ಭಾರತ್‌ ಬಂದ್‌: ಸಾರ್ವಜನಿಕರಲ್ಲಿ ಮುಂದುವರಿದ ಗೊಂದಲ


Team Udayavani, Jan 7, 2019, 8:05 PM IST

raviraj-7-1.jpg

ಕುಂದಾಪುರ: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ದೇಶದ 12 ಕಾರ್ಮಿಕ ಸಂಘಟನೆಗಳು ಜ. 8 ಹಾಗೂ 9ರಂದು ದೇಶಾದ್ಯಂತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದು ಯೂನಿಯನ್‌ಗಳು ಸಿದ್ಧತೆ ನಡೆಸಿವೆ. ತಾಲೂಕಿನಾದ್ಯಂತ ಸಿಐಟಿಯು ಸೇರಿದಂತೆ ವಿವಿಧ ಸಂಘಟನೆಗಳು ಮುಷ್ಕರ ಬೆಂಬಲಿಸುವಂತೆ ಮನವಿ ನೀಡಿವೆ.

ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ‌ ಸಾಧ್ಯತೆ
ಬಸ್‌ ಮೂಲ ಆವಶ್ಯಕತೆಯಾದ ಕಾರಣ ಸಾರ್ವಜನಿಕರಿಗೆ ತೊಂದರೆಯಾಗದಂತೆ ಓಡಿಸಬೇಕೆಂದು ಇದೆ. ಆದರೆ ಬಸ್ಸಿಗೆ ಕಲ್ಲು ಬಿದ್ದರೆ ಆಸ್ತಿ ಪಾಸ್ತಿ ನಷ್ಟ ಮಾಡಿಕೊಂಡು ವಾಹನ ಬಿಡುವಂತಿಲ್ಲ. ಆದ್ದರಿಂದ ಮೇಲಧಿಕಾರಿಗಳಿಂದ ಯಾವುದೇ ಸೂಚನೆ ಬರದಿದ್ದರೆ, ಬಸ್‌ಗೆ ಯಾವುದೇ ಹಾನಿಯಾಗುವುದಿಲ್ಲ ಎಂದಾದರೆ ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗಿಳಿಯಲಿವೆ ಎಂದು ಕುಂದಾಪುರ ಡಿಪೋ ಮ್ಯಾನೇಜರ್‌ ರಾಜೇಶ್‌ ಅವರು ತಿಳಿಸಿದ್ದಾರೆ.

ಖಾಸಗಿ ಬಸ್‌ ಇಲ್ಲ
ಈಗಾಗಲೇ ಎಲ್ಲ ಬಸ್‌ಗಳಲ್ಲಿ ಬಸ್‌ ಬಂದ್‌ ಫ‌ಲಕಗಳನ್ನು ಸಂಘಟನೆಗಳು ಹಾಕಿವೆ. ಗ್ರಾಮಾಂತರ ಪ್ರದೇಶದಿಂದ ಜನರನ್ನು ತಂದು ಪಟ್ಟಣಕ್ಕೆ ಬಿಟ್ಟ ಬಳಿಕ ಬಸ್‌ ಸಂಚಾರ ನಿಲ್ಲಿಸುವಂತಿಲ್ಲ. ಅಥವಾ ಒಮ್ಮೆ ಸಂಚಾರ ಆರಂಭಿಸಿ ನಂತರ ನಿಲ್ಲಿಸಿದರೂ ಜನರಿಗೆ ಅನನುಕೂಲವಾಗುತ್ತದೆ. ಆದ್ದರಿಂದ ಖಾಸಗಿ ಬಸ್‌ಗಳ ಓಡಾಟ ಈ ದಿನ ಇರುವುದಿಲ್ಲ ಎಂದು ಶ್ರೀ ದುರ್ಗಾಂಬಾ ಬಸ್‌ ಮಾಲಕ ಅನಿಲ್‌ ಚಾತ್ರ ತಿಳಿಸಿದ್ದಾರೆ.

ರಜೆ ಇಲ್ಲ, ಬಲವಂತವೂ ಇಲ್ಲ
ಶಾಲೆಗೆ ರಜೆ ಕೊಡುವಂತೆ ಈ ತನಕ ಯಾವುದೇ ಸುತ್ತೋಲೆ ಬಂದಿಲ್ಲ. ಆದರೆ ಬಸ್‌ ಸಂಚಾರ ಇಲ್ಲದಿದ್ದರೆ ವಿದ್ಯಾರ್ಥಿಗಳು ತೊಂದರೆ ಮಾಡಿಕೊಂಡು ಬರಬೇಕೆಂದು ಬಲವಂತವನ್ನೂ ಮಾಡಲಾಗದು. ಮೇಲಧಿಕಾರಿಗಳ ಸೂಚನೆಯಂತೆ ರಜೆ ತೀರ್ಮಾನವಾಗಲಿದೆ ಎಂದು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್‌ ಕಾಮತ್‌ ತಿಳಿಸಿದ್ದಾರೆ. 

