷ್ಮಾ ಬಾನು ಭಟ್ಕಳದ ತಲಗೋಡದ ಯುವಕ ವಿಶ್ವನಾಥ ನಾಯ್ಕ ಅವರನ್ನು ವಿವಾಹವಾದರು.

ಪ್ರೇಮ ವಿವಾಹ
ರೇಷ್ಮಾ ಬಾನುಗೆ 6 ತಿಂಗಳ ಹಿಂದೆ ವಿಶ್ವನಾಥರ ಪರಿಚಯವಾಗಿ ಅವರು ಮದುವೆಯಾಗಲು ನಿರ್ಧ ರಿಸಿದ್ದರು. ಊರಿನಲ್ಲಿ ಮದುವೆ ಆದರೆ ಧರ್ಮದ ಸಮಸ್ಯೆಯಾಗಬಹುದು ಎಂದು ಬೆಂಗಳೂರಿನಲ್ಲಿ ವಿವಾಹವಾಗಿದ್ದರು. ಆದರೆ ಹೆತ್ತವರು ಹಾಗೂ ಬಂಧುಗಳಿಂದಾಗಿ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿತ್ತು. ಬಳಿಕ ಯುವಕ ಬೆಂಗಳೂರಿನಿಂದ ಭಟ್ಕಳಕ್ಕೆ ಬಂದು ಇಲ್ಲಿನ ತಮ್ಮ ಕುಲ ದೇವಸ್ಥಾನವಾದ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಹೋಮ ಹವನ ಮಾಡುವ ಮೂಲಕ ಯುವತಿಯನ್ನು ಯುವಕನ ಕುಟುಂಬದವರ ಉಪಸ್ಥಿತಿಯಲ್ಲಿ ಸಮಾಜದ ಹಿರಿಯರ ಮಾರ್ಗದರ್ಶನ ಹಾಗೂ ಹಿಂದೂ ಸಂಪ್ರದಾಯದಂತೆ ಅರ್ಚಕರು ಮುದ್ರಾಣಿಕೆಯನ್ನು ನೀಡಿ ಯುವತಿಯನ್ನು ಹಿಂದೂ ಧರ್ಮಕ್ಕೆ ಬರಮಾಡಿಕೊಂಡು ವಿವಾಹವಾದರು. ತಲೆ ಕಾಣಿಕೆ, ಮುಚ್ಚಳಿಕೆ, ಅಫಿಡವಿಟ್‌ ಅನ್ನು ಸಮಾಜದ ಅಧ್ಯಕ್ಷರಿಗೆ ಒಪ್ಪಿಸಿದ್ದಾರೆ.

ಅತ್ತೆಯೂ ಇದೇ ರೀತಿ ಮದುವೆ ಆಗಿದ್ದರು
ವಿಶ್ವನಾಥ ಅವರ ಕುಟುಂಬದ ಮಹಿಳೆ 26 ವರ್ಷಗಳ ಹಿಂದೆ ಅನ್ಯ ಮತೀಯರೊಬ್ಬರನ್ನು ಪ್ರೀತಿಸಿ ಮದುವೆಯಾಗಿದ್ದರು. ಮೊದಲ ಐದು ವರ್ಷ ಹಿಂದೂ ಸಂಪ್ರದಾಯದಂತೆ ಸಂಸಾರ ನಡೆಸಿದ್ದರೂ ಅನಂತರ ಮತಾಂತರವಾಗಿದ್ದರು. ಹಾಗೆ ಮತಾಂತರವಾದ ಮಹಿಳೆಯ ಪುತ್ರಿಯೇ ರೇಷ್ಮಾಬಾನು. ರಕ್ತ ಸಂಬಂಧದ ನೆಲೆಯಲ್ಲಿ ವಿಶ್ವನಾಥ ರೇಷ್ಮಾಬಾನುವಿಗೆ ಅತ್ತೆ ಮಗನಾಗಬೇಕು. ರೇಷ್ಮಾ ಅವರ ತಂದೆ ಅನಾರೋಗ್ಯದಿಂದ 6 ತಿಂಗಳ ಹಿಂದೆ ಮೃತ ಪಟ್ಟಿದ್ದರು. ಆ ಬಳಿಕ ವಿಶ್ವನಾಥ ಅವರು ರೇಷ್ಮಾ ಅವರ ಮನೆಗೊಮ್ಮೆ ತೆರಳಿದ್ದಾಗ ಪರಿಚಯವಾಗಿ ಫೋನ್‌ ಮೂಲಕ ಸಂಭಾಷಣೆ ಆರಂಭವಾಗಿ ಅದೇ ಪ್ರೀತಿ ಉದಯಿಸಲು ಕಾರಣವಾಗಿತ್ತು. ರಕ್ತಸಂಬಂಧಿ ಎಂದು ತಿಳಿದೇ ಇಬ್ಬರೂ ವಿವಾಹವಾಗಲು ನಿರ್ಧರಿಸಿದ್ದರು. ಆದರೆ ಯುವತಿಗೆ ಬೇರೆ ಮದುವೆ ನಡೆಸಲು ಸಿದ್ಧತೆ ನಡೆಯುತ್ತಿದೆ ಎಂದು ಅರಿತು ವಿಶ್ವನಾಥ ಯುವತಿ ಜತೆಗೆ ಜೂ.18ರಂದು ಬೆಂಗಳೂರಿಗೆ ತೆರಳಿ ಅಲ್ಲಿನ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದರು. ಬಳಿಕ ಯುವಕನ ಕುಟುಂಬದವರು ದಂಪತಿಯನ್ನು ಊರಿಗೆ ಕರೆಸಿಕೊಂಡಿದ್ದರು.

ಟಾಪ್ ನ್ಯೂಸ್

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ

ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ

“ಆಟ’ಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿಗೆ ಹಕ್ಕೊತ್ತಾಯ

“ಆಟ’ಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿಗೆ ಹಕ್ಕೊತ್ತಾಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.