ಚಿತ್ರಗಳ ಮೂಲಕ ಪರಿಸರ ಕಾಳಜಿಯ ಪಾಠ


Team Udayavani, Aug 24, 2018, 1:45 AM IST

wall-art-23-8.jpg

ಕುಂದಾಪುರ: ಒಂದೆಡೆ ಪ್ರಕೃತಿಯ ಮೇಲಿನ ಮಾನವ ಹಸ್ತಕ್ಷೇಪದಿಂದ ಕುಸಿದು ಬೀಳುತ್ತಿರುವ ಪ್ರಕೃತಿ. ಅದನ್ನೇ ನಂಬಿದ್ದ ಮಾನವನ ಬದುಕು. ಇನ್ನೊಂದೆಡೆ ಅದೇ ಪ್ರಕೃತಿ ಉಳಿಸಿ ಅದು ನಮ್ಮನ್ನು ಉಳಿಸುತ್ತದೆ ಎಂದು ಸಂದೇಶ ಸಾರುವ ಪರಿಸರಪ್ರಿಯರು. ಇದೆಲ್ಲದರ ಮಧ್ಯೆ ಗಮನ ಸೆಳೆಯುತ್ತಿರುವುದು ವಂಡ್ಸೆಯ ಕಾಲೇಜಿಗೆ ಬಂದು ವಿದೇಶೀಯರು ಪ್ರಕೃತಿ ಉಳಿಸಿ ಎಂದು ಸಾರುತ್ತಿರುವ ಸಂದೇಶ.

ಮಾನವನ ಪರಿಸರ ಮಾರಕ ಚಟುವಟಿಕೆಗಳು ಸೃಷ್ಟಿಸುವ ದುರಂತಗಳಿಗೆ ಕೇರಳ ಮತ್ತು ಕೊಡಗಿನ ಪ್ರವಾಹ ಮತ್ತು ಭೂ ಕುಸಿತಗಳು ನಮ್ಮೆದುರಿಗಿವೆ. ನಿಸರ್ಗದ ನಿಯಮಗಳನ್ನು ಮೀರಿ ಪ್ರಕೃತಿಯ ವಿರುದ್ಧ ಯುದ್ಧ ಹೂಡುವ ಪ್ರವೃತ್ತಿಯನ್ನು ಮಾನವ ರೂಢಿಸಿಕೊಂಡಿದ್ದಾನೆ. ‘ಪ್ರಕೃತಿಯ ನಾಶ, ನಮ್ಮ ನಾಶ’ ಎಂಬ ಸಾಮಾನ್ಯ ಪ್ರಜ್ಞೆ ನಮಗಿಲ್ಲವೆಂದಲ್ಲ. ದುರಾಸೆ, ಲಾಭ ಬಡುಕತನ, ಅತಿ ಬುದ್ಧಿವಂತಿಕೆ ಇವೆಲ್ಲ ನಮ್ಮನ್ನು ನಮ್ಮೆದೆಯ ಒಳದನಿಗೆ ನಮ್ಮನ್ನು ಕಿವುಡಾಗಿಸಿವೆ. ಈಗಿನದು ಮಾನವ ಬುದ್ಧಿವಂತಿಕೆಯನ್ನು ಪ್ರಕೃತಿ ಅಣಕಿಸುತ್ತಿದೆಯೇನೋ ಎಂದು ಮನಸ್ಸು ಕಳವಳಗೊಂಡಿರುವ ಸಂದರ್ಭ. ಪ್ರಕೃತಿಯೆಡೆಗಿನ ಕಾಳಜಿಯ ಸೂಕ್ಷ್ಮ ಭಾವನೆಗಳಿಗೆ ನಮ್ಮ ಮನಸ್ಸು, ಹೃದಯ ತೆರೆದಿಟ್ಟುಕೊಳ್ಳುವ ಸಂದರ್ಭ.


ಈ ಭಾವನೆಗಳನ್ನೆಲ್ಲ ಸಾಂಕೇತಿಕವಾಗಿ ಚಿತ್ರಗಳ ಮೂಲಕ ಬಿಂಬಿಸುವ ಯತ್ನ ವಿದೇಶಿ ವಿದ್ಯಾರ್ಥಿಗಳು ಮಾಡಿದ್ದಾರೆ. ಸರಕಾರಿ  ಪ.ಪೂ. ಕಾಲೇಜು ವಂಡ್ಸೆಯಲ್ಲಿ ತರಗತಿ ಕೋಣೆಯ ಗೋಡೆಗಳನ್ನೇ ಕ್ಯಾನ್ವಾಸನ್ನಾಗಿ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿಯ ಪಾಠ ಹೇಳಲು ಎಫ್‌.ಎಸ್‌.ಎಲ್‌. ಇಂಡಿಯಾದ ಕುಂದಾಪುರ ಶಾಖೆಯ ಸ್ವಯಂಸೇವಕರು ಪ್ರಯತ್ನಿಸಿದ್ದಾರೆ.

