ಬಗೆಹರಿಯದ ತಾತ್ಕಾಲಿಕ ತ್ಯಾಜ್ಯ ಘಟಕ ಸಮಸ್ಯೆ


Team Udayavani, Aug 23, 2018, 6:00 AM IST

2208kota6e.jpg

ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಭಗವತಿ ವಾರ್ಡ್‌ ಪ್ರಮುಖ ಬೇಡಿಕೆ ತ್ಯಾಜ್ಯ ಘಟಕದ ಸ್ಥಳಾಂತರ. ಇಲ್ಲಿ ಹಲವೊಂದು ಅಭಿವೃದ್ಧಿ ಕಾರ್ಯಗಳು ನಡೆದಿದ್ದರೂ, ಬೇಡಿಕೆಗಳ ಪಟ್ಟಿ ಪೂರ್ಣಗೊಂಡಿಲ್ಲ.

ಕೋಟ: ಭಗವತಿ ವಾರ್ಡ್‌  ಗುಂಡ್ಮಿ ಗ್ರಾಮಕ್ಕೆ ಒಳಪಟ್ಟ ಸಾಲಿಗ್ರಾಮ ಪ.ಪಂ.ನ 12ನೇ ವಾರ್ಡ್‌. ಪೂರ್ವಕ್ಕೆ ರಾಷ್ಟ್ರೀಯ ಹೆದ್ದಾರಿಯ ಪಶ್ಚಿಮದ ಸುಹಾಸ ಮನೆಯಿಂದ ಚೇಂಪಿ ದೇವಸ್ಥಾನದ ಮಗ್ಗೊàಡು ತನಕ ಪಶ್ಚಿಮಕ್ಕೆ  ಹೊಳೆಯ ವರೆಗೆ. ಉತ್ತರಕ್ಕೆ ಸುಹಾಸ ಮನೆಯಿಂದ ಪಶ್ಚಿಮಕ್ಕೆ ಗುಂಡ್ಮಿ-ಪಾರಂಪಳ್ಳಿ ಗಡಿಯ ನೀರು ತೋಡಿನ ವರೆಗೆ, ದಕ್ಷಿಣಕ್ಕೆ ಮಗ್ಗೊàಡು ರಸ್ತೆಯಿಂದ ನೀರು ತೋಡು ವರಗೆ ತನ್ನ ವ್ಯಾಪ್ತಿಯನ್ನು ಹೊಂದಿದೆ.

ಆಶೋತ್ತರ ಈಡೇರಿಕೆಯ ಜವಾಬ್ದಾರಿ
ಹಿಂದೆ  ತಗ್ಗಿನ್‌ಬೈಲು ವಾರ್ಡ್‌ ಇರುವಾಗ  2002ರಲ್ಲಿ  ಜಯಪ್ರಕಾಶ್‌ ಹೆಗ್ಡೆ ಬೆಂಬಲಿತ ವಿನಯ್‌ ಕಬ್ಯಾಡಿ ಜಯಗಳಿಸಿದ್ದರು  ಹಾಗೂ 2008 ಮತ್ತು  2013 ಎರಡು ಅವಧಿಗೆ ಬಿಜೆಪಿಯ ಉದಯ ಪೂಜಾರಿ ಸದಸ್ಯರಾಗಿ ಆಯ್ಕೆಗೊಂಡಿದ್ದರು.   

ಈ ಬಾರಿ ವಾರ್ಡ್‌ ಪರಿಶಿಷ್ಠ ಪಂಗಡಕ್ಕೆ ಮೀಸಲಾಗಿದ್ದು   ಬಿಜೆಪಿಯಿಂದ ಆನಂದ ಹಾಗೂ  ಕಾಂಗ್ರೆಸ್‌ನಿಂದ  ಸುನೀತಾ ಕಣದಲ್ಲಿದ್ದಾರೆ. ಎರಡು ಪಕ್ಷಗಳ ನಡುವೆ ಇಲ್ಲಿ ನೇರ ಹಣಾ-ಹಣಿ ನಡೆಯಲಿದೆ. ಸದ್ಯ ಈ ವಾರ್ಡ್‌ನಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವುದು ತಾತ್ಕಾಲಿಕ ತ್ಯಾಜ್ಯ ಸಂಗ್ರಹಣಾ ಘಟಕ. ಹಳೇಕೋಟೆ ಮೈದಾನದ ಜಾಗದಲ್ಲೇ ಇಲ್ಲಿ ತ್ಯಾಜ್ಯ ವಿಲೇವಾರಿ ನಡೆಯುತ್ತಿರುವುದರಿಂದ ಸುತ್ತಮುತ್ತಲಿನ ವಸತಿ ಪ್ರದೇಶಗಳಿಗೆ ಇನ್ನಿಲ್ಲದ ಸಮಸ್ಯೆಯಾಗಿ ಪರಿಣಮಿಸಿದೆ. ಹೊಸ ಸದಸ್ಯರು ಮೊದಲಾಗಿ ಇದರ ಬಗ್ಗೆ ದನಿ ಎತ್ತಬೇಕು ಮತ್ತು ಘಟಕದ ಸ್ಥಳಾಂತರಕ್ಕೆ ಯತ್ನಿಸಬೇಕು ಎಂಬ ಆಗ್ರಹ ಇಲ್ಲಿನ ಜನರದ್ದಾಗಿದೆ. 

