ಕುಂದಾಪುರ ಪುರಸಭೆ: ರಾಜಕೀಯ ಜಿದ್ದಾಜಿದ್ದಿ; 7 ಕಡೆ ನೇರ ಹಣಾಹಣಿ 


Team Udayavani, Aug 25, 2018, 11:03 AM IST

kundapura.jpg

ಕುಂದಾಪುರ: ಪುರಸಭೆಗೆ ನಡೆಯುವ ಚುನಾವಣೆಯಲ್ಲಿ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಬಿಜೆಪಿ ನೇರ ಹಣಾಹಣಿ ಹೊಂದಿದೆ. ಈ ಮಧ್ಯೆ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಬಂಡಾಯದ ತಲೆಬಿಸಿಯೂ ಇದೆ. ಬಿಜೆಪಿಯಲ್ಲಿ ಉಚ್ಚಾಟನಾ ಪರ್ವವೂ ನಡೆದಿದೆ. ಒಟ್ಟು 74 ಅಭ್ಯರ್ಥಿಗಳು ಅದೃಷ್ಟ  ಪರೀಕ್ಷೆಗೆ ಇಳಿದಿದ್ದಾರೆ. 

 ನಾಗಾಲೋಟಕ್ಕೆ ತಡೆ
ಫೆರ್ರಿ ವಾರ್ಡ್‌, ಈಸ್ಟ್‌ಬ್ಲಾಕ್‌, ಚಿಕ್ಕನ್‌ಸಾಲ್‌, ಸರಕಾರಿ ಆಸ್ಪತ್ರೆ, ಚರ್ಚ್‌ ರೋಡ್‌, ವೆಸ್ಟ್‌ಬ್ಲಾಕ್‌,ಕೋಡಿ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಯ ಅಭ್ಯರ್ಥಿಗಳು ಮಾತ್ರ ಇರುವುದು. ಹಾಗಾಗಿ ನೇರ ಸ್ಪರ್ಧೆಯಲ್ಲಿ ಅಭ್ಯರ್ಥಿಗಳ ನಡುವೆ ಬಲಾಬಲ ಪ್ರದರ್ಶನ ಆಗಲಿದೆ. ಬಹದ್ದೂರ್‌ಶಾ, ಮೀನು ಮಾರುಕಟ್ಟೆ, ಚಿಕ್ಕನ್‌ಸಾಲ್‌ ಬಲಬದಿ, ಸೆಂಟ್ರಲ್‌,ಟಿಟಿ ವಾರ್ಡ್‌, ನಾನಾ ಸಾಹೇಬ್‌, ಶಾಂತಿನಿಕೇತನ, ಕಲ್ಲಾಗರ ವಾರ್ಡ್‌ನಲ್ಲಿ ತಲಾ ಮೂವರು ಸ್ಪರ್ಧಿಗಳಿದ್ದಾರೆ. ನಾನಾ ಸಾಹೇಬ್‌, ಕಲ್ಲಾಗರ, ಶಾಂತಿನಿಕೇತನದಲ್ಲಿ ಸಿಪಿಐಎಂ, ಟಿಟಿ ವಾರ್ಡ್‌ನಲ್ಲಿ ಜೆಡಿಎಸ್‌, ಸೆಂಟ್ರಲ್‌ ವಾರ್ಡ್‌, ಬಹದ್ದೂರ್‌ಶಾದಲ್ಲಿ ಪಕ್ಷೇತರ, ಚಿಕ್ಕನ್‌ಸಾಲ್‌ ಬಲಬದಿ, ಮೀನು ಮಾರುಕಟ್ಟೆಯಲ್ಲಿ ಬಿಎಸ್‌ಪಿ ಪಕ್ಷಗಳು ಕಾಂಗ್ರೆಸ್‌ ಬಿಜೆಪಿಯ ಮತಗಳಿಕೆಯ ನಾಗಾಲೋಟಕ್ಕೆ ತಡೆಯೊಡ್ಡಲು ಸಜ್ಜಾಗಿವೆ. 

ಐವರ ಕಣ
ಖಾರ್ವಿಕೇರಿ, ಕೋಡಿ ದಕ್ಷಿಣ, ಕೋಡಿ ಮಧ್ಯ ವಾರ್ಡಿನಲ್ಲಿ ತಲಾ ನಾಲ್ವರು, ಟೈಲ್‌ ಫ್ಯಾಕ್ಟರಿ, ಮದ್ದುಗುಡ್ಡೆ, ಕುಂದೇಶ್ವರ, ಹುಂಚಾರುಬೆಟ್ಟು ವಾರ್ಡಿನಲ್ಲಿ ತಲಾ ಐವರು ಸ್ಪರ್ಧೆಯಲ್ಲಿದ್ದಾರೆ. ಐದಕ್ಕಿಂತ ಹೆಚ್ಚಿನ ಸ್ಪರ್ಧಿಗಳು ಎಲ್ಲಿಯೂ ಇಲ್ಲ. 