ಹಳ್ಳಿ ಹಳ್ಳಿಗಳಿಗೆ ತೆರಳಿ ಮುಷ್ಕರ ಯಶಸ್ವಿಗೆ ಮನವಿ ಮಾಡಿದ್ದೇವೆ. ಅಂಗಡಿ ಮುಂಗಟ್ಟು ಮುಚ್ಚಿ ಬೆಂಬಲ ನೀಡಬೇಕೆಂದು ವರ್ತಕರಲ್ಲಿ ಕೇಳಿಕೊಂಡಿದ್ದೇವೆ. ರಿಕ್ಷಾ, ಗೂಡ್ಸ್‌ ವಾಹನಗಳು, ಖಾಸಗಿ ಬಸ್‌ಗಳು ಬೆಂಬಲ ನೀಡಿವೆ. ಕಾರ್ಮಿಕರು ಕೂಡಾ ಬೆಂಬಲ ನೀಡಿದ್ದಾರೆ. ಆದ್ದರಿಂದ ಮುಷ್ಕರ ಯಶಸ್ವಿಯಾಗಲಿದೆ ಎಂದು ಸಿಐಟಿಯು ಕಾರ್ಯದರ್ಶಿ ಸುರೇಶ್‌ ಕಲ್ಲಾಗರ ತಿಳಿಸಿದ್ದಾರೆ.

ಬೇಡಿಕೆಗಳು
ಕನಿಷ್ಠ ವೇತನ 18 ಸಾವಿರ ರೂ. ನೀಡಬೇಕು, ಬೆಲೆ ಏರಿಕೆ ತಡೆಗಟ್ಟಬೇಕು, ಹೊಸ ಉದ್ಯೋಗ ಸೃಷ್ಟಿ ಮಾಡಬೇಕು, ಕಾರ್ಮಿಕ ಕಾನೂನುಗಳು ಕಾರ್ಮಿಕರ ಪರವಾಗಿರಬೇಕು, ಅಂಗನವಾಡಿ, ಬಿಸಿಯೂಟ ಮೊದಲಾದ ಸ್ಕೀಂ ನೌಕರರನ್ನು ಖಾಯಂ ಉದ್ಯೋಗಿಗಳಾಗಿಸಬೇಕು, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಸಲ್ಲದು, ಬ್ಯಾಂಕ್‌ ವಿಲೀನ ಸಲ್ಲದು, ಮೋಟಾರು ವಾಹನ ಕಾಯ್ದೆ ಮಾರಕವಾಗಿ ತಿದ್ದುಪಡಿ ಸಲ್ಲದು ಮೊದಲಾದ ಬೇಡಿಕೆಗಳಿವೆ. ಜತೆಗೆ ಸ್ಥಳೀಯ ಬೇಡಿಕೆಗಳೂ ಸೇರಿಕೊಂಡಿವೆ. ಮರಳು ಸಮಸ್ಯೆ ನಿವಾರಣೆ, ಮೀನುಗಾರರ ಕಲ್ಯಾಣ ಮಂಡಳಿ, ಕೃಷಿ ಬಿಕ್ಕಟ್ಟು ನಿವಾರಣೆ, ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆ ಇತ್ಯಾದಿ.

ಅಂಗನವಾಡಿ ನೌಕರರ ಬೇಡಿಕೆಗಳಿಗೆ ರಾಜ್ಯ ಸಚಿವರು 1 ವಾರದಲ್ಲಿ ಈಡೇರಿಸುವ ಭರವಸೆ ನೀಡಿ ಗೌರವಧನ ಬಿಡುಗಡೆ ಮಾಡುವುದಾಗಿ ಹೇಳಿದ ಕಾರಣ ಅಂಗನವಾಡಿ ನೌಕರರ ಬೆಂಬಲ ಇಲ್ಲ. ಆ ದಿನಗಳಲ್ಲಿ ಅಂಗನವಾಡಿ ತೆರೆದಿರುತ್ತದೆ ಎಂದು ಕಾರ್ಯಕರ್ತೆಯರ, ಸಹಾಯಕಿಯರ ಸಂಘದ ಪ್ರಕಟನೆ ಹೇಳಿದೆ.

ಕಾರ್ಕಳದಲ್ಲಿ ಮಿಶ್ರ ಪ್ರತಿಕ್ರಿಯೆ ಸಾಧ್ಯತೆ
ಕಾರ್ಕಳ:
ಹಲವು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಜ. 8 ಹಾಗೂ 9ರಂದು ಕರೆ ನೀಡಿರುವ ಭಾರತ್‌ ಬಂದ್‌ಗೆ ಕಾರ್ಕಳ ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆ ಇದೆ. ಖಾಸಗಿ ಬಸ್ಸುಗಳು ಹಾಗೂ ಇತರ ಬಸ್ಸುಗಳು ಓಡಾಟವಿದ್ದರೆ ಮಾತ್ರ ನಗರದಲ್ಲಿ ಜನಸಂಚಾರ ಇರುತ್ತದೆ. ಹೀಗಾಗಿ ಜನಸಂಚಾರವಿದ್ದರೆ ಮಾತ್ರ ನಮಗೆ ವ್ಯಾಪಾರ ವಹಿವಾಟು ಆಗುವ ಸಾಧ್ಯತೆಯಿದ್ದು, ಇಲ್ಲದಿದ್ದರೆ ನಾವು ಸಹಜವಾಗಿಯೇ ಬಂದ್‌ ಮಾಡಬೇಕಾಗುತ್ತದೆ ಎನ್ನುತ್ತಾರೆ ಕೆಲವು ವ್ಯಾಪಾರಸ್ಥರು.

