ಚರಂಡಿ ವ್ಯವಸ್ಥೆ : ದುರ್ವಾಸನೆಗೆ ಹೈರಾಣಾದ ಗೋಧಿಹಿತ್ಲು ನಿವಾಸಿಗರು
Team Udayavani, Aug 30, 2018, 6:00 AM IST
ಗಂಗೊಳ್ಳಿ: ಚರಂಡಿಯಿದೆ. ಆದರೆ ಮಳೆ ನೀರು ಮಾತ್ರ ಹರಿದು ಹೋಗುತ್ತಿಲ್ಲ. ಚರಂಡಿಯಲ್ಲೇ ಕಸ, ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ಶೇಖರಣೆಗೊಂಡು ಕೊಳಚೆ ನೀರು ಸಂಗ್ರಹವಾಗಿದೆ. ಇದರಿಂದ ನಿತ್ಯ ಅನೇಕ ದಿನಗಳಿಂದ ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆಯಲ್ಲಿರುವ ಗೋಧಿಹಿತ್ಲು ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ.
ಮ್ಯಾಂಗನೀಸ್ ರಸ್ತೆಯಲ್ಲಿರುವ ಗೋಧಿಹಿತ್ಲುವಿನಲ್ಲಿ ಸುಮಾರು 25ರಿಂದ 30 ಮನೆಗಳಿವೆ. ಮಳೆ ನೀರು ಹೋಗಲು ಚರಂಡಿಯಿದೆ. ಆದರೆ ಈ ಚರಂಡಿಯನ್ನು ಸರಿಯಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ಹಾಗೂ ಮಳೆಗಾಲಕ್ಕೂ ಮುನ್ನ ಸ್ವತ್ಛ ಮಾಡದ ಹಿನ್ನೆಲೆಯಲ್ಲಿ ನೀರು ಹರಿದು ಹೋಗುತ್ತಿಲ್ಲ. ಗೋಧಿಹಿತ್ಲು ಪರಿಸರದಲ್ಲಿಯೇ ಶೇಖರಣೆಯಾಗಿ ಕೊಳಚೆಯಾಗಿದೆ.
ದುರ್ವಾಸನೆಗೆಂದು ಮುಕ್ತಿ
ಚರಂಡಿಯಲ್ಲಿ ಕೊಳಚೆ ನೀರು ನಿಂತು ಈ ಗೋಧಿಹಿತ್ಲು ಪರಿಸರವಿಡೀ ದುರ್ವಾಸನೆ ಬರುತ್ತದೆ. ಇದರಿಂದ ದಿನವಿಡೀ ಇಲ್ಲಿನ ನಿವಾಸಿಗಳು ಮನೆ, ಕಿಟಕಿ ಬಾಗಿಲು ಮುಚ್ಚಿಕೊಂಡೇ ಇರಬೇಕಾದ ದುಃಸ್ಥಿತಿಯಿದೆ. ಬಾಗಿಲು ಮುಚ್ಚಿದರೂ ಈ ದುರ್ವಾಸನೆ ಮಾತ್ರ ಹೋಗುವುದಿಲ್ಲ ಎನ್ನುವುದು ಸ್ಥಳೀಯರ ಅಳಲು.
ಈ ಸಂಬಂಧ ಹಿಂದೆ ಆಗಿನ ಶಾಸಕರಿಗೂ ಮನವಿ ಕೊಟ್ಟಿದ್ದರು. ಆ ಬಳಿಕ ಚುನಾವಣೆ ಬಂದಿದ್ದರಿಂದ ಇದಕ್ಕೆ ಪರಿಹಾರ ಕಂಡಿಲ್ಲ. ಈಗಿನ ಶಾಸಕರಾದರೂ ನಮ್ಮ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಿ ಎಂಬುದು ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ.
ಸಾಂಕ್ರಾಮಿಕ ರೋಗ ಭೀತಿ
ಚರಂಡಿಯಲ್ಲಿ ಕೊಳಚೆ ನೀರು ನಿಂತು ಈ ಗೋಧಿಹಿತ್ಲು ಪ್ರದೇಶ ಸೊಳ್ಳೆ ಉತ್ಪತ್ತಿ ಕೇಂದ್ರವಾಗಿ ಮಾರ್ಪಡಾಗುತ್ತಿದೆ. ಇದರಿಂದ ಇಲ್ಲಿನ ವಾಸಿಗರಲ್ಲಿ ಸಾಂಕ್ರಾಮಿಕ ರೋಗ ಭೀತಿ ಆವರಿಸಿದೆ.
ಪರಿಶೀಲಿಸಿ ಕ್ರಮ
ಈ ಸಂಬಂಧ ಸ್ಥಳೀಯರು ಕೊಟ್ಟ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಅಲ್ಲಿಗೆ ತೆರಳಿ ಪರಿಶೀಲನೆ ನಡೆಸುತ್ತೇನೆ. ತತ್ಕ್ಷಣ ಅಲ್ಲಿನ ಜನರ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು.
– ಮಾಧವ,ಗಂಗೊಳ್ಳಿ ಪಿಡಿಒ
ನಿತ್ಯ ಸಂಕಷ್ಟ
ಊಟ ಮಾಡಲು ಕುಳಿತರೆ ಹೊರಗಿನಿಂದ ಕೆಟ್ಟ ವಾಸನೆ ಬರುತ್ತದೆ. ಊಟವು ಸರಿಯಾಗಿ ಮಾಡುವುದಕ್ಕೆ ಆಗುವುದಿಲ್ಲ. 1 ವರ್ಷದ ಮಗುವಿಗೆ ಹುಷಾರಿಲ್ಲದೆ ರಾತೋರಾತ್ರಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಯಿತು. ಮನೆಯಲ್ಲಿರುವ ಎಲ್ಲ ಮಕ್ಕಳಿಗೂ ಹುಷಾರಿಲ್ಲ. ದಿನಾ ಈ ದುರ್ವಾಸನೆಯಿಂದ ಸಂಕಷ್ಟ ಅನುಭವಿಸುತ್ತಿದ್ದೇವೆ.
– ಸಾವಿತ್ರಿ, ಅರ್ಚನಾ,ಸುಧಾ,ಸ್ಥಳೀಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Theft; 13 ರಾಜ್ಯಗಳಿಗೆ ಬೇಕಾಗಿದ್ದ ಕಳ್ಳ ಕೋಟದಲ್ಲಿ ಪೊಲೀಸರ ಬಲೆಗೆ!