ಭಾರತಕ್ಕೆ ಅಧ್ಯಯನ ಪ್ರವಾಸಕ್ಕೆಂದು ಬಂದಿರುವ ಇಟಲಿಯ ಕಿಯಾರಾ, ಜರ್ಮನಿಯ ಅನ್ನಾ ಮತ್ತು ಫ್ಲೋರಿಯಾನಾ ತಮ್ಮ ಸಮಾಜ ಸೇವಾ ಕಾರ್ಯದ ಭಾಗವಾಗಿ ಇಲ್ಲಿ ಚಿತ್ರ ರಚನೆ ಮಾಡಿದ್ದಾರೆ. ಕೃಷಿ ಅಧ್ಯಯನ ವಿದ್ಯಾರ್ಥಿಗಳಾದ ಇವರು ಸಹಜವಾಗಿ ಪ್ರಕೃತಿ ಕಾಳಜಿಯುಳ್ಳವರು. ನಿರಂತರ ಮೂರು ದಿನಗಳ ಕಾಲ ಕಾಲೇಜಿನ ಗೋಡೆಗಳಲ್ಲಿ ಚಿತ್ರ ರಚಿಸಿರುವ ಈ ಮೂವರು ‘ಪ್ಲಾಸ್ಟಿಕ್‌ ತ್ಯಾಜ್ಯ ತೊಲಗಿಸಿ’ ಎಂಬ ಸಂದೇಶವಿರುವ ಸುಮಾರು ಎಂಟೂವರೆ ಅಡಿ ಎತ್ತರದ ಇನ್ನೊಂದು ಚಿತ್ರವನ್ನೂ ರಚಿಸಿದ್ದಾರೆ. ಮರ ಮತ್ತು ಮನುಷ್ಯನನ್ನು ಸಮ್ಮಿಳಿತಗೊಳಿಸಿದ ಹೃದ್ಯಚಿತ್ರಣವೊಂದನ್ನು ಬಿಡಿಸಿದ್ದಾರೆ. ಮರದ ಬುಡವೇ ಮನುಷ್ಯನಂತೆ. ಮನುಷ್ಯನ ಹೃದಯ ಮರದ ಆತ್ಮದಂತೆ ಬರೆದಿದ್ದಾರೆ. ಅಲ್ಲೇ ಸಮುದ್ರ, ಸೂರ್ಯೋದಯ ಹೀಗೆ ಅನೇಕ ಸಂದೇಶಗಳನ್ನು ಸಾರುವ ಚಿತ್ರ ಇದಾಗಿದೆ.

ಪ್ರಕೃತಿ ಕಾಳಜಿ ಚಿತ್ರಗಳಿಗಿದೆ
‘ಪ್ರತಿಯೊಬ್ಬರೂ ಪ್ರಕೃತಿಯ ಬಗ್ಗೆ ಕಾಳಜಿ, ಸೂಕ್ಷ್ಮತೆ ಹಾಗೂ ಬದ್ಧತೆ ಹೊಂದಿರಬೇಕು. ಪ್ರಕೃತಿಯೆಡೆಗೆ ತುಡಿಯುವ ಅರಿವಿನ ಗಿಡವೊಂದನ್ನು ತಮ್ಮ ಹೃದಯದಲ್ಲಿ ಸದಾ ಹಸಿರಾಗಿಡಬೇಕು. ಮುಖ್ಯವಾಗಿ ಯುವ ಮನಸ್ಸುಗಳಲ್ಲಿ ಪ್ರಕೃತಿ ಕಾಳಜಿಯನ್ನು, ಸೂಕ್ಷ್ಮ ಭಾವನೆಗಳನ್ನು ಎಚ್ಚರಿಸುವ ಆಶಯ ಈ ಚಿತ್ರಗಳಿಗಿದೆ’.
– ಕಿಯಾರಾ, ಇಟಲಿ

ಟಾಪ್ ನ್ಯೂಸ್

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಉಡುಪಿಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

13 ರಾಜ್ಯಗಳಿಗೆ ಬೇಕಾಗಿದ್ದ ಕಳ್ಳ ಕೋಟದಲ್ಲಿ ಪೊಲೀಸರ ಬಲೆಗೆ!

Theft; 13 ರಾಜ್ಯಗಳಿಗೆ ಬೇಕಾಗಿದ್ದ ಕಳ್ಳ ಕೋಟದಲ್ಲಿ ಪೊಲೀಸರ ಬಲೆಗೆ!

Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ

Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್‌

BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್‌

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.