ಕಾರ್ಕಳ ಆಟೋ ಚಾಲಕರ ಸಂಘ ಬಂದ್‌ಗೆ ಪರೋಕ್ಷವಾಗಿ ಬೆಂಬಲ ನೀಡಲಿದೆ. ಆದರೆ ಪಾರ್ಕಿಂಗ್‌ನಲ್ಲಿ ಆಟೋಗಳು ಸೇವೆಗೆ ಲಭ್ಯವಿರಲಿವೆೆ. ಸಂಘವು ಯಾವುದೇ ನಿರ್ಧಾರ ಕೈಗೊಂಡು ಪ್ರಕಟಿಸಿಲ್ಲ. ಹೀಗಾಗಿ ವೈಯಕ್ತಿವಾಗಿ ಬೆಂಬಲ ನೀಡುವವರು ಪಾರ್ಕಿಂಗ್‌ ಮಾಡದೇ ಇರಬಹುದೆಂದು ತಾ| ರಿಕ್ಷಾ ಚಾಲಕ ಮಾಲ ಕರ ಸಂಘದ ಕಾರ್ಯದರ್ಶಿ ಸಂತೋಷ್‌ ರಾವ್‌ ತಿಳಿಸಿದ್ದಾರೆ. ಆಸ್ಪತ್ರೆ, ಮೆಡಿಕಲ್‌ಗ‌ಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಹೋಟೇಲ್‌ಗ‌ಳು ಹೆಚ್ಚಾಗಿ ಬಂದ್‌ ದಿನದ ಪರಿಸ್ಥಿತಿ ನೋಡಿ, ನಿರ್ಣಯ ತೆಗೆದುಕೊಳ್ಳಲಿವೆ. ಬ್ಯಾಂಕ್‌ ಸೇವೆ ಲಭ್ಯವಿರಲಿದೆ. ತಾಲೂಕಿನ ಸಿಐಟಿಯು ಘಟಕ ಹಾಗೂ ಇಂಟಕ್‌ ಬಂದ್‌ಗೆ ಪೂರ್ಣ ಬೆಂಬಲ ನೀಡಲಿವೆ.

ಯಾವುದೆಲ್ಲ  ಬೆಂಬಲ
ದೇಶದ 10 ಪ್ರಮುಖ ಕೇಂದ್ರ ಕಾರ್ಮಿಕ ಸಂಘಗಳು, 50ಕ್ಕೂ ಹೆಚ್ಚು ಸ್ವತಂತ್ರ ನೌಕರರ ಒಕ್ಕೂಟಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. ಸಿಐಟಿಯು, ರಿಕ್ಷಾ ಚಾಲಕರ ಸಂಘ, ಗೂಡ್ಸ್‌ವಾಹನ ಮಾಲಕ ಚಾಲಕರ ಸಂಘ, ಖಾಸಗಿ ಬಸ್‌ಗಳ ನೌಕರರು ಬೆಂಬಲ ನೀಡಿದ್ದಾರೆ.

ಯಾವುದೆಲ್ಲ ಬಂದ್‌
ಖಾಸಗಿ ಬಸ್‌ಗಳಲ್ಲಿ ಬಸ್‌ ಬಂದ್‌ ಎಂದು ಫ‌ಲಕ ಅಳವಡಿಸಲಾಗಿದೆ. ಜತೆಗೆ ರಿಕ್ಷಾ, ಗೂಡ್ಸ್‌ ವಾಹನಗಳಲ್ಲಿ ಬಂದ್‌ ಫ‌ಲಕ ಇದೆ. ಶಾಲೆ, ಕಾಲೇಜುಗಳಿಗೆ ರಜೆ ಕುರಿತು ಯಾವುದೇ ನಿರ್ಧಾರವಾಗಿಲ್ಲ. ಸರಕಾರಿ ಬಸ್‌ ನೌಕರರ ಬೆಂಬಲ ಇದ್ದರೂ ದ.ಕ. ಉಡುಪಿಯಲ್ಲಿ ಬಸ್‌ಗಳ ಓಡಾಟ ಕುರಿತು ಸ್ಪಷ್ಟ  ತೀರ್ಮಾನವಾಗಿಲ್ಲ. ಬಿಎಂಎಸ್‌ ಕಾರ್ಮಿಕ ಸಂಘಟನೆ ಮುಷ್ಕರಕ್ಕೆ ಬೆಂಬಲ ನೀಡಿಲ್ಲ.ಆದ್ದರಿಂದ ಆ ಸಂಘಟನೆಯ ರಿಕ್ಷಾಗಳು ಓಡಾಡಲಿವೆ.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.