ಮತಾಂತರವಾಗಿದ್ದ ಅತ್ತೆಯ ಮಗಳನ್ನು ವಿವಾಹವಾಗಿ ಮಾತೃಧರ್ಮಕ್ಕೆ ಸೇರಿಸಿದ


Team Udayavani, Jul 3, 2018, 4:10 AM IST

marriage-3-7.jpg

ಬೈಂದೂರು: ಎರಡೂವರೆ ದಶಕಗಳ ಹಿಂದೆ ಅಂತರ್ಮತೀಯನನ್ನು ವಿವಾಹವಾಗಿದ್ದ ಮಹಿಳೆಯ ಪುತ್ರಿಯನ್ನು ಆಕೆಯ ಮಾತೃಧರ್ಮದ ಯುವಕ ಮದುವೆಯಾದ ಘಟನೆ ನಡೆದಿದೆ. ಬೈಂದೂರಿನ ಯುವತಿ ರೇಷ್ಮಾ ಬಾನು ಅವರ ತಾಯಿ 26 ವರ್ಷಗಳ ಹಿಂದೆ ಅಂತರ್‌ ಮತೀಯ ವಿವಾಹವಾಗಿದ್ದರು. ಈಗ ಆಕೆಯ ಪುತ್ರಿ ಅಂತಧರ್ಮೀಯ ಯುವಕನನ್ನು ಮದುವೆಯಾಗುವ ಮೂಲಕ ಮರಳಿ ಮಾತೃಧರ್ಮಕ್ಕೆ ಬಂದಂತಾಗಿದೆ. ಭಟ್ಕಳದ ಆಸರಕೇರಿ ಶ್ರೀ ನಿಚ್ಚಳಮಕ್ಕಿ ದೇವಸ್ಥಾನದಲ್ಲಿ ರವಿವಾರ ನಡೆದ ವಿವಾಹ ಇಂತಹ ಕುತೂಹಲದ ಪ್ರಸಂಗಕ್ಕೆ ಸಾಕ್ಷಿಯಾಯಿತು. ರೇಷ್ಮಾ ಬಾನು ಭಟ್ಕಳದ ತಲಗೋಡದ ಯುವಕ ವಿಶ್ವನಾಥ ನಾಯ್ಕ ಅವರನ್ನು ವಿವಾಹವಾದರು.

ಪ್ರೇಮ ವಿವಾಹ
ರೇಷ್ಮಾ ಬಾನುಗೆ 6 ತಿಂಗಳ ಹಿಂದೆ ವಿಶ್ವನಾಥರ ಪರಿಚಯವಾಗಿ ಅವರು ಮದುವೆಯಾಗಲು ನಿರ್ಧ ರಿಸಿದ್ದರು. ಊರಿನಲ್ಲಿ ಮದುವೆ ಆದರೆ ಧರ್ಮದ ಸಮಸ್ಯೆಯಾಗಬಹುದು ಎಂದು ಬೆಂಗಳೂರಿನಲ್ಲಿ ವಿವಾಹವಾಗಿದ್ದರು. ಆದರೆ ಹೆತ್ತವರು ಹಾಗೂ ಬಂಧುಗಳಿಂದಾಗಿ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿತ್ತು. ಬಳಿಕ ಯುವಕ ಬೆಂಗಳೂರಿನಿಂದ ಭಟ್ಕಳಕ್ಕೆ ಬಂದು ಇಲ್ಲಿನ ತಮ್ಮ ಕುಲ ದೇವಸ್ಥಾನವಾದ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಹೋಮ ಹವನ ಮಾಡುವ ಮೂಲಕ ಯುವತಿಯನ್ನು ಯುವಕನ ಕುಟುಂಬದವರ ಉಪಸ್ಥಿತಿಯಲ್ಲಿ ಸಮಾಜದ ಹಿರಿಯರ ಮಾರ್ಗದರ್ಶನ ಹಾಗೂ ಹಿಂದೂ ಸಂಪ್ರದಾಯದಂತೆ ಅರ್ಚಕರು ಮುದ್ರಾಣಿಕೆಯನ್ನು ನೀಡಿ ಯುವತಿಯನ್ನು ಹಿಂದೂ ಧರ್ಮಕ್ಕೆ ಬರಮಾಡಿಕೊಂಡು ವಿವಾಹವಾದರು. ತಲೆ ಕಾಣಿಕೆ, ಮುಚ್ಚಳಿಕೆ, ಅಫಿಡವಿಟ್‌ ಅನ್ನು ಸಮಾಜದ ಅಧ್ಯಕ್ಷರಿಗೆ ಒಪ್ಪಿಸಿದ್ದಾರೆ.

