ಜನಸೇರಿಸುವ ಪೈಪೋಟಿಯಲ್ಲಿ ಅಭ್ಯರ್ಥಿ ಹೈರಾಣ​​​​​​​


Team Udayavani, Aug 28, 2018, 6:00 AM IST

saligrama-town-panchayat-election.jpg

ಕೋಟ: ಸಾಲಿಗ್ರಾಮದಲ್ಲಿ ಪ .ಪಂ. ಚುನಾವಣೆ ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಚುನಾವಣೆ ಕಾವು ನಿಧಾನವಾಗಿ ಏರುತ್ತಿದೆ. ಕಾರ್ಯಕರ್ತರು, ಬೆಂಬಲಿಗರ ದೊಡ್ಡ  ದಂಡಿನೊಂದಿಗೆ ಅಭ್ಯರ್ಥಿಗಳು  ಮನೆ-ಮನೆ ಪ್ರಚಾರದಲ್ಲಿ ಮಗ್ನರಾಗಿದ್ದಾರೆ. ಹಾಗೆಯೇ  ಪ್ರಚಾರಕ್ಕೆ ಜನ ಸೇರಿಸುವ ಭರಾಟೆಯಲ್ಲಿ ಅಭ್ಯರ್ಥಿಗಳು ಹೈರಾಣಾಗುತ್ತಿದ್ದಾರೆ.

ಇಂದು ಈ ಪಕ್ಷ – ನಾಳೆ ಆ ಪಕ್ಷ
ಮತಬೇಟಿಗೆ ತಮ್ಮ ತಂಡವನ್ನು ಸೇರಿಕೊಳ್ಳುವಂತೆ ಪ್ರತಿ ಮನೆಗಳಿಗೆ ತೆರಳಿ  ಆಹ್ವಾನ ನೀಡಲಾಗುತ್ತದೆ. ಅಭಿಮಾನ, ಆಮಿಷ, ಮುಲಾಜಿಗೆ ಕಟ್ಟುಬಿದ್ದು  ಒಂದು ಪಕ್ಷದ ಪರ ಪ್ರಚಾರದಲ್ಲಿ ಭಾಗವಹಿಸಿದರೆ, ಸಂಜೆ ಎದುರಾಳಿ ಪಕ್ಷದವರು ಆ ಮನೆಗೆ ಬಂದು ನಮ್ಮಿಂದ ಏನು ಅನ್ಯಾಯವಾಗಿದೆ. ಯಾಕೆ ಆ ಪಕ್ಷದವರ ಜತೆ ಗುರುತಿಸಿಕೊಂಡಿದ್ದೀರಿ. ದಯವಿಟ್ಟು ನಮ್ಮ ಜತೆಗೂ ಬನ್ನಿ  ಎಂದು ಮತ್ತೆ  ಆಸೆ, ಆಮಿಷ, ಒತ್ತಡಗಳನ್ನು ಹೇರುತ್ತಾರೆ. ಹೀಗಾಗಿ ಹಿಂದಿನ ದಿನ ಆ ಪಕ್ಷದ ಪರ ಪ್ರಚಾರ ನಡೆಸಿದವರು, ಮಾರನೇ ದಿನ ಮತ್ತೂಂದು ಪಕ್ಷದ ಜತೆ  ಪ್ರಚಾರದಲ್ಲಿ ಭಾಗಿಯಾಗುವ ಸನ್ನಿವೇಶಗಳು ಕೆಲವು ಕಡೆ ಕಂಡುಬರುತ್ತಿದೆ. ನಾವು ಪ್ರಚಾರಕ್ಕೆ ಎರಡು ಕಡೆಯವರ ಜತೆ ಬರ್ತೇವೆ ಆದ್ರೆ ಓಟು ನಿಮಗೇ ಹಾಕ್ತೇವೆ ಎಂದು ಮೊದಲೇ ಭರವಸೆ ನೀಡಿ ಎರಡು ಪಕ್ಷಗಳಿಂದ ಲಾಭಪಡೆಯುವ ಬುದ್ಧಿವಂತರೂ ಇದ್ದಾರೆ.

ಒಟ್ಟಾರೆ ಐನೂರರಿಂದ- ಸಾವಿರ ದೊರೆಗಿನ ಹಣ, ಊಟ ಸಿಗುವುದರಿಂದ ಕೆಲವು ಮಂದಿಗೆ ಚುನಾವಣೆ ಎನ್ನುವುದು ಹಬ್ಬದಂತಾಗಿದೆ. ಇದರ ಜತೆಗೆ ಯಾವುದೇ ಆಸೆ ಆಮಿಷಗಳಿಲ್ಲದೆ  ಪಕ್ಷ ಸಿದ್ಧಾಂತ, ಅಭ್ಯರ್ಥಿಯ ಮೇಲಿನ ಅಭಿಮಾನದಿಂದ ಧರ್ಮಕ್ಕೆ  ಪ್ರಚಾರ ನಡೆಸುವವರೂ ಇದ್ದಾರೆ.

