ಜೀವನಾಂಶ ವಿವಾದ: ವ್ಯಕ್ತಿಯ ಮೇಲೆ ತಂಡದಿಂದ ಹಲ್ಲೆ
Team Udayavani, Aug 14, 2018, 11:51 AM IST
ಕುಂದಾಪುರ: ಪತ್ನಿಗೆ ಜೀವನಾಂಶ ಮೊತ್ತ ಹೆಚ್ಚಿಸಲು ನಿರಾಕರಿಸಿದ ವ್ಯಕ್ತಿಯ ಮೇಲೆ ತಂಡವೊಂದು ಹಲ್ಲೆ ನಡೆದಿದೆ.
ನಾಡ ಗ್ರಾಮದ ಗುಡ್ಡೆಯಂಗಡಿ ಅಮ್ಮುಂಜೆ ಸೆಡುRಳಿ ನಿವಾಸಿ ಉದಯ ಕುಮಾರ್ ಶೆಟ್ಟಿ ಹಾಗೂ ಪತ್ನಿ ಮಲ್ಲಿಕಾ ಶೆಟ್ಟಿ ಅವರ ದಾಂಪತ್ಯದಲ್ಲಿ ವಿರಸ ಉಂಟಾಗಿ ನ್ಯಾಯಾಲಯದಲ್ಲಿ ದಾವೆ ದಾಖಲಾಗಿತ್ತು.
ನ್ಯಾಯಾಲಯದ ಆದೇಶದಂತೆ ಉದಯ ಕುಮಾರ್ ಶೆಟ್ಟಿ ಅವರು ಪತ್ನಿ ಹಾಗೂ ಮಗುವಿಗೆ ತಿಂಗಳಿಗೆ 3,000 ರೂ.ಜೀವನಾಂಶ ನೀಡುತ್ತಾ ಬಂದಿದ್ದಾರೆ. ಈ ಮೊತ್ತ ಕಡಿಮೆ ಆಗುತ್ತಿದ್ದು, ಹೆಚ್ಚಿನ ಹಣ ಹಾಗೂ ಒಡವೆಯನ್ನು ಕೊಡಬೇಕು ಎಂದು ಪತ್ನಿ ಕೇಳಿದ್ದರು.
ಇದಕ್ಕೆ ನಿರಾಕರಿಸಿದ ಉದಯ ಕುಮಾರ್ ಶೆಟ್ಟಿ ಮೇಲೆ ನಾಡ ಗ್ರಾಮದ ಕೋಣಿR ಕದ್ರಾ ಹಾಡಿಯಲ್ಲಿ ಆರೋಪಿಗಳಾದ ಸರ್ವೋತ್ತಮ ಶೆಟ್ಟಿ, ಆನಂದ ಶೆಟ್ಟಿ ಮತ್ತು ಇತರ 7 ಮಂದಿ ಎರಡು ಕಾರಿನಲ್ಲಿ ಬಂದು ಹಲ್ಲೆ ಮಾಡಿ, 3 ಪವನ್ ಚಿನ್ನದ ಸರ ಮತ್ತು ಆಮ್ನಿಯಲ್ಲಿದ್ದ 35 ಸಾ. ರೂ. ಹಣವನ್ನು ಕೊಂಡೊಯ್ದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