ಅತ್ತೆಯೂ ಇದೇ ರೀತಿ ಮದುವೆ ಆಗಿದ್ದರು
ವಿಶ್ವನಾಥ ಅವರ ಕುಟುಂಬದ ಮಹಿಳೆ 26 ವರ್ಷಗಳ ಹಿಂದೆ ಅನ್ಯ ಮತೀಯರೊಬ್ಬರನ್ನು ಪ್ರೀತಿಸಿ ಮದುವೆಯಾಗಿದ್ದರು. ಮೊದಲ ಐದು ವರ್ಷ ಹಿಂದೂ ಸಂಪ್ರದಾಯದಂತೆ ಸಂಸಾರ ನಡೆಸಿದ್ದರೂ ಅನಂತರ ಮತಾಂತರವಾಗಿದ್ದರು. ಹಾಗೆ ಮತಾಂತರವಾದ ಮಹಿಳೆಯ ಪುತ್ರಿಯೇ ರೇಷ್ಮಾಬಾನು. ರಕ್ತ ಸಂಬಂಧದ ನೆಲೆಯಲ್ಲಿ ವಿಶ್ವನಾಥ ರೇಷ್ಮಾಬಾನುವಿಗೆ ಅತ್ತೆ ಮಗನಾಗಬೇಕು. ರೇಷ್ಮಾ ಅವರ ತಂದೆ ಅನಾರೋಗ್ಯದಿಂದ 6 ತಿಂಗಳ ಹಿಂದೆ ಮೃತ ಪಟ್ಟಿದ್ದರು. ಆ ಬಳಿಕ ವಿಶ್ವನಾಥ ಅವರು ರೇಷ್ಮಾ ಅವರ ಮನೆಗೊಮ್ಮೆ ತೆರಳಿದ್ದಾಗ ಪರಿಚಯವಾಗಿ ಫೋನ್‌ ಮೂಲಕ ಸಂಭಾಷಣೆ ಆರಂಭವಾಗಿ ಅದೇ ಪ್ರೀತಿ ಉದಯಿಸಲು ಕಾರಣವಾಗಿತ್ತು. ರಕ್ತಸಂಬಂಧಿ ಎಂದು ತಿಳಿದೇ ಇಬ್ಬರೂ ವಿವಾಹವಾಗಲು ನಿರ್ಧರಿಸಿದ್ದರು. ಆದರೆ ಯುವತಿಗೆ ಬೇರೆ ಮದುವೆ ನಡೆಸಲು ಸಿದ್ಧತೆ ನಡೆಯುತ್ತಿದೆ ಎಂದು ಅರಿತು ವಿಶ್ವನಾಥ ಯುವತಿ ಜತೆಗೆ ಜೂ.18ರಂದು ಬೆಂಗಳೂರಿಗೆ ತೆರಳಿ ಅಲ್ಲಿನ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದರು. ಬಳಿಕ ಯುವಕನ ಕುಟುಂಬದವರು ದಂಪತಿಯನ್ನು ಊರಿಗೆ ಕರೆಸಿಕೊಂಡಿದ್ದರು.

ಟಾಪ್ ನ್ಯೂಸ್

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.