ಪ್ರತಿಷ್ಠೆಯ ಭರಾಟೆ; ಅಭ್ಯರ್ಥಿ ಹೈರಾಣ
ಪ.ಪಂ. ವ್ಯಾಪ್ತಿಯಲ್ಲಿ  ಇದುವರೆಗೆ ಯಾವುದೇ ಪಕ್ಷಗಳು ಸಭೆ, ಸಮಾವೇಶಗಳಿಗೆ ಹೆಚ್ಚು ಒತ್ತು ನೀಡಿಲ್ಲ. ಬದಲಿಗೆ 50-60ಮಂದಿಯ ತಂಡವನ್ನು ಕಟ್ಟಿಕೊಂಡು ಮತದಾರರನ್ನು ನೇರವಾಗಿ ಭೇಟಿಯಾಗುತ್ತಿದ್ದಾರೆ.  ನಮಗೆ ಹೆಚ್ಚಿನ ಜನ ಬೆಂಬಲವಿದೆ ಎನ್ನುವುದನ್ನು ತೋರಿಸಲು ಪ್ರಚಾರದ ಜನಸಂಖ್ಯೆಯೇ ಮಾನದಂಡವಾಗುತ್ತಿದೆ ಮತ್ತು ಅಕ್ಕ-ಪಕ್ಕದ ಊರುಗಳಿಂದಲು ಜನರನ್ನು ಕರೆತರಲಾಗುತ್ತದೆ.

ಪಕ್ಷೇತರವಾಗಿ ಸ್ಪರ್ಧೆ ಮಾಡಿದವರು ರಾಷ್ಟ್ರೀಯ ಪಕ್ಷಗಳಿಗಾದರೆ  ಆ ಫ‌ಂಡ್‌- ಈ ಫ‌ಂಡ್‌ ಅಂತ ಬರುತ್ತದೆ. ಆದರೆ ನಮಗೆ ಯಾವ ಫ‌ಂಡು ಬರೋದಿಲ್ಲ ಎಂದು ಆರೇಳು ಮಂದಿಯ ತಂಡದೊಂದಿಗೆ ಮನೆ-ಮನೆ ತಿರುಗಾಡುತ್ತಿದ್ದಾರೆ.
ಒಟ್ಟಾರೆ ಪ್ರತಿಷ್ಠೆ, ಜನಸೇರಿಸುವ ಭರಾಟೆಯಲ್ಲಿ ಚುನಾವಣೆಗೆ ನಿಂತ ಅಭ್ಯರ್ಥಿ ಹೈರಾಣಾಗಿದ್ದು ಚುನಾ ವಣೆಯೂ ಸಾಕು ಈ ಜನಸೇರಿಸೊ ತಾಪತ್ರೆಯೂ ಸಾಕು ಎನ್ನುವ ಮಾತು ಹೆಚ್ಚಿನ ಕಡೆಗಳಲ್ಲಿ ಕೇಳಿ ಬರುತ್ತಿದೆ.

ಆಮಿಷಗಳಿಗೆ ಬಲಿಯಾಗದಿರಿ 
ಈ ರೀತಿ ಚುನಾವಣೆಯ ಸಂದರ್ಭ ಅಭ್ಯರ್ಥಿಗಳು ಪ್ರಚಾರ, ವೋಟಿಗಾಗಿ  ಲಕ್ಷಾಂತರ ಹಣ ಸಾಲ-ಸೂಲ ಮಾಡಿ ಖರ್ಚು ಮಾಡುವುದರಿಂದ  ಜನಪ್ರತಿನಿಧಿಯಾದವನಿಗೆ  ರಾಜಕೀಯದಲ್ಲಿ  ಹಣ ಮಾಡಲು ಪ್ರೇರೇಪಣೆಯಾಗುತ್ತದೆ. ಆದ್ದರಿಂದ ಚುನಾವಣೆಯ ಸಂದರ್ಭ ಮತದಾರರು ಈ ರೀತಿ ಆಸೆ-ಆಮಿಷಗಳಿಗೆ ಬಲಿಯಾಗದೆ  ತಮ್ಮ ಇಷ್ಟದ ಅಭ್ಯರ್ಥಿಯ ಜತೆ ಪ್ರಾಮಾಣಿಕವಾಗಿ ದುಡಿದರೆ ವ್ಯವಸ್ಥೆಯನ್ನು ಸ್ವಲ್ಪಮಟ್ಟಿಗಾದರು ಸರಿಪಡಿಸಬಹುದು ಎನ್ನುವುದು ಪ್ರಜ್ಞಾವಂತ ಮತದಾರರ ಅಭಿಪ್ರಾಯವಾಗಿದೆ.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.