ಮುನಿಸಿಕೊಂಡವರು
ಪುರಸಭೆಯ ಜನಸಂಖ್ಯೆ 30,444 ಇದ್ದು ಇದರಲ್ಲಿ 23,220 ಮತದಾರರಿದ್ದಾರೆ. 23 ವಾರ್ಡ್‌ಗಳಿದ್ದು ಕಳೆದ ಅವಧಿಯಲ್ಲಿ ಬಿಜೆಪಿ ಆಡಳಿತ ನಡೆಸಿ ಕಾಂಗ್ರೆಸ್‌ ಪ್ರತಿಪಕ್ಷವಾಗಿದೆ. ಸಿಪಿಐಎಂ ಎರಡು ಸ್ಥಾನಗಳನ್ನು ಹೊಂದಿತ್ತು. ಆದರೆ ಈ ಬಾರಿ ಸಿಪಿಐಎಂನ ಗೆಲುವಿನ ಅಭ್ಯರ್ಥಿ ಎಂದು ಬಿಂಬಿಸಲ್ಪಟ್ಟ ಸತತ 4 ಅವಧಿಯಲ್ಲಿ ಗೆದ್ದ ಗುಣರತ್ನಾ ಅವರು ಬಿಜೆಪಿ ತೆಕ್ಕೆಗೆ ಸರಿದು ಸ್ಪರ್ಧಿಸುತ್ತಿದ್ದಾರೆ. ಅಂತೆಯೇ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಉಪಾಧ್ಯಕ್ಷರಾಗಿದ್ದ ಇದಕ್ಕೂ ಮೊದಲು ಬಿಜೆಪಿ ಅಧ್ಯಕ್ಷರೂ ಆಗಿದ್ದ ರಾಜೇಶ್‌ ಕಾವೇರಿ ಅವರು ಪಕ್ಷದಿಂದ ಟಿಕೆಟ್‌ ಸಿಗದೇ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಪಕ್ಷದಿಂದ ಉಚ್ಚಾಟಿಸಲ್ಪಟ್ಟಿದ್ದಾರೆ. ಆದ್ದರಿಂದ ಇವರ ಸ್ಪರ್ಧೆ ಹೇಗೆ ಪರಿಣಾಮ ಬೀರಲಿದೆ ಎನ್ನುವುದು ಕುತೂಹಲಕಾರಿಯಾಗಿದೆ. ಬಿಜೆಪಿಯಿಂದ ಟಿಕೆಟ್‌ ಸಿಗದೇ ಗೌರಿ ದೇವಾಡಿಗ ಅವರು ಕಾಂಗ್ರೆಸ್‌ ಬಾಗಿಲು ತಟ್ಟಿ ಅಲ್ಲಿ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿ ಅಧಿಕಾರದಲ್ಲಿದ್ದವರಿಗೆ ಮೀಸಲಾತಿ ದೆಸೆಯಿಂದ ಕೆಲವರಿಗೆ ಸ್ಪರ್ಧೆಗೆ ಅವಕಾಶ ದೊರೆಯಲಿಲ್ಲ. ಬದಲಿ ಕ್ಷೇತ್ರ ಕೇಳಿದರೂ ಕೆಲವರಿಗೆ ದೊರೆಯಲಿಲ್ಲ. ಹಾಗಾಗಿ ಒಳಗಿಂದ ಒಳಗೆ ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಇದೆ. ಇದರಲ್ಲಿ ಒಂದಷ್ಟು ಅಸಮಾಧಾನ ನಾಯಕರ ಮಧ್ಯಪ್ರವೇಶ, ಪಂಚಾಯತಿಕೆ ಮೂಲಕ ಬಗೆಹರಿಯಲಿದೆ. 

ನಾಯಕರ ಭೇಟಿ
ರಾಜಕೀಯ ಪಕ್ಷಗಳು ಈಗಾಗಲೇ ಎರಡು ಸುತ್ತಿನ ಮನೆ ಮನೆ ಭೇಟಿ ಪ್ರಚಾರ ಮುಗಿಸಿವೆ. ಕಾಂಗ್ರೆಸ್‌ ಪರವಾಗಿ ಸಚಿವೆ ಡಾ| ಜಯಮಾಲಾ ಅವರು ಆಗಮಿಸುವ ಸಾಧ್ಯತೆಯಿದೆ. ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಅವರು ಭೇಟಿ ನೀಡಿದ್ದಾರೆ. ಬಿಜೆಪಿಯಿಂದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಮನೆ ಮನೆ ಭೇಟಿ ಕೂಡ ನಡೆಸಿದ್ದಾರೆ.

ಟಾಪ್ ನ್ಯೂಸ್

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ

ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ

“ಆಟ’ಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿಗೆ ಹಕ್ಕೊತ್ತಾಯ

“ಆಟ’ಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿಗೆ ಹಕ್ಕೊತ್ತಾಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.