ಆದ ಕೆಲಸ
ಕಾಂಕ್ರೀಟ್‌ 

ಮೊಗವೀರ ಸಭಾಭವನದ ಎದುರು ರಸ್ತೆಗೆ ಕಾಂಕ್ರೇಟ್‌, ಹಳೇಕೋಟೆ ಶ್ಮಶಾನದ ಎದುರು ರಸ್ತೆ ಕಾಂಕ್ರೇಟ್‌, ಕಲಾಕೇಂದ್ರದ ನಾಗಿ ಮರಕಾಲ್ತಿ ಮನೆಯ ವರೆಗೆ ಕಾಂಕ್ರೀಟ್‌ ರಸ್ತೆ ನಿರ್ಮಾಣವಾಗಿದೆ.

ರಸ್ತೆ ನಿರ್ಮಾಣ
ಇಲ್ಲಿನ ಎಸ್‌.ಸಿ. ಕಾಲನಿಗೆ ರಸ್ತೆ ಸಂಪರ್ಕ ಇರಲಿಲ್ಲ. ಇದೀಗ ಎಸ್‌.ಸಿ. ಕಾಲನಿಗೆ ರಸ್ತೆ ನಿರ್ಮಾಣ ಮಾಡಲಾಗಿದ್ದು ಸಂಪರ್ಕದ ನಿಟ್ಟಿನಲ್ಲಿ ಅನುಕೂಲವಾಗಿದೆ.

ಚರಂಡಿ 
ಗುಂಡ್ಮಿ ಕುಕ್ಕಿನಬೈಲು ರಸ್ತೆಯಲ್ಲಿ ಚರಂಡಿ  ನಿರ್ಮಾಣ. ಎಸ್‌.ಸಿ. ಕಾಲನಿಗೆ ಚರಂಡಿ ನಿರ್ಮಾಣ ಮಾಡಲಾಗಿದ್ದು ಮಳೆ ನೀರು ಹರಿದು ಹೋಗಲು ಅನುಕೂಲವಾಗಿದೆ.

ಹೊಸ ರಸ್ತೆ
ಪಾರಂಪಳ್ಳಿ, ಗುಂಡ್ಮಿ, ಹೆಗ್ಗಡ್ತಿಮಕ್ಕಿ ಮುಂತಾದ ಕಡೆಗಳಿಗೆ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಇಲ್ಲಿನ ಹಳೆಕೋಟೆ ಮೈದಾನದಲ್ಲಿ ಬಾವಿಯೊಂದನ್ನು ರಚಿಸಲಾಗಿದ್ದು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಆದರೆ ತಾತ್ಕಾಲಿಕ ಡಂಪಿಂಗ್‌ ಯಾರ್ಡ್‌ನಿಂದಾಗಿ ಬಾವಿಯ ನೀರು ಕಲುಷಿತವಾಗುತ್ತಿದೆ.

ಆಗದ ಕೆಲಸ
ಸ್ಥಳಾಂತರ

ಡಂಪಿಂಗ್‌ ಯಾರ್ಡ್‌ ಇಲ್ಲದಿರುವುದರಿಂದ ಹಳೆಕೋಟೆ ಮೈದಾನದಲ್ಲಿ ಕಸವಿಲೇವಾರಿ ಮಾಡುತ್ತಿದ್ದು ಇದು ಜನವಸತಿ ಪ್ರದೇಶವಾದ್ದರಿಂದ ಸ್ಥಳೀಯರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಹೀಗಾಗಿ ಇದನ್ನು ಸ್ಥಳಾಂತರಿಸಬೇಕಿದೆ.

ಕಾಂಕ್ರೀಟ್‌
ಭಗವತಿ ರಸ್ತೆಯಲ್ಲಿ ಕೆಲವು ಭಾಗ ಕಾಂಕ್ರೀಟೀಕರಣ ಆಗಬೇಕಿದೆ. ಮಳೆಗಾಲದಲ್ಲಿ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಇದರೊಂದಿಗೆ ಉಳಿದ ಕಡೆಗಳಲ್ಲೂ ರಸ್ತೆಗೆ ಕಾಂಕ್ರೀಟೀಕರಣದ ಅಗತ್ಯವಿದೆ.

ಚರಂಡಿ ನಿರ್ಮಾಣ
ಪ.ಪಂ.ನ ಎಲ್ಲಾ ವಾರ್ಡಗಳಂತೆ ಈ ವಾರ್ಡ್‌ನಲ್ಲೂ ಕೂಡ ಚರಂಡಿ ಸಮಸ್ಯೆ ಇದೆ. ಮಳೆಗಾಲದಲ್ಲಿ ನàಇರು ಹರಿಯಲು ಸಮಸ್ಯೆಯಾಗುತ್ತದೆ. ಆದ್ದರಿಂದ ಅಗತ್ಯ ಕಡೆಗಳಲಇ ಚರಂಡಿ ಮತ್ತು ವಾಲ್‌ ನಿರ್ಮಿಸುವ ಕಾರ್ಯ ಅಗತ್ಯವಾಗಿ ಆಗಬೇಕಿದೆ.

ಕ್ರೀಡಾಂಗಣ
ಹಳೆಕೋಟೆ ಮೈದಾನದಲ್ಲಿ ಕ್ರೀಡಾಂಗಣವಾಗಿ ಬಳಕೆಯಲ್ಲಿರುವ ಸರಕಾರಿ ಜಾಗ ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಆದ್ದರಿಂದ ಇಲ್ಲಿ ಸೂಕ್ತವಾದ ಕ್ರೀಡಾಂಗಣ, ಕ್ರೀಡಾಪಟುಗಳ ತರಬೇತಿಗೆ ಸೂಕ್ತ ವ್ಯವಸ್ಥೆಗಳು ಆಗಬೇಕಿವೆ.

ಪುರುಷರು: 442
ಮಹಿಳೆಯರು: 472
ಒಟ್ಟು  ಮತದಾರರು:914

ಟಾಪ್ ನ್ಯೂಸ್

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eqewqe

JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

1-qwewweq

K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ 

1-BVR